ಪ್ರೆಸ್ ಕ್ಲಬ್ ಆಫ್ ಬೆಂಗಳೂರಿಗೆ ಹೊಸ ತಂಡ
ಬೆಂಗಳೂರು, ಜೂ. 30: "ಉದಯ ಟಿವಿ" ವಾಹಿನಿಯ ವರದಿಗಾರ ಹಾಗೂ ನಿರೂಪಕ ಆರ್ ಶ್ರೀಧರ್ ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ 'ಪ್ರಜಾವಾಣಿ' ದಿನಪತ್ರಿಕೆಯ ನಿವೃತ್ತ ಮುಖ್ಯ ವರದಿಗಾರ ಇ ವಿ ಸತ್ಯನಾರಾಯಣ ಅವರಿಗಿಂತ 139 ಅಧಿಕ ಮತಗಳಿಸಿ ಜಯಶೀಲರಾಗಿದ್ದಾರೆ.
ಸದಸ್ಯರ ಸಾಮಾನ್ಯಸಭೆ ಹಾಗೂ ಆಡಳಿತಮಂಡಳಿಗೆ ಚುನಾವಣೆಗಳು ಕಬ್ಬನ್ ಪಾರ್ಕಿನಲ್ಲಿರುವ ಕ್ಲಬ್ಬಿನ ಆವರಣದಲ್ಲಿ ಭಾನುವಾರ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಖಚಾಂಜಿ ಹಾಗೂ ಆಡಳಿತ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಹೆಸರುಗಳು ಕೆಳಕಂಡಂತಿದೆ.
ಆರ್ ಶ್ರೀಧರ್ (ಅಧ್ಯಕ್ಷ), ಕಿರಣ್ ಎಚ್.ವಿ. (ಉಪಾಧ್ಯಕ್ಷ), ಸದಾಶಿವ ಶೆಣೈ ಕೆ. (ಪ್ರಧಾನ ಕಾರ್ಯದರ್ಶಿ), ಶಿವಕುಮಾರ್ ಎಂ.ಡಿ. (ಕಾರ್ಯದರ್ಶಿ), ಶಿವಪ್ರಕಾಶ್ ಎಸ್. (ಖಜಾಂಚಿ - ಅವಿರೋಧ ಆಯ್ಕೆ) : ಆಯೆಷ ಕಾನಮ್, ಶ್ಯಾಮ ಪ್ರಸಾದ್ ಎಸ್., ಬಿ.ಎನ್. ಮೋಹನ್ಕುಮಾರ್, ರಂಗನಾಥ್ ಎಚ್.ಎಸ್, ಆಲ್ಫ್ರೆಡ್ ಟೆನ್ನಿಸನ್ ಡಿ, ವಿಜಯ ಗ್ರೋವರ್ (ಎಲ್ಲರೂ ಸದಸ್ಯರು).

ಬೆಳಗ್ಗೆ 8 ಗಂಟೆಯಿಂದ ಮಧ್ಯಾನ್ಹ 2 ಗಂಟೆವರೆಗೆ ಮತದಾನಕ್ಕೆ ಅವಕಾಶವಿತ್ತು. ಮತದಾನ ಮಾಡಲು ವಿದ್ಯುನ್ಮಾನ ಯಂತ್ರ ಬಳಸಿದ್ದರಿಂದ ಫಲಿತಾಂಶ ಬೇಗ ಹೊರಬಿತ್ತು. ಬೆಂಗಳೂರು ಆಕಾಶವಾಣಿಯ ನಿವೃತ್ತ ಮುಖ್ಯ ವರದಿಗಾರ ಆರ್ ಶೇಷಚಂದ್ರಿಕ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅರ್ಹ ಮತದಾರರ ಸಂಖ್ಯೆ 764, ಚಲಾವಣೆಯಾದ ಮತಗಳು 569. ಮತದಾನ ಶೇ 74.
