ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯ ವಿಸ್ತಾರಕ್ ಅಭಿಯಾನಕ್ಕೆ ಪ್ರತಿ ತಂತ್ರ ಹೆಣೆದ ಕಾಂಗ್ರೆಸ್

ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆರಂಭಿಸಿರುವ ವಿಸ್ತಾರಕ್ ಅಭಿಯಾನಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರತಿತಂತ್ರ ಹೂಡಲು ನಿರ್ಧಾರ. ಸೋಮವಾರ (ಜುಲೈ 3) ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯಲ್ಲ

|
Google Oneindia Kannada News

ಬೆಂಗಳೂರು, ಜುಲೈ 4: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜುಲೈ 3ರಂದು ರಾಜ್ಯ ಬಿಜೆಪಿಯು 3500 ಸ್ವಯಂ ಕಾರ್ಯಕರ್ತರ 'ವಿಸ್ತಾರಕ್' ಪಡೆಯನ್ನು ಪಕ್ಷದ ಅಭಿಯಾನಕ್ಕಾಗಿ ನಿಯೋಜಿಸಿದ್ದು, ಇದರಿಂದ ಎಚ್ಚೆತ್ತಿರುವ ರಾಜ್ಯ ಕಾಂಗ್ರೆಸ್ ಇದಕ್ಕೆ ಪ್ರತಿತಂತ್ರ ರೂಪಿಸಿದೆ.

ರಾಜ್ಯ ಬಿಜೆಪಿಯಿಂದ 3500 ಕಾರ್ಯಕರ್ತರ 'ವಿಸ್ತಾರಕ್' ಆರಂಭರಾಜ್ಯ ಬಿಜೆಪಿಯಿಂದ 3500 ಕಾರ್ಯಕರ್ತರ 'ವಿಸ್ತಾರಕ್' ಆರಂಭ

ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ಸೇರಿದ ಕಾಂಗ್ರೆಸ್ ಪಕ್ಷದ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

Karnataka Assembly election 2018: Congress's new strategy to tackle BJP's Vistarak

ಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ಸಿ. ವೇಣುಗೋಪಾಲ್ ರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್, ಎಸ್ ಎಸ್ ಪಾಟೀಲ್, ದಿನೇಶ್ ಗುಂಡೂರಾವ್ ಮುಂತಾದವರು ಪಾಲ್ಗೊಂಡಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿಚ್ಚಳ ಬಹುಮತ!2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿಚ್ಚಳ ಬಹುಮತ!

ಸಭೆಯಲ್ಲಿ ಐದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು ಅವು ಇಂತಿವೆ.

- ಬೂತ್ ಮಟ್ಟದಲ್ಲಿ ಕಮಿಟಿಗಳನ್ನು ಪುನಾರಚಿಸುವುದು.

- ಕ್ರಿಯಾಶೀಲರಲ್ಲದ 10 ಜಿಲ್ಲಾಧ್ಯಕ್ಷರ ಬದಲಾವಣೆ.

- ಆಗಸ್ಟ್ ತಿಂಗಳೊಳಗೆ ಜಿಲ್ಲಾ ಮಟ್ಟದಲ್ಲಿ ಸಮಾವೇಶ.

- ರಾಜ್ಯ ಮಟ್ಟದಲ್ಲಿರುವ ಪಕ್ಷದ ನಾಲ್ವರು ಸಹ ಉಸ್ತುವಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮನೆ

- ಬಿಜೆಪಿ ಪಕ್ಷದ ಸಂಘಟನಾ ಚಟುವಟಿಕೆ ಮೇಲೆ ಕಣ್ಣು ಹಾಗೂ 'ವಿಸ್ತಾರಕ್' ಬಗ್ಗೆ ವಿಶೇಷ ಗಮನ.

English summary
To tackle BJP's Vistarak Abhiyan in Karnataka state in the wake of Assembly elections 2018, State Congress also designed a new strategy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X