ಯಶವಂತಪುರ, ವಾಸ್ಕೋ-ಡ-ಗಾಮಾ ವಿಶೇಷ ರೈಲು; ವೇಳಾಪಟ್ಟಿ, ನಿಲ್ದಾಣ
ಬೆಂಗಳೂರು, ಆಗಸ್ಟ್ 11; ಶನಿವಾರದಿಂದ ಆರಂಭವಾಗುವ ಸಾಲು ಸಾಲು ರಜೆ, ಸ್ವಾತಂತ್ರ್ಯ ದಿನಾಚರಣೆ 2023ರ ಸಲುವಾಗಿ ಉಂಟಾಗುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ.
ಬೆಂಗಳೂರಿನ ಯಶವಂತಪುರ ಮತ್ತು ವಾಸ್ಕೋ-ಡಾ-ಗಾಮಾ ನಡುವೆ ಸಹ ವಿಶೇಷ ರೈಲು ಓಡಿಸಲಾಗುತ್ತಿದೆ. ಬೆಂಗಳೂರು ನಗರಿಂದ ಹೊರಗೆ ಹೋಗಲು ಯೋಜನೆ ಮಾಡುತ್ತಿರುವವರು ಈ ವಿಶೇಷ ರೈಲಿನ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