Get Updates
Get notified of breaking news, exclusive insights, and must-see stories!

Nandini: ಕನ್ನಡಿಗರ ನಂದಿನಿ ಬೆಳೆದರೆ ನಿಮಗೇಕೆ ಉರಿ? ಉದ್ಯಮಿ ಮೋಹನ್‌ದಾಸ್‌ಪೈಗೆ ನೆಟ್ಟಿಗರ ತರಾಟೆ

ಕೆಎಂಎಫ್‌ ವಿಶ್ವಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದೆ. ಜೂನ್ ತಿಂಗಳಿನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಅಮುಲ್ ಕೂಡ ಹಲವು ತಂಡಗಳಿಗೆ ಪ್ರಾಯೋಜಕತ್ವ ನೀಡಿದ್ದು, ಈ ಬಾರಿ ನಂದಿನಿ ಕೂಡ ಈ ರೇಸ್‌ನಲ್ಲಿತ್ತು.

ಕೆಎಂಎಫ್ ನಂದಿನಿ ಅಂತಾರಾಷ್ಟ್ರೀಯ ತಂಡಗಳ ಪ್ರಾಯೋಜಕತ್ವ ಹೊಂದಿರುವುದಕ್ಕೆ ಉದ್ಯಮಿ ಮೋಹನ್‌ದಾಸ್‌ ಪೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಎಂತಹ ದೊಡ್ಡ ನಾಚಿಕೆಗೇಡಿನ ಸಂಗತಿ! ಅವರು ಕರ್ನಾಟಕದ ರೈತರಿಗೆ ಸೇರಿದ, ಕನ್ನಡಿಗರಾದ ಗ್ರಾಹಕರು ಪಾವತಿಸುವ ಹಣವನ್ನು ವಿದೇಶಿ ತಂಡಗಳಿಗೆ ಪ್ರಾಯೋಜಿಸಲು ಏಕೆ ಬಳಸುತ್ತಿದ್ದಾರೆ? ಅದು ಯಾವ ಮೌಲ್ಯವನ್ನು ನೀಡುತ್ತದೆ? ಬಡ ರೈತರಿಗೆ ಉತ್ತಮ ವೇತನ ನೀಡಿ. ಇದು ಕರ್ನಾಟಕದ ಸಹಕಾರ ಸಂಘದ ವ್ಯರ್ಥ ಪ್ರಯತ್ನವಾಗಿದೆ" ಎಂದು ಹೇಳಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ.

Kannadigas Critisize Mohandas Pai for His oppose about KMF Nandini Sponsor Scotland and Ireland

ಸಿಟ್ಟಿಗೆದ್ದ ಕನ್ನಡಿಗರು

ಮೋಹನ್ ದಾಸ್ ಪೈ ಅವರ ಪೋಸ್ಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರ ನಂದಿನಿ ಬ್ರಾಂಡ್ ಜಾಗತಿಕವಾಗಿ ಮಾರುಕಟ್ಟೆ ವಿಸ್ತರಣೆ ಮಾಡಲು ಪ್ರಯತ್ನಿಸುತ್ತಿದೆ ನಿಮಗೇಕೆ ಸಂಕಟ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಅಮುಲ್ ಕೂಡ ಸಹಕಾರಿ ಸಂಸ್ಥೆ ಅವರು ಅಫ್ಘಾನಿಸ್ತಾನ ಸೇರಿದಂತೆ ಹಲವು ತಂಡಗಳಿಗೆ ಪ್ರಾಯೋಜಕತ್ವ ನೀಡಿದರೆ ನಿಮಗೆ ಸರಿ, ಆದರೆ ಅದನ್ನೇ ಕೆಎಂಎಫ್ ಮಾಡಿದರೆ ನಿಮಗೆ ಉರಿಯುತ್ತದೆಯೇ ಎಂದು ಕೇಳಿದ್ದಾರೆ.

ನೀವೊಬ್ಬರು ಉದ್ಯಮಿಯಾಗಿ ಈ ರೀತಿ ಯೋಚನೆ ಮಾಡುತ್ತೀರಾ, ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಇದು ಪ್ರಚಾರ ತಂತ್ರವಾಗಿದೆ. ಇದರಲ್ಲೇನು ತಪ್ಪು ಎಂದು ಕೇಳಿದ್ದಾರೆ.

