ಬೆಂಗಳೂರಿನ 50 ಜಂಕ್ಷನ್ಗಳಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಅಳವಡಿಕೆ, ಎಲ್ಲೆಲ್ಲಿ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ಎಲ್ಲಾ ರೀತಿಯ ರಸ್ತೆ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಹದ್ದಿನ ಕಣ್ಣು ಇರಿಸಿರುವ ನಗರ ಪೊಲೀಸರು ದಟ್ಟಣೆ ಇರುವ 50 ಜಂಕ್ಷನ್ಗಳನ್ನು ಐಟಿಎಂಎಸ್ ಕ್ಯಾಮಾರಗಳನ್ನು ಅಳವಡಿಸಿ ಅನುಷ್ಠಾನಕ್ಕೆ ತಂದಿದ್ದಾರೆ.
ಇದು ದಿನದ 24 ಗಂಟೆಗಳು ಹಾಗೂ ವರ್ಷದ 365 ದಿನಗಳು ಎಲ್ಲಾ ರೀತಿಯ ನಿಯಮ ಉಲ್ಲಂಘನೆಗಳಿಗಾಗಿ ಎಲ್ಲಾ ವಾಹನಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಇನ್ನು ರಸ್ತೆ ನಿಯಮ ಉಲ್ಲಂಘಿಸುವವರಿಗೆ ತಕ್ಕ ಪಾಠ ಕಲಿಸಲು ಸಂಚಾರಿ ನಿಯಮಗಳನ್ನು ಕಟ್ಟನಿಟ್ಟಾಗಿ ಜಾರಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ಬೆಂಗಳೂರು ಟ್ರಾಫಿಕ್ ಪೋಲೀಸ್ ದಾಖಲೆಗಳ ಪ್ರಕಾರ ನಗರವು ಈಗ ಸಂಪರ್ಕರಹಿತ ಜಾರಿ (ಕಣ್ಗಾವಲು ಕ್ಯಾಮೆರಾಗಳನ್ನು ಬಳಸಿ) ಮೂಲಕ 96% ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡುತ್ತಿದೆ. ಅಂಕಿಅಂಶಗಳು 2014 ರಲ್ಲಿ ಕೇವಲ 38% ಎಂದು ತೋರಿಸುತ್ತವೆ, ಇದು 2020 ರಲ್ಲಿ 75% (ಕೋವಿಡ್-19 ವರ್ಷ), 2021 ರಲ್ಲಿ 83.4% ಮತ್ತು 2022 ರಲ್ಲಿ 92% ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಉಲ್ಲಂಘಿಸುವವರಿಗೆ ಸ್ಮಾರ್ಟ್ ಎನ್ಫೋರ್ಸ್ಮೆಂಟ್ ಸೆಂಟರ್ ಮೂಲಕ ಚಲನ್ಗಳನ್ನು ಕಳುಹಿಸಲಾಗುತ್ತದೆ. ರಸ್ತೆ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಅನ್ನು 2022ರಲ್ಲಿ ಪರಿಚಯಿಸಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳು ಏಳು ವಿಧದ ಸಂಚಾರ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ ಮತ್ತು ವಾಹನ ಮಾಲೀಕರಿಗೆ ನಿಯಮ ಉಲ್ಲಂಘನೆಗೆ ದಂಡದ ಚಲನ್ಗಳನ್ನು ಕಳುಹಿಸುತ್ತದೆ.
ಈ ವ್ಯವಸ್ಥೆಯು ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳು ಮತ್ತು ಈ ಜಂಕ್ಷನ್ಗಳಲ್ಲಿ ಸ್ಥಾಪಿಸಲಾದ 80 ರೆಡ್ ಲೈಟ್ ಉಲ್ಲಂಘನೆ ಪತ್ತೆ (RLVD) ಕ್ಯಾಮೆರಾಗಳೊಂದಿಗೆ ಕೃತಕ ಬುದ್ದಿಮತ್ತೆಯಿಂದ ಕಾರ್ಯ ನಿರ್ವಹಿಸುತ್ತದೆ. ಈ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ ಮತ್ತು ಚಲನ್ಗಳನ್ನು ಉತ್ಪಾದಿಸುತ್ತವೆ. ಬಳಿಕ ಅವುಗಳನ್ನು SMS ಮತ್ತು ಪೇಪರ್ ಚಲನ್ಗಳ ಮೂಲಕ ಉಲ್ಲಂಘಿಸುವವರಿಗೆ ಕಳುಹಿಸಲಾಗುತ್ತದೆ.
ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಳವಡಿಸಿರುವ ಜಂಕ್ಷನ್ಗಳೆಂದರೆ, 1.8ನೇ ಮುಖ್ಯ 9ನೇ ಕ್ರಾಸ್ ಜೆಪಿ ನಗರ, 2. ಆಡುಗೋಡಿ ಮುಖ್ಯ ರಸ್ತೆ ಆಡುಗೋಡಿ ಜಂಕ್ಷನ್, 3. ಅಯ್ಯಪ್ಪ ನಗರ - ಬಟ್ಟರಹಳ್ಳಿ ರಸ್ತೆ ಬಸವನಪುರ ಕ್ರಾಸ್, 4.ಬಾಣಸವಾಡಿ 7ನೇ MN ರಸ್ತೆ, 2ನೇ ಕ್ರಾಸ್ ಓಂ ಶಕ್ತಿ ದೇವಸ್ಥಾನ, 5. ಬಾಷಾಯಂ ವೃತ್ತ ರಾಜಾಜಿನಗರ, 6. ಭಾಷ್ಯಂ ವೃತ್ತ, 7. BTM 29ನೇ ಮುಖ್ಯ AXA ಸಿಗ್ನಲ್, 8. CAL ಕ್ರಾಸ್, 9. ಚಾಮರಾಜಪೇಟೆ 5ನೇ ಮುಖ್ಯ ಬಜಾರ್ ಸ್ಟ್ರೀಟ್ ಜಂಕ್ಷನ್,
ಇದಲ್ಲದೆ 10. ಚಂದ್ರಿಕಾ ಹೋಟೆಲ್, 11. ಚಿಕ್ಕಪೇಟೆ ಟಿಪಿಎಸ್ ಜಂಕ್ಷನ್ ಆಲೂರ್ ವೆಂಕಟ ರಾವ್ ರಸ್ತೆ, 12. CMH ಆಸ್ಪತ್ರೆ ಜಂಕ್ಷನ್ JB ನಗರ, 13. ದೊಡ್ಡ ಬಾಣಸವಾಡಿ ಮುಖ್ಯ ರಸ್ತೆ 7ನೇ ಮುಖ್ಯ ರಸ್ತೆ ಜಂಕ್ಷನ್, 14. ದೋಸುಸಾ ಸರ್ಕಲ್, 15.) DR MC ಮೋದಿ ಆಸ್ಪತ್ರೆ ರಸ್ತೆ ಜಂಕ್ಷನ್, 16.) ಡಾ ರಾಜಕುಮಾರ್ ರಸ್ತೆ ಮಣಿ ಕಾಂಪ್ಲೆಕ್ಸ್, 17. ಡಾ.ರಾಜ್ಕುಮಾರ್ ಪ್ರತಿಮೆ, ಜಂಕ್ಷನ್, ದೊಮ್ಮಲೂರು,
18. DRV ಜಂಕ್ಷನ್, 19. GPO ಸರ್ಕಲ್ ರಾಜ್ ಭವನ ರಸ್ತೆ, 20. HAL ಹಳೆಯ ವಿಮಾನ ನಿಲ್ದಾಣ ರಸ್ತೆ ಲೀಲಾ ಅರಮನೆ OP ಜಂಕ್ಷನ್, 21. HAL ಹಳೆಯ ವಿಮಾನ ನಿಲ್ದಾಣ RD, ASC ಜಂಕ್ಷನ್, 22. ಹೊಸೂರು ಮುಖ್ಯ ರಸ್ತೆ ಕೋರಮಂಗಲ 80 ಅಡಿ ರಸ್ತೆ ಜಂಕ್ಷನ್, 23. ಹೊಸೂರು ಮುಖ್ಯ ರಸ್ತೆ ತಾವರೆಕೆರೆ ಮುಖ್ಯ ರಸ್ತೆ ಜಂಕ್ಷನ್, 24. ಇಂದಿರಾನಗರ ಕೆಎಫ್ಸಿ ಜಂಕ್ಷನ್, 25. ಇಂದಿರಾನಗರ, 12ನೇ ಮುಖ್ಯ ರಸ್ತೆ, HAL 2ನೇ ಹಂತ, ಜಂಕ್ಷನ್, 26. ಜೆಪಿ ನಗರ 35ನೇ ಮುಖ್ಯ ರಸ್ತೆ 15 ಕ್ರಾಸ್ ಜಂಕ್ಷನ್,
27. ಜಯನಗರ 4ನೇ ಬ್ಲಾಕ್ ಜೆಎನ್ ಜಯನಗರ ಬಸ್ ನಿಲ್ದಾಣದ ಹತ್ತಿರ, 28. ಜಯನಗರ 4ನೇ ಮುಖ್ಯ 27ನೇ ಕ್ರಾಸ್, 29. ಕೆ ಎಚ್ ರಸ್ತೆ, ಸಿದ್ದಿಯಾ ರಸ್ತೆ ಜಂಕ್ಷನ್, 30. ಕಲಾಸಿಪಾಳ್ಯ ಮುಖ್ಯ ರಸ್ತೆ ಜಂಕ್ಷನ್, 31. ಕನಕಪುರ ರಸ್ತೆ ವಾಣಿವಿಲಾಸ್ ರಸ್ತೆ ಜಂಕ್ಷನ್, 32.) ಕತ್ರಿಗುಪ್ಪೆ ವೃತ್ತ, 33. ಕೋರಮಂಗಲ ವಿಪ್ರೋ ಪಾರ್ಕ್ ಜಂಕ್ಷನ್, 34.ಕೋರಮಂಗಲ ಐಶ್ವರ್ಯ ಜಂಕ್ಷನ್, 35. ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್, 36. MG ರಸ್ತೆ ಡಿಕನ್ಸನ್ RD, ಜಂಕ್ಷನ್.
37. ಮರಿಯಪ್ಪ ವೃತ್ತ, 38. ನವರಂಗ ವೃತ್ತ, 39. ಹೊಸ ಬೆಲ್ ರಸ್ತೆ ರಾಮಯ್ಯ ಆಸ್ಪತ್ರೆ, 40. ಹಳೆಯ ಮದ್ರಾಸ್ ರಸ್ತೆ 80 ಅಡಿ ಅಡ್ಡ ರಸ್ತೆ, 41. ವಾಯುವಿಹಾರ RD ವೀಲರ್ ರಸ್ತೆ ಜಂಕ್ಷನ್, 42. ಆರ್ ಟಿ ನಗರ ತರಳುಬಾಳು ಜಂಕ್ಷನ್, 43. ಸದಾಶಿವನಗರ ಪಿಎಸ್ ಜಂಕ್ಷನ್, 44. ಸಂಪಿಗೆ ರಸ್ತೆ 18ನೇ ಅಡ್ಡ ರಸ್ತೆ, 45. ಸಂಗಮ್ ಸರ್ಕಲ್ ಜೆಪಿ ನಗರ, 46. ಶಿವಾನಂದ ಸರ್ಕಲ್ ಜಂಕ್ಷನ್, 47. ಶ್ರೀನಿವಾಸಾಗಿಲು MN RD ಗಣಪತಿ ದೇವಸ್ಥಾನ RD ಕ್ರಾಸ್ JN, 48. ಸ್ವಾಮಿ ವಿವೇಕಾನಂದ ರಸ್ತೆ, ಮರ್ಫಿ ಟೌನ್ ಜಂಕ್ಷನ್, 49.) ಟಿ ಸಿ ಪಾಳ್ಯ ಜಂಕ್ಷನ್, 50. ಶಿಕ್ಷಕರ ಕಾಲೇಜ್ ಸರ್ಕಲ್.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ಬೆಂಗಳೂರಿನಂತೆ ಇಲ್ಲಿ ಟ್ರಾಫಿಕ್ ಇಲ್ಲ, ನಮ್ಮ ಹೈದರಾಬಾದ್ ಬೆಸ್ಟ್ ಎಂದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ












Click it and Unblock the Notifications