Property Tax Fine: ಬೆಂಗಳೂರು ತೆರಿಗೆದಾರರ ಸ್ನೇಹಿ ಮಸೂದೆ ಅಂಗೀಕಾರ
ಬೆಂಗಳೂರು, ಫೆಬ್ರವರಿ 21: ಬೆಂಗಳೂರು ನಗರ ವ್ಯಾಪ್ತಿಯ ತೆರಿಗೆದಾರರಿಗೆ ಮಂಗಳವಾರ ವಿಧಾನಸಭೆಯಲ್ಲಿ ಮಂಡನೆಯಾದ ಮತ್ತು ಅಂಗೀಕಾರವಾದ ಮಸೂದೆಯು ಶುಭ ಸುದ್ದಿ ನೀಡಿದೆ. ಏಕೆಂದ್ರ ಆಸ್ತಿ ತೆರಿಗೆ ಮೇಲಿನ ದಂಡವನ್ನು ಶೇಕಡಾ 50 ರಷ್ಟು ಕಡಿತಗೊಳಿಸುವ ಮಸೂದೆಯನ್ನು ಸರ್ಕಾರ ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಅಂಗೀಕರಿಸಿತು. ಈ ಮೂಲಕ ತೆರಿಗೆ ಅರ್ಧ ಕಡಿತ ಅಧಿಕೃತವಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿದ್ದುಪಡಿ ಮಸೂದೆ 2024 ಎಂದು ಈ ಮಸೂದೆಗೆ ಎಂದು ಕರೆಯಲಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ನಿರ್ವಹಿಸುತ್ತಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಂಗಳವಾರ ಮಸೂದೆ ಮಂಡಿಸಿದರು. ಬಳಿಕ ಇದಕ್ಕ ಅಂಗೀಕಾರ ದೊರೆಯಿತು. ತೆರಿಗೆ ದಂಡದ ಮೊತ್ತ ಅರ್ಧಕ್ಕೆ ಇಳಿಸಲಾಯಿತು.

2,700 ಕೋಟಿ ರೂ. ಉಳಿತಾಯ
ಮಸೂದೆ ಅಂಗೀಕಾರ ಮೂಲಕ ಬೆಂಗಳೂರಿಗರು ಸರ್ಕಾರಕ್ಕೆ ಪಾವತಿಸಬೇಕಿದ್ದ ಸುಮಾರು 2,700 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಹಣವನ್ನು ಸರ್ಕಾರ ಕೈಬಿಟ್ಟಿದೆ. ಅರ್ಧಕ್ಕೆ ದಂಡದ ಮೊತ್ತಿ ಇಳಿಕೆ ಮಾಡಿದ್ದರಿಂದ ಇಷ್ಟು ಹಣ ತೆರಿಗೆದಾರರಿಗೆ ಉಳಿಯಲಿದೆ.
ಇನ್ನೂ ಬಿಬಿಎಂಪಿಯು 1000 ಕೋಟಿ ರೂಪಾಯಿ ಮೌಲ್ಯದ ದಂಡವನ್ನು ಸಂಗ್ರಹಿಸಲು ಈ ಮಸೂದೆ ದಾರಿ ಮಾಡಿಕೊಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಚೇರಿ ಹೊರಡಿಸಿದ ಹೇಳಿಕೆಯು ತಿಳಿಸಿದೆ.

