ಸೀತಾರಾಂ ಮಲ್ಲೇಶ್ವರದಿಂದ ಸ್ಪರ್ಧೆ: ಪರಂ ತಾಕೀತು

ಬೆಂಗಳೂರು, ಏಪ್ರಿಲ್ 18: ಮಲ್ಲೇಶ್ವರ ಕ್ಚೇತ್ರದಲ್ಲಿ ಸಚಿವ ಎಂ.ಆರ್. ಸೀತಾರಾಂ ಅವರಿಗೆ ಟಿಕೆಟ್ ನೀಡಿದ್ದು, ಪಕ್ಷದ ಸೂಚನೆ ಅವರು ಪಾಲಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ತಾಕೀತು ಮಾಡಿದ್ದಾರೆ.

ರೆಸಾರ್ಟ್ ವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, 170 ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿದ್ದೇವೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಮೇಲೆ ಬಿ ಫಾರಂ ಕೊಟ್ಟಿದ್ದೇವೆ ನಾಲ್ಕೈದು ಕ್ಷೇತ್ರಗಳನ್ನ ಪೆಂಡಿಂಗ್ ಇಟ್ಟಿದ್ದೇವೆ ಎಂದರು.

ಕಾಂಗ್ರೆಸ್ ಪ್ರಣಾಳಿಕೆ ವಿಚಾರ ಮೂರು ವಿಧಗಳಲ್ಲಿ ನಾವು ಪ್ರಣಾಳಿಕೆ ಮಾಡುತ್ತಿದ್ದೇವೆ ಸ್ಟೇಟ್, ರೀಜನಲ್ ,ಜಿಲ್ಲಾ ಎಂದು ವಿಭಾಗಿಸಿದ್ದೇವೆ ಕೇಂದ್ರ ಪ್ರಣಾಳಿಕೆ ಸಮಿತಿ ಪರಿಶೀಲನೆ ಬಳಿಕ ಬಿಡುಗಡೆ ಮಾಡಲಾಗುತ್ತದೆ. ಮಡಿಕೇರಿ ಅಭ್ಯರ್ಥಿ ಚಂದ್ರಮೌಳಿ ಟಿಕೆಟ್ ಘೋಷಿಸಿದೆ ಅವರ ಬಿ ಫಾರಂ ಬಗ್ಗೆ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದರು.

karnataka election: Kpcc Prez confident that Seetaram contests from Malleshwaram

ರಾಜ್ಯದಲ್ಲಿ‌ ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಸರ್ಕಾರ ಐದು‌ ವರ್ಷಗಳಲ್ಲಿ‌ ಉತ್ತಮ ಯೋಜನೆ ನೀಡಿದೆ. ಯಾವುದೇ ಹಗರಣಗಳಿಲ್ಲದೆ ನಡೆದಿದೆ. ಸಾಮಾಜಿಕ ನ್ಯಾಯ, ಅಭಿವೃದ್ಧಿ ಒಟ್ಟೊಟ್ಟಿಗೆ ಕೊಂಡೊಯ್ದಿದ್ದೇವೆ. ಸಂಪೂರ್ಣ ಯಶಸ್ವಿ ಆಡಳಿತ ನೀಡಿದ್ದೇವೆ ನಮ್ಮ ಯೋಜನೆ ರಾಜ್ಯದ ಜನರಿಗೆ ತಲುಪಿವೆ ಎಂದು ಹೇಳಿದರು.

ರಾಹುಲ್ ಪ್ರವಾಸದಲ್ಲಿದ್ದಾರೆ ದೆಹಲಿಗೆ ವಾಪಸಾದ ಬಳಿಕ ಆ ಕ್ಷೇತ್ರದ ಅಭ್ಯರ್ಥಿ ಫೈನಲ್ ಗೆದ್ದು ಬರುವ ಅಂದಾಜಿನ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ನಂಬರ್ ಒನ್ ಉದ್ಯೋಗ ನೀಡಿಕೆಯಲ್ಲೂ ಪ್ರಗತಿಸಾಧಿಸಿದ್ದೇವೆ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾದಿಸಿದ್ದೇವೆ ನೀರಾವರಿಗೆ ಹೆಚ್ಚು ಅನುದಾನ ನೀಡಿದ್ದೇವೆ. ಈ ಎಲ್ಲ ಮಾನದಂಡಗಳ ಮೂಲಕ ಚುನಾವಣೆಗೆ ಹೋಗುತ್ತಿದ್ದೇವೆ ಎಂದರು.

ಅಂಬರೀಶ್ ಜೊತೆ ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದೇವೆ, ಐದು ಕ್ಷೇತ್ರದಲ್ಲಿ ಟಿಕೆಟ್ ಸಿಗದವರು ಪ್ರತಿಭಟನೆ ನಡೆಸಿದ್ದಾರೆ ಅವರ ಮನವೊಲಿಸುವ ಕೆಲಸ ನಾನು ಮಾಡಿದ್ದೇವೆ. ಬೇರೆ ಅಭ್ಯರ್ಥಿ ಹಾಕುವ ಕೆಲಸ ಮಾಡಿದ್ದೇವೆ ಶಿವಮೂರ್ತಿಯವರಿಗೆ ಪಕ್ಷದಲ್ಲಿ‌ ಉತ್ತಮ ಸ್ಥಾನ ನೀಡಿದ್ದೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+