ಎಂಎನ್‌ವಿ ಗೌಡ ಎನ್ನುವವರು ಪ್ರತಿಕ್ರಿಯೆ ನೀಡಿ, "ನಂದಿನಿಯನ್ನು ನಿಮ್ಮ ಮನೆಗೆ ಎಂದಾದರೂ ಕರೆತಂದಿದ್ದೀರಾ? ನಿಮ್ಮ ಕೊಡುಗೆ ಏನು? ಹೌದು, ಇದು ಕರ್ನಾಟಕದ ರೈತರ ಹಣ, ಮತ್ತು ಈಗ ನಾವು ಜಾಗತಿಕವಾಗಿ ಹೋಗುತ್ತಿದ್ದೇವೆ. ಮೊದಲ ಹಂತವಾಗಿ ನಾವು ಕ್ರಿಕೆಟ್‌ಗೆ ಪ್ರಾಯೋಜಕತ್ವ ನೀಡುತ್ತಿದ್ದೇವೆ. ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ. ನಂದಿನಿಯ ಬೆಳವಣಿಗೆಗೆ ಹೆದರುತ್ತೀಯಾ? ಖಂಡಿತವಾಗಿ, ಒಂದು ದಿನ ನಾವು ನಿಮ್ಮ ಮೆಚ್ಚಿನ ಬ್ರ್ಯಾಂಡ್ ಅನ್ನು ಮೀರಿಸುತ್ತೇವೆ." ಎಂದು ಹೇಳಿದ್ದಾರೆ.

ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಮತ್ತೊಂದು ಪೋಸ್ಟ್ ಮಾಡಿರುವ ಮೋಹನ್ ದಾಸ್ ಪೈ, ಕರ್ನಾಟಕ ರಣಜಿ ತಂಡ, ಕರ್ನಾಟಕದ ಕ್ರೀಡಾಪಟುಗಳು, ಕರ್ನಾಟಕದ ಕಲಾವಿದರಿಗೆ ಏಕೆ ಪ್ರಾಯೋಜಿಸಬಾರದು? ರೈತರ ಮಕ್ಕಳು, ಬಡವರಿಗೆ ವಿದ್ಯಾರ್ಥಿವೇತನ ನೀಡಬಹುದು ಅಲ್ಲವೇ? ಕೆಎಂಎಫ್ ಅನ್ನು ಕನ್ನಡಿಗ ತೆರಿಗೆ ಪತ್ರಗಳ ಹಣ, ಸಬ್ಸಿಡಿ ಮತ್ತು ಬಜೆಟ್‌ನಿಂದ ಹೂಡಿಕೆ ಮಾಡಲಾಗುತ್ತದೆ ಆದರೆ ಯಾರಿಗೂ ತಿಳಿದಿಲ್ಲದ ವಿದೇಶಿ ತಂಡಗಳಿಗೆ ಖರ್ಚು ಮಾಡಲು ಆಯ್ಕೆ ಮಾಡುತ್ತದೆ!" ಎಂದು ಕೇಳಿದ್ದಾರೆ.

ಆದರೆ ಕೆಎಂಎಫ್‌ ಹೊಸ ಎನರ್ಜಿ ಡ್ರಿಂಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಅದರ ಮಾರುಕಟ್ಟೆ ವಿಸ್ತರಣೆಗೆ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಭಾರಿ ವಿರೋಧ ವ್ಯಕ್ತವಾದ ಬಳಿಕ ಮತ್ತೊಮ್ಮೆ ಟ್ವೀಟ್ ಮಾಡಿರುವ ಅವರು, ಎರಡು ತಂಡಗಳಿಗೆ ಪ್ರಾಯೋಜಕತ್ವ ನೀಡುವ ಅಗತ್ಯ ಏನಿತ್ತು ಎಂದು ಕೇಳಿದ್ದಾರೆ.

ಅಮೂಲ್ ಅನ್ನು ಹೊಗಳಿ ಮೋಹನ್‌ದಾಸ್ ಪೈ ಮಾಡಿದ್ದ ಹಳೆ ಟ್ವೀಟ್‌ಗಳನ್ನು ಹಂಚಿಕೊಂಡಿರುವ ಕನ್ನಡಿಗರು, ನಿಮಗೆ ಕನ್ನಡಿಗರ ಸಂಸ್ಥೆಗಳನ್ನು ಕಂಡರೆ ಹೊಟ್ಟೆ ಉರಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+