'ಸರ್ಕಾರ ಐಸಿಯುನಲ್ಲಿದೆ ಸ್ಪೀಕರ್ ವೆಂಟಿಲೇಟರ್ ತೆಗೆದರೆ ಸರ್ಕಾರ ಸಾಯುತ್ತೆ'
ಸರ್ಕಾರ ಐಸಿಯುನಲ್ಲಿದೆ ಸ್ಪೀಕರ್ ವೆಂಟಿಲೇಟರ್ ತೆಗೆದರೆ ಸರ್ಕಾರ ಸಾಯುತ್ತೆ: ಶಾಸಕ ನಡಹಳ್ಳಿ
ಬೆಂಗಳೂರು, ಜುಲೈ 13: ಸರ್ಕಾರದಿಂದ ಕೊಳೆತ ಹೆಣದ ವಾಸನೆ ಬರುತ್ತಿದೆ. ಒಂದೊಮ್ಮೆ ಸ್ಪೀಕರ್ ಸರ್ಕಾರದ ವೆಂಟಿಲೇಟರ್ ತೆಗೆದರೆ ಸರ್ಕಾರ ಸಾಯುತ್ತೆ ಎಂದು ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಭವಿಷ್ಯ ನುಡಿದಿದ್ದಾರೆ.
ಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶ
ಸರ್ಕಾರದ ಸದ್ಯದ ಪರಿಸ್ಥಿತಿ ಕುರಿತು ಮಾತನಾಡಿದ ಅವರು ಸರ್ಕಾರದಿಂದ ಸತ್ತು ಹೋಗಿರುವ ದೇಹದ ವಾಸನೆ ಬರುತ್ತಿದೆ. ಸ್ಪೀಕರ್ ಅದನ್ನು ಐಸಿಯುನಲ್ಲಿಟ್ಟಿದ್ದಾರೆ, ಒಂದೊಮ್ಮೆ ವೆಂಟಿಲೇಟರ್ನಿಂದ ತೆಗೆದರೆ ಸರ್ಕಾರ ಪತನಗೊಳ್ಳುತ್ತದೆ ಎಂದಿದ್ದಾರೆ.
ಎಲ್ಲಾ ವೈದ್ಯರು ಸರ್ಕಾರ ಸತ್ತು ಹೋಗಿದೆ ಎಂದು ಹೇಳಿದ್ದಾರೆ ಆದರೂ ಐಸಿಯುನಲ್ಲಿಟ್ಟು ಕೊಳೆಸಲಾಗುತ್ತಿದೆ. ಅವರು ಸರ್ಕಾರವನ್ನು ವೆಂಟಿಲೇಟರ್ನಿಂದ ಆಚೆ ತೆಗೆದ ತಕ್ಷಣ ನಾವು ರೆಸಾರ್ಟ್ ನಿಂದ ಆಚೆ ಬರುತ್ತೇವೆ ಎಂದು ತಿಳಿಸಿದರು.
ಎಚ್ಡಿಕೆ ಪರ ಸಿದ್ದರಾಮಯ್ಯ ಬೆಂಬಲಿಗರು ನಿಲ್ತಾರಾ?
14 ದಿನದ ಒಳಗೆ ಸ್ಪೀಕರ್ ಸಿಎಂಗೆ ಬಹುಮತ ಸಾಬೀತು ಮಾಡಲು ಸೂಚಿಸಬೇಕು. ಸಿಎಂ ಬಹುಮತ ಸಾಬೀತು ಮಾಡಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯರ ಬೆಂಬಲ ಬೇಕೆ ಬೇಕು ಎಂಬ ಮಾಹಿತಿ ಲಭ್ಯವಾಗಿದೆ.