ಆ.12ರ ಪ್ರಮುಖ ರಾಜಕೀಯ ವಿದ್ಯಮಾನಗಳು ಹೀಗಿವೆ..
ಬೆಂಗಳೂರು ಆಗಸ್ಟ್ 12: 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಗರದಲ್ಲಿ ವಿವಿಧ ಕಾರ್ಯಕ್ರಮ ಹಾಗೂ ರಾಜಕೀಯ ನಾಯಕರ ಇನ್ನಿತರ ಕಾರ್ಯಕ್ರಮಗಳ ಮಾಹಿತಿ ಹೀಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗ್ಗೆ 10: ಆಕಾಶವಾಣಿ ದೂರದರ್ಶನ ವಾಹಿನಿಗೆ 75ನೇ ಸ್ವಾತಂತ್ರ್ಯೋತ್ಸವ 2022ಸಂದೇಶ ಧ್ವನಿ ಮುದ್ರಣ, ಸ್ಥಳ- ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಬೆಳಗ್ಗೆ 11:ಸಚಿವ ಸಂಪುಟ ಸಭೆ, ಸ್ಥಳ: ಸಚಿವ ಸಂಪುಟ ಸಭಾಂಗಣ, ವಿಧಾನಸೌಧ, ಬೆಂಗಳೂರು.
ಮಧ್ಯಾಹ್ನ 01: ಭಾರತ ದಂಡ ಸಂಹಿತೆ, ದಂಡ ಪ್ರಕಿಯೆ ಸಂಹಿತೆ ಮತ್ತು ಸಾಕ್ಷ್ಯ ಅಧಿನಿಯಮಗಳ ದ್ವಿಭಾಷಾ ಕನ್ನಡ ಆವೃತ್ತಿಗಳ ಲೋಕಾರ್ಪಣೆ ಸಮಾರಂಭ, ಸ್ಥಳ: ಸಮ್ಮೇಳನ ಸಭಾಂಗಣ, ಕೊಠಡಿ ಸಂಖ್ಯೆ 334, ವಿಧಾನಸೌಧ , ಬೆಂಗಳೂರು.
ಮಧ್ಯಾಹ್ನ 3.30: ಬಿಇಎಲ್, ಎಚ್ಎಎಲ್ ಅಧ್ಯಕ್ಷರೊಂದಿಗೆ ಚರ್ಚೆ, ಸ್ಥಳ:ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಸಂಜೆ 4.30: ಸಚಿವ ಸಂಪುಟ ಉಪಸಮಿತಿ ಸಭೆ, ಸ್ಥಳ- ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಬೆಂಗಳೂರು.
ಸಂಜೆ 06: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 'ಶ್ರೀ ನುಲಿಯ ಚಂದಯ್ಯ ಜಯಂತಿ' ಕಾರ್ಯಕ್ರಮ ಉದ್ಘಾಟನೆ, ಸ್ಥಳ- ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಂಗಳೂರು.
ಬಿಬಿಎಂಪಿ
ಮಧ್ಯಾಹ್ನ 02: ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ "ಮುಖ್ಯ ಆಯುಕ್ತರ ನಡೆ ವಲಯದ ಕಡೆ", ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸ್ಥಳ- ರಾಜರಾಜೇಶ್ವರಿ ನಗರ ವಲಯ.
ಬೆಳಗ್ಗೆ 10: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮ, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗಿ, ಸ್ಥಳ: ಆರ್ಎಂಝಡ್ ಗ್ಯಾಲೇರಿಯಾ ಮಾಲ್, ಯಲಹಂಕ ಉಪನಗರ ಪೊಲೀಸ್ ಠಾಣೆ ಮುಂಭಾಗ, ಬೆಂಗಳೂರು.
ಸಂಜೆ 05: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮ, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗಿ, ಸ್ಥಳ: ಗೋಪಾಲನ್ ಮಾಲ್ ಆರ್ಕೇಡ್, ಆರ್.ಆರ್.ನಗರ, ಬೆಂಗಳೂರು.
ಆಮ್ ಆದ್ಮಿ ಪಾರ್ಟಿ
ಮಧ್ಯಾಹ್ನ 12.30: ಭ್ರಷ್ಟಾಚಾರ ನಿಗ್ರಹ ದಳ ರದ್ದತಿ: ಲೋಕಾಯುಕ್ತ ಕಚೇರಿಯ ಮುಂದೆ ಸಿಹಿ ಹಂಚಿ ಸಂಭ್ರಮಾಚರಣೆ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮುಖಂಡರು ಭಾಗಿ, ಸ್ಥಳ: ಲೋಕಾಯುಕ್ತ ಕಚೇರಿ, ಮುಂದೆ, ಬೆಂಗಳೂರು.
ಪ್ರತಿಭಟನೆ
ಬೆಳಗ್ಗೆ 11.30: ಜನತಾ ಪಕ್ಷ ವತಿಯಿಂದ 'ಹರ್ ಘರ್ ತಿರಂಗಾ- ನಮ್ಮ ದೇಶದ ರಾಷ್ಟ್ರಧ್ವಜವನ್ನು ಪಾವಿತ್ರ್ಯವನ್ನು ಉಳಿಸಿ' ಹಾಗೂ ನಕಲಿ ದೇಶ ಪ್ರೇಮಿಗಳು ತೊಲಗಿಸಿ' ಘೋಷ ವಾಕ್ಯದಡಿ ಪ್ರತಿಭಟನೆ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಭಾಗಿ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಕೆ.ಆರ್.ವೃತ್ತದ ಬಳಿ, ಬೆಂಗಳೂರು.
Recommended Video