ಮಸೂದೆ: 15 ಲಕ್ಷ ಜನರಿಗೆ ಪ್ರಯೋಜನ
ಸರ್ಕಾರ ಕೈಗೊಂಡ ಈ ದಂಡ ಮೊತ್ತವನ್ನು ಅರ್ಧಕ್ಕೆ ಇಳಿಸುವ ನಿರ್ಧಾರದಿಂದ ಬೆಂಗಳೂರು ನಗರವೊಂದರಲ್ಲಿಯೇ 5.51 ಲಕ್ಷ ತೆರಿಗೆ ಪಾವತಿದಾರರು, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಐದರಿಂದ ಏಳು ಲಕ್ಷ ಜನರು ಮತ್ತು ಮೂರು ಲಕ್ಷ ಭಾಗಶಃ ಆಸ್ತಿ ತೆರಿಗೆದಾರರು ಸೇರಿದಂತೆ ಒಟ್ಟು 13 ರಿಂದ 15 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಇವರೆಲ್ಲ ಈ ಮಸೂದೆ ವ್ಯಾಪ್ತಿಗೆ ಬರಲಿದ್ದಾರೆ ಎಂದರು.
ಮಸೂದೆ ಮಂಡನೆ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರು ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ಮಸೂದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲಿದೆ. ಇದಕ್ಕೆ ಬಿಜೆಪಿಯ ವಿರೋಧವಿದೆ ಎಂದು ಅವರು ತಿಳಿಸಿದರು.
ತೆರಿಗೆ ದಂಡದಿಂದ ವಿನಾಯಿತಿ
ಈ ತಿದ್ದುಪಡಿ ಮಸೂದೆಯಿಂದ ಬಡವರಿಗೆ ವಿಶೇಷ ರಿಯಾಯಿತಿ ಅವಕಾಶ ಸಿಗುತ್ತದೆ. ಸರ್ಕಾರಿ ವಸತಿ ಕಟ್ಟಡ ಹಾಗೂ ಸ್ಲಂಗಳಲ್ಲಿನ (ಕೊಳೆಗೇರಿ) ಕಟ್ಟಡಗಳಿಗೆ ಆಸ್ತಿ ತೆರಿಗೆಯ ದಂಡದಿಂದ ವಿನಾಯಿತೆ ಕೊಡಲಾಗಿದೆ. ಸ್ವಂತ ಬಳಕೆಗಾಗಿ ಇರುವ 1,000 ಚದರ ಅಡಿವರೆಗಿನ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಳಂಬಕ್ಕೆ ಪಾವತಿಸಬೇಕಿದ್ದ ದಂಡದಿಂದ ಮುಕ್ತ ನೀಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ತೆರಿಗೆದಾರರ ಸ್ನೇಹಿ ತಿದ್ದುಪಡಿ ಮಸೂದೆ: ಡಿಕೆಶಿ
ಇನ್ನೂ ಈ ಮಸೂದೆಯು, ನಗರದಲ್ಲಿನ ವಸತಿ ಮತ್ತು ಮಿಶ್ರ-ಬಳಕೆಯ ಆಸ್ತಿ ಮಾಲೀಕರು ಡೀಫಾಲ್ಟ್ ಅವಧಿಯನ್ನು ಲೆಕ್ಕಿಸದೆ ಗರಿಷ್ಠ ಐದು ವರ್ಷಗಳ ಅವಧಿಗೆ ಮಾತ್ರ ಆಸ್ತಿ ತೆರಿಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಐದು ವರ್ಷ ಮೀರಿದ ಬಾಕಿ ಪಾವತಿಗಳಿಗೆ ಸರ್ಕಾರ ಬಡ್ಡಿ ಮನ್ನ ಮಾಡಿದೆ. ಆದ್ದರಿಂದ ಇದನ್ನು ತೆರಿಗೆದಾರರ ಸ್ನೇಹಿ ತಿದ್ದುಪಡಿ ಮಸೂದೆ ಎನ್ನಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಧಿವೇಶನದಲ್ಲಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹಿಂದೆ ಅಧಿಕಾರಲ್ಲಿದ್ದ ಬಿಜೆಪಿ ಸರ್ಕಾರ ದಂಡವನ್ನು ದ್ವಿಗುಣಗೊಳಿಸಿತ್ತು. ಇದರಿಂದ ಬೆಂಗಳೂರಿನ ಆಸ್ತಿ ಮಾಲೀಕರು ಅಧಿಕ ದಂಡವನ್ನು ಪಾವತಿಸಬೇಕಾಯಿತು. ಇದು ಅವರಿಗೆಲ್ಲ ಹೊರಯಾಗಿತ್ತು ಎಂದು ಬಿಜೆಪಿ ವಿರುದ್ಧ ಆರೋಪಿಸಿ, ತಮ್ಮ ಮಸೂದೆ ತಿದ್ದುಪಡಿಯನ್ನು ಅವರು ಸಮರ್ಥಿಸಿಕೊಂಡರು.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.












Click it and Unblock the Notifications