ಬೆಂಗಳೂರಿನಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಈಜುಕೊಳ
ಬೆಂಗಳೂರು, ಫೆಬ್ರವರಿ 3; ನಗರದ ಬ್ಯಾಟರಾಯನಪುರ ವಿದ್ಯಾರಣ್ಯಪುರ ಬಳಿಯ ಬಿ.ಇ.ಎಲ್ ಬಡಾವಣೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ ಹಾಗೂ ಬೃಹತ್ ಕ್ರೀಡಾಂಗಣ ಸಮುಚ್ಚಯವನ್ನು ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ''ಕ್ರೀಡಾ ಸಮುಚ್ಚಯವನ್ನು ಕಳೆದ 7 ವರ್ಷಗಳ ಸತತ ಪ್ರಯತ್ನದಿಂದಾಗಿ ಸುಮಾರು 16 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿದೆ. ವಿವಿಧ ಕ್ರೀಡೆಗಳಿಗೆ ಅನುಗುಣವಾಗಿ ಸುಮಾರು 18 ಎಕರೆ ವಿಶಾಲವಾದ ಪ್ರದೇಶದಲ್ಲಿ ಸುಸಜ್ಜಿತವಾಗಿ ಕ್ರೀಡಾಂಗಣ ಹಾಗೂ ಅಂತಾರಾಷ್ಟ್ರೀಯ ಈಜುಕೊಳವನ್ನು ನಿರ್ಮಿಸಿ ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ'' ಎಂದು ತಿಳಿಸಿದರು.
'ಕಸದ ಮಾಫಿಯಾ'ಗೆ ವೈಜ್ಞಾನಿಕತೆ ಟಚ್; ನೆದರ್ಲ್ಯಾಂಡ್ನಲ್ಲಿ ಅವ್ಯವಹಾರದ ಲಿಂಕ್?
''ಅಂತಾರಾಷ್ಟ್ರೀಯ ಈಜುಕೊಳ, ಬ್ಯಾಸ್ಕೆಟ್ ಬಾಲ್, ಟೆನ್ನಿಸ್ ಕೋರ್ಟ್, ಸ್ಕೇಟಿಂಗ್ ರಿಂಗ್, ಪುಟ್ಬಾಲ್, ಹ್ಯಾಂಡ್ಬಾಲ್ ಮೈದಾನ ನಿರ್ಮಿಸಲಾಗಿದ್ದು, ಈಗಾಗಲೇ 7-8 ಸಾವಿರ ಚದರ ಅಡಿ ಒಳಾಂಗಣ ಕ್ರೀಡಾಂಗಣದಲ್ಲಿ ಜಿಮ್, ಯೋಗಾ, ಹೇರೋಬಿಕ್ಸ್, ಟೇಬಲ್ ಟೆನಿಸ್, ಮಕ್ಕಳ ಕ್ರೀಡಾ ಸಾಮಾಗ್ರಿಗಳು, ಚಿಕ್ಕ ಮಕ್ಕಳಿಂದ ಇಡಿದು ವಯೋವೃದ್ದ ವಯಸ್ಸಿನವರೆಗೂ ಅನುಕೂಲವಾಗುವಂತೆ ಕ್ರೀಡಾ ಸಂಕೀರ್ಣವನ್ನು ಅಭಿವೃದ್ಧಿ ಪಡಿಸಲಾಗಿದೆ'' ಎಂದರು.
''ಕ್ರೀಡಾ ಸಮುಚ್ಚಯ ಲೋಕಾರ್ಪಣೆ ಸಲುವಾಗಿ ಇಂದು ಕ್ರೀಡಾ ಉತ್ಸವ ಆಚರಿಸಲಾಗುತ್ತಿದ್ದು, ಇದರಲ್ಲಿ ಸುಮಾರು 1500 ಮಕ್ಕಳು ಭಾಗವಹಿಸುತ್ತಿದ್ದಾರೆ. ಸದರಿ ಉತ್ಸವದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರೋತ್ಸಾಹ ಮೊತ್ತ(ಬಹುಮಾನ)ವಾಗಿ 12 ಲಕ್ಷ ರೂ. ಇಡಲಾಗಿದ್ದು, ವಿಜೇತರಿಗೆ ಪ್ರೋತ್ಸಾಹ ಮೊತ್ತವನ್ನು ಪಡೆದುಕೊಳ್ಳಲಿದ್ದಾರೆ. ಸದರಿ ಕ್ರೀಡಾಂಗಣದ ಗುಣಮಟ್ಟ ಕಾಪಾಡುವ ಸಲುವಾಗಿ ವಾರ್ಷಿಕ ನಿರ್ವಹಣೆಯನ್ನು ನೀಡಲಾಗಿದೆ, ಇದರಿಂದಾಗಿ ಸಾರ್ವಜನಿಕರು ಹೆಚ್ಚು ಉಪಯೋಗಿಸಿಕೊಂಡು ಅಂತಾರಾಷ್ಟ್ರೀಯ ಪ್ರತಿಭೆಗಳು ಹೊರಬರಲಿ'' ಎಂದು ತಿಳಿಸಿದರು.
ಮೇಯರ್ ಎಂ ಗೌತಮ್ ಕುಮಾರ್ ಅವರು ಮಾತನಾಡಿ, ""ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ಲೋಕಾರ್ಪಣೆ ಮಾಡುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ. ಒಂದೇ ಸೂರಿನಡಿ ಎಲ್ಲಾ ಕ್ರೀಡೆಗಳಿಗೆ ಅವಕಾಶವಿರುವಿದು ಬಹಳ ವಿರಳ. ಈ ಸಾಧನೆ ಮಾಡಿರುವ ಮಾನ್ಯ ಶಾಸಕರು, ಲೋಕಸಭಾ ಸದಸ್ಯರು ಹಾಗೂ ಸ್ಥಳೀಯ ನಗರಸಭಾ ಸದಸ್ಯರು ಒಟ್ಟಾಗಿ ಇಂತಹ ಅಭಿವೃದ್ಧಿ ಕಾರ್ಯಕೈಗೊಂಡಿರುವುದು ಬಹಳ ಸಂತೋಷದಾಯಕ'' ಎಂದರು.
ಈ ವೇಳೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ಸ್ಥಳೀಯ ಪಾಲಿಕೆ ಸದಸ್ಯ ಹೆಚ್.ಕುಸುಮ, ಪಾರ್ಥಿ ರಾಜನ್, ವಲಯ ವಿಶೇಷ ಆಯುಕ್ತರು ಡಾ. ರವಿಕುಮಾರ್ ಸುರಪುರ, ವಲಯ ಜಂಟಿ ಆಯುಕ್ತ ಅಶೋಕ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.