ಗೆಲವು ಸಾಧಿಸಿದ ನಂತರ ಅಧ್ಯಕ್ಷ ಶ್ರೀಧರ್ ಒನ್ಇಂಡಿಯ ಕನ್ನಡದ ಜತೆ ಮಾತನಾಡಿದರು. ಪತ್ರಕರ್ತ ಸಮುದಾಯಕ್ಕೆ ಕ್ಲಬ್ ಮೀಸಲಾಗಬೇಕು, ಇಸ್ಪೀಟು ಆಟ ಮತ್ತು ಮದ್ಯಪಾನಕ್ಕೆ ಮಾತ್ರ ಕ್ಲಬ್ ಇದೆ ಎಂಬ ಆರೋಪ ಅಳಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕುಟುಂಬವರ್ಗದವರನ್ನೂ ಸೆಳೆಯುವುದರತ್ತ ಗಮನಹರಿಸಲಾಗುವುದು ಎಂದರು.
ಹೊಸ ಸದಸ್ಯತ್ವ ಮುಂಜೂರು ಮಾಡುವುದಕ್ಕೆ ಇರುವ ನಿಯಮಾವಳಿಗಳನ್ನು ಸರಿಪಡಿಸುವುದರ ಜತೆಗೆ ಕೆಲವು ಹೊಸ ಕಟ್ಟುಪಾಡುಗಳನ್ನು ತರಬೇಕಾಗಿದೆ. ಚುನಾವಣೆ ಹತ್ತಿರ ಬಂದಾಗ ಹೊಸ ಸದಸ್ಯರ ಸೇರ್ಪಡೆ ಮಾಡುವ ಚಾಳಿಯಿಂದ ಓಟ್ ಬ್ಯಾಂಕ್ ಸೃಷ್ಟಿಸುವ ಅಪಾಯ ಇರತ್ತೆ. ಅದನ್ನು ಹೋಗಲಾಡಿಸುವುದು ಹಾಗೂ ಕಿರಿಯ ಸದಸ್ಯರಿಗೆ ವೃತ್ತಿಯ ಕಷ್ಟ, ಸವಾಲು ಹಾಗೂ ಅದರ ಸಂತೋಷಗಳನ್ನು ಮನನ ಮಾಡಿಸುವ ಸರಣಿ ಉಪನ್ಯಾಸ ಆಯೋಜಿಸುವ ಇರಾದೆ ಎಂದೂ ಹೇಳಿದರು.
ಕೊನೆ ಗುಟುಕು : ಈಚೀಚೆಗೆ ಮಾಧ್ಯಮ ಮಿತ್ರರು ನೌಕರಿ/ವೃತ್ತಿ ಸಂಬಂಧಿ ಕೆಲಸಗಳಿಗೆ ಅಂತರ್ಜಾಲವನ್ನು ಅವಲಂಬಿಸಿರುವುದು ಕಂಡುಬರುತ್ತಿದೆ. ಹೀಗಿರುವಾಗ, ಕ್ಲಬ್ಬಿನ ಮಾಹಿತಿ ಮತ್ತು ಆಗುಹೋಗುಗಳನ್ನು ಸದಸ್ಯರಿಗೆ ಮತ್ತು ಪತ್ರಕರ್ತ ಸಮುದಾಯಕ್ಕೆ ಏಕಕಾಲಕ್ಕೆ ತಲುಪಿಸಲು ಆನ್ ಲೈನ್ ಮಾಧ್ಯಮ ಸರಿಯಾದ ವಾಹಕ ಎನ್ನುವ ಅಂಶವನ್ನು ಕಾರ್ಯಕಾರಿ ಸಮಿತಿ ಅರಿಯಬೇಕಾಗಿದೆ.
ತನ್ನದೇ ಆದ ವೆಬ್ ಸೈಟನ್ನು ಜೀರ್ಣೋದ್ಧಾರ ಮಾಡುವ ಕೆಲಸವನ್ನು ಪ್ರೆಸ್ ಕ್ಲಬ್ಬಿನ ಹೊಸ ಆಡಳಿತ ಮಂಡಳಿ ಮೊದಲು ಮಾಡಬೇಕಾಗಿದೆ. ಹಾಗೆ ಮಾಡುತ್ತಾರೆಂಬ ಆಶಯ ನಮ್ಮದೂ ಕೂಡ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications