2,000 ಎಕರೆಯಲ್ಲಿ ಟೌನ್ಶಿಪ್ ನಿರ್ಮಾಣ ಮಾಡಲಿದೆ ಕರ್ನಾಟಕ ಗೃಹ ಮಂಡಳಿ
ಬೆಂಗಳೂರು, ನ. 22: ಕರ್ನಾಟಕ ಗೃಹ ಮಂಡಳಿಯು 2023 ರ ಮಧ್ಯಭಾಗದಲ್ಲಿ ಬೆಂಗಳೂರಿನಲ್ಲಿ 2,000 ಎಕರೆ ಟೌನ್ಶಿಪ್ ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023 ರ ಮಧ್ಯಭಾಗದಲ್ಲಿ ಬೆಂಗಳೂರಿನ ನೈಋತ್ಯ ಭಾಗದಲ್ಲಿ ಮೈಸೂರು ರಸ್ತೆಯ ಪಕ್ಕದಲ್ಲಿ ಗೃಹ ಮಂಡಳಿಯು 2,000 ಎಕರೆ ಪ್ರದೇಶದಲ್ಲಿ ಟೌನ್ಶಿಪ್ ನಿರ್ಮಿಸುತ್ತದೆ. ಇದಕ್ಕೆ ಈಗಾಗಲೇ ಭೂಮಿಯನ್ನು ಗುರುತಿಸಲಾಗಿದ್ದು, ಮೇ 2023 ರ ನಂತರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನೊಂದು ಕಡೆ 1,000 ಎಕರೆ ಟೌನ್ಶಿಪ್ನ ನಿರ್ಮಾಣವು ಬಹುತೇಕ ಅಂದರೆ ಶೇಕಡಾ 50 ರಷ್ಟು ಪೂರ್ಣಗೊಂಡಿದೆ. ಟೌನ್ಶಿಪ್ಗಾಗಿ ವಸತಿ ಅಪಾರ್ಟ್ಮೆಂಟ್ ಹಂಚಿಕೆ ಮಾರ್ಚ್ 2023 ರಲ್ಲಿ ಪ್ರಾರಂಭವಾಗುತ್ತದೆ. ವಾಣಿಜ್ಯ ಅಭಿವೃದ್ಧಿಗಾಗಿ ಇ-ಹರಾಜು ಜೂನ್ 2023 ಕ್ಕೆ ನಿಗದಿಪಡಿಸಲಾಗಿದೆ.
ಒಟ್ಟಾರೆ, ಕರ್ನಾಟಕ ಹೌಸಿಂಗ್ ಬೋಡ್ 2023 ರ ಅಂತ್ಯದ ವೇಳೆಗೆ ಬೆಂಗಳೂರಿನ ಹಲವು ಭಾಗಗಳಲ್ಲಿ ಸುಮಾರು 4,000 ಎಕರೆ ಟೌನ್ಶಿಪ್ಗಳನ್ನು ಪ್ರಾರಂಭಿಸಲು ಯೋಜಿಸಿದೆ.

10 ಸಾವಿರಕ್ಕೂ ಹೆಚ್ಚು ವಸತಿ ಗೃಹಗಳ ನಿರ್ಮಾಣ
'ಬಿಜಿಎಸ್ ಇಂಟರ್ನ್ಯಾಷನಲ್ ಶಾಲೆಯ ಪಕ್ಕದಲ್ಲಿಯೇ ನೂತನ ಟೌನ್ಶಿಪ್ ನಿರ್ಮಾಣವಾಗಲಿದ್ದು, ಇದರಲ್ಲಿ 10 ಸಾವಿರಕ್ಕೂ ಹೆಚ್ಚು ವಸತಿ ಗೃಹಗಳೂ ಇರಲಿವೆ' ಎಂದು ಕರ್ನಾಟಕ ಗೃಹ ಮಂಡಳಿಯ ಅಧೀಕ್ಷಕ ಎಂಜಿನಿಯರ್ ಎನ್.ಸಿ.ಅರ್ಜುನ್ ಕುಮಾರ್ ಹೇಳಿದ್ದಾರೆ.
ಟೌನ್ಶಿಪ್ನ 55 ಪ್ರತಿಶತದಷ್ಟು ವಸತಿ ಜಾಗವನ್ನು ವಸತಿ ಸಂಕೀರ್ಣಗಳಿಗೆ, ಕಾರ್ನರ್ ಸೈಟ್ಗಳು (ಒಂದು ಅಥವಾ ಹೆಚ್ಚಿನ ಸ್ಥಳಗಳನ್ನು ಒಳಗೊಂಡಿರುವ ಭೂಪ್ರದೇಶ, ಎರಡು ಸಾರ್ವಜನಿಕ ರಸ್ತೆಗಳು), ಮತ್ತು ಮಧ್ಯಂತರ ಖಾಲಿ ಜಮೀನುಗಳು (ಇದನ್ನು ಮನೆ ಖರೀದಿದಾರರಿಗೆ ಹಂಚಲಾಗುತ್ತದೆ). ಟೌನ್ಶಿಪ್ನ ಉಳಿದ ಭಾಗವನ್ನು ಕಚೇರಿ ಸ್ಥಳಗಳು ಮತ್ತು ಮಾಲ್ ಸೇರಿದಂತೆ ವಾಣಿಜ್ಯ ಘಟಕಗಳಾಗಿ ಅಭಿವೃದ್ಧಿಪಡಿಸಲಾಗುವುದು. ಟೌನ್ಶಿಪ್ನಲ್ಲಿ ಆಸ್ಪತ್ರೆಗಳು ಮತ್ತು ಶಾಲೆಳು ಇರಲಿವೆ.

3BHK ಅಪಾರ್ಟ್ಮೆಂಟ್ಗೆ 45 ಲಕ್ಷ ರೂಪಾಯಿ ವೆಚ್ಚ
"ಪ್ರಸ್ತುತ, ಬೆಂಗಳೂರಿನ ಮತ್ತೊಂದು ಗೃಹ ಮಂಡಳಿ ಟೌನ್ಶಿಪ್ನಲ್ಲಿ, 2BHK ಅಪಾರ್ಟ್ಮೆಂಟ್ಗೆ 35 ಲಕ್ಷ ರೂಪಾಯಿ ಮತ್ತು 3BHK ಅಪಾರ್ಟ್ಮೆಂಟ್ಗೆ 45 ಲಕ್ಷ ರೂಪಾಯಿ ವೆಚ್ಚವಾಗಿದೆ. ಮುಂದೆ ನಿರ್ಮಾಣವಾಗಲಿರುವ ಟೌನ್ಶಿಪ್ಗಳಲ್ಲಿಯೂ ಅದೇ ವೆಚ್ಚವಾಗುತ್ತದೆ ಎಂದು ನಾವು ಅಂದಾಜು ಮಾಡಿದ್ದೇವೆ" ಎಂದಿದ್ದಾರೆ.
ಮಧ್ಯಂತರ ಸೈಟ್ಗಳಿಗೆ ಕನಿಷ್ಠ ಹಂಚಿಕೆ ವೆಚ್ಚವು ಪ್ರತಿ ಚದರ ಅಡಿಗೆ 2,000 ರೂ.ಗಿಂತ ಹೆಚ್ಚಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿಯಾದ ವಸತಿ ಪ್ರದೇಶದ 50% ರೈತರಿಗೆ
ಈ ಅಭಿವೃದ್ಧಿ ಕೆಲಸಗಳು ರೈತರಾಗಿರುವ ಭೂಮಾಲೀಕರ ಜೊತೆಗೆ ಜಂಟಿಯಾಗಿಯೇ ನಡೆಯುತ್ತದೆ ಎಂದು ಗೃಹ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
"ಕ್ಷಿಪ್ರ ನಗರೀಕರಣವಾಗುತ್ತಿರುವಾಗ ರೈತರು ತಮ್ಮ ಬಹುಪಾಲು ಭೂಮಿಯನ್ನು ನಮಗೆ ನೀಡಲು ಮುಂದೆ ಬಂದಿದ್ದಾರೆ. ಅಭಿವೃದ್ಧಿ ಹೊಂದಿದ ವಸತಿ ಪ್ರದೇಶದ 50% ಅವರಿಗೆ ನೀಡುತ್ತೇವೆ.. ಅದು ಅವರಿಗೆ ಪ್ರಯೋಜನವಾಗುತ್ತದೆ" ಎಂದು ಅಧೀಕ್ಷಕ ಎಂಜಿನಿಯರ್ ಎನ್.ಸಿ.ಅರ್ಜುನ್ ಕುಮಾರ್ ಹೇಳಿದ್ದಾರೆ.
ಜೂನ್ 2023 ರ ನಂತರ ಮಾತ್ರ ಟೌನ್ಶಿಪ್ಗಳಿಗೆ ವಾಣಿಜ್ಯ ಸ್ಥಳಗಳಿಗೆ ಇಲಾಖೆಯು ಬಿಡ್ಗಳನ್ನು ಕರೆಯುತ್ತದೆ. "ವಸತಿ ಭಾಗ ಪೂರ್ಣಗೊಂಡ ನಂತರವೇ ನಾವು ಸೈಟ್ಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತೇವೆ, ನಂತರ ವಾಣಿಜ್ಯ ಸೈಟ್ಗಳನ್ನು ಇ-ಹರಾಜು ಮಾಡುತ್ತೇವೆ. ವಾಣಿಜ್ಯ ಸ್ಥಳದ ಬೆಲೆ ಪ್ರತಿ ಚದರ ಅಡಿಗೆ 2,000 ರೂಪಾಯಿ ಇರಬಹುದು. ಆದರೆ, ಕೆಲವು ಸ್ಥಳಗಳಲ್ಲಿ ಇದು ಎರಡು ಅಥವಾ ಮೂರು ಪಟ್ಟು ಹೆಚ್ಚಾಗಬಹುದು" ಎಂದು ತಿಳಿಸಿದ್ದಾರೆ.

ಮುಂದಿನ ವರ್ಷ ಮಾರ್ಚ್ ವೇಳೆಗೆ ಅಪಾರ್ಟ್ಮೆಂಟ್ ಹಂಚಿಕೆ
ಪ್ರಸ್ತುತ, ಕರ್ನಾಟಕ ಗೃಹ ಮಂಡಳಿ ಬೆಂಗಳೂರಿನಾದ್ಯಂತ ಇತರ ಟೌನ್ಶಿಪ್ಗಳನ್ನು ಹೊಂದಿದೆ. ಅದರಲ್ಲಿ ಸೂರ್ಯನಗರ ಹಂತ 1, 300 ಎಕರೆಗಳಲ್ಲಿ ಹರಡಿದೆ. ಸೂರ್ಯನಗರ 2 ನೇ ಹಂತ 600 ಎಕರೆಗಳಲ್ಲಿ ಹರಡಿದ್ದು, ಅತ್ತಿಬೆಲೆಯಲ್ಲಿರುವ ಸೂರ್ಯನಗರ 3ನೇ ಹಂತ 1,000 ಎಕರೆಗಳಲ್ಲಿ ಹರಡಿದೆ. ಎಲ್ಲಾ ಹಂತಗಳಲ್ಲಿ 1,000 ಕ್ಕೂ ಹೆಚ್ಚು ವಸತಿ ಅಪಾರ್ಟ್ಮೆಂಟ್ಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ವಸತಿ ಪ್ಲಾಟ್ಗಳು ಮತ್ತು ಕಾರ್ನರ್ ಸೈಟ್ಗಳನ್ನು ಇನ್ನೂ ಹಂಚಿಕೆ ಮಾಡಬೇಕಾಗಿದೆ.
"ನಾವು ಈಗಾಗಲೇ 1,000 ಎಕರೆಗಳಲ್ಲಿ ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದ ಬಳಿ ಸೂರ್ಯನಗರ 4 ನೇ ಹಂತದ ಟೌನ್ಶಿಪ್ ನಿರ್ಮಾಣವನ್ನು ಶೇಕಡಾ 50 ರಷ್ಟು ಪೂರ್ಣಗೊಳಿಸಿದ್ದೇವೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷ ಮಾರ್ಚ್ ವೇಳೆಗೆ ಅಪಾರ್ಟ್ಮೆಂಟ್ ಘಟಕಗಳು ಮತ್ತು ಖಾಲಿ ಜಮೀನುಗಳನ್ನು ಹಂಚಿಕೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
(ಮಾಹಿತಿ ಕೃಪೆ- ಮನಿ ಕಂಟ್ರೋಲ್)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications