ಬೆಂಗಳೂರಿನಲ್ಲಿ ಅವಳ ಹೆಜ್ಜೆಯಿಂದ 'ಕನ್ನಡತಿ ಉತ್ಸವ'
ಬೆಂಗಳೂರು, ಡಿಸೆಂಬರ್ 05 : ಅವಳ ಹೆಜ್ಜೆ ತಂಡವು ಡಿ.8 ರಿಂದ ಮೂರು ದಿನಗಳ ಕಾಲ 'ಕನ್ನಡತಿ ಉತ್ಸವ' ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ರಂಗೋಲಿ-ಮೆಟ್ರೋ ಆರ್ಟ್ ಸೆಂಟರ್ ನಲ್ಲಿ ಆಯೋಜಿಸಿದೆ.
ಸಂವಾದಗಳು, ಜನಪದ ಸಂಗೀತ, ಸಾಕ್ಷ್ಯಚಿತ್ರ, ಹಾಸ್ಯ ಪ್ರದರ್ಶನ ಹೀಗೆ ಹಲವಾರು ವಿಭಿನ್ನ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಬರಸೆಳೆಯುವುದರಲ್ಲಿ ಸಂಶಯವಿಲ್ಲ. ಉತ್ಸವವನ್ನು ಕವಿ ಹಾಗೂ ಅಭಿನೇತ್ರಿ ಪದ್ಮಾವತಿ ರಾವ್ ಉದ್ಘಾಟಿಸಲಿದ್ದಾರೆ. ಭಾರತೀಯ ಥ್ರೋಬಾಲ್ ತಂಡದ ಕ್ಯಾಪ್ಟನ್ ಕೃಪಾ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ.

ವರ್ಣಚಿತ್ರ, ಕವಿತೆ, ಲೇಕನ ಮತ್ತು ಪುಸ್ತಕಗಳ ಪ್ರದರ್ಶನ ಮೂರು ದಿನವೂ ನಡೆಯಲಿದ್ದು, ಬೆಳಗ್ಗೆ 11 ರಿಂದ ಸಂಜೆ7 ರವರೆಗೆ ತೆರೆದಿರುತ್ತದೆ. ಕಿರು ಚಲನಚಿತ್ರಗಳು, ನೇರ ಪ್ರದರ್ಶನಗಳು ಮತ್ತು ಸಂವಾದ ಸರಣಿಯು ನಡೆಯಲಿದೆ. ಡಿಸೆಂಬರ್ ೮ರಂದು ಉದ್ಯಮಿಗಳ ಗತ್ತು ಕುರಿತು ಸಂವಾದ ನಡೆಯಲಿದೆ, ಸ್ತ್ರೀ ನಾಟಕ ಮಂಡಳಿ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ ಅದರೊಂದಿಗೆ ಕುಡಿತಿನಿಯ ಅಕ್ಕನಾಗಮ್ಮ ಅವರಿಂದ ಜನಪದ ಸಂಗೀತ ಮೂಡಿಬರಲಿದೆ.
ಡಿಸೆಂಬರ್ 9 ರಂದು ವಿಮೋಚನಾ ಸಂಸ್ಥೆಯಿಂದ 'ಸಾಂಗ್ ಆಫ್ ದಿ ಸೈಕಿ' ಸಾಕ್ಷ್ಯಚಿತ್ರ ಪ್ರದರ್ಶನ ಜರುಗಲಿದ್ದು, ಪಕ್ಷಗಳನ್ನು ಮಿತಿಮೀರಿದ ರಾಜಕೀಯ ಎಂಬ ವಿಷಯಾಧಾರಿತ ಸಂವಾದ, ಇದರೊಂದಿಗೆ ಜಿ.ಎಸ್. ಶಾರದಾ ಅವರಿಂದ ಜಾದೂ ಪ್ರದರ್ಶನ ಆಯೋಜನೆಗೊಂಡಿದೆ.
ಇನ್ನು ಕೊನೆಯ ದಿನವಾದ ಡಿಸೆಂಬರ್ 10 ರಂದು ದೀಪದ ಮಲ್ಲಿಗೆ ತಂಡದಿಂದ ರಕ್ತಾಕ್ಷಿ ನಾಟಕ ನಡೆಯಲಿದ್ದು, ಮಾರ್ಗದರ್ಶಕರನ್ನು ಹುಡುಕುತ್ತಾ ಎನ್ನುವ ವಿಷಯ ಕುರಿತು ಸಂವಾದ, ಕಾಲುವೆಯಾ ಕಾಲ ನೃತ್ಯ ದರ್ಪಣ ಹಾಗೂ ರಂಗಲಕ್ಷ್ಮೀಯರಿಂದ ಹಾಸ್ಯ ಪ್ರದರ್ಶನಗೊಳ್ಳಲಿದೆ.ಗೌಡ ದೂರು
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications