ಬೆಂಗಳೂರಲ್ಲಿ ಓರ್ವ ಶಂಕಿತ ಉಗ್ರ ಸೇರಿ ಇಬ್ಬರು ವಶ
ಬೆಂಗಳೂರು, ಜ. 16: ರಾಜ್ಯದಲ್ಲಿ ಈಚೆಗೆ ಸಿಕ್ಕಿಬಿದ್ದಿರುವ ನಾಲ್ವರು ಶಂಕಿತ ಉಗ್ರರ ಹೇಳಿಕೆಯನ್ನು ಆಧರಿಸಿ ಬೆಂಗಳೂರಿನಲ್ಲಿ ಓರ್ವ ಶಂಕಿತ ಹಾಗೂ ಇನ್ನೋರ್ವನನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಂಕಿತ ಡೆನ್ಮಾರ್ಕ್ ಪ್ರಜೆ ಎನ್ನಲಾಗಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಈತ ರಜೆಗಾಗಿ ಇಲ್ಲಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಬೆಂಗಳೂರಿನ ಬಿಟಿಎಂ ಲೇ ಔಟ್ನಲ್ಲಿದ್ದ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಬಂದಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. [ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]
ಉಗ್ರರ ಸಂಚಿನಲ್ಲಿ ಭಾಗಿಯೇ? : ಭಟ್ಕಳ ಹಾಗೂ ಬೆಂಗಳೂರಿನಲ್ಲಿ ಈಚೆಗೆ ಬಂಧಿಸಿರುವ ನಾಲ್ವರು ಶಂಕಿತ ಇಂಡಿಯನ್ ಮುಜಾಹಿದೀನ್ ಉಗ್ರರು ರೂಪಿಸಿದ್ದರು ಎನ್ನಲಾದ ಬಾಂಬ್ ಸ್ಫೋಟದ ಸಂಚಿನಲ್ಲಿ ಈ ಡೆನ್ಮಾರ್ಕ್ ಪ್ರಜೆಯೂ ಭಾಗವಹಿಸಿದ್ದ ಹಾಗೂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಪೊಲೀಸರು ಅನುಮಾನಿಸಿದ್ದಾರೆ. [ಶಂಕಿತರಲ್ಲಿ ಓರ್ವ ಎಂಬಿಎ ವಿದ್ಯಾರ್ಥಿ]
ಒಂದು ವೇಳೆ ಆತ ಉಗ್ರರ ಸಂಚಿನಲ್ಲಿ ಭಾಗವಹಿಸಿದ್ದರೆ ಪ್ರಸ್ತುತ ಸೌದಿಯಲ್ಲಿದ್ದಾನೆ ಎನ್ನಲಾದ ಸುಲ್ತಾನ್ ಅರ್ಮರ್ ಕುರಿತು ಕೂಡ ವಿಚಾರಣೆ ನಡೆಸುವ ಯೋಚನೆಯನ್ನು ಪೊಲೀಸರು ಹೊಂದಿದ್ದಾರೆ. [ಐಎಸ್ಐಎಸ್ ನೇಮಕಾತಿಯ ಕೊಂಡಿ ಸುಲ್ತಾನ್]
ಪೊಲೀಸರು ವಶಕ್ಕೆ ಪಡೆದಿರುವ ಮತ್ತೋರ್ವನ ಹೆಸರು ಸಾವನ್. ಪ್ರಕರಣದಲ್ಲಿ ಈತನ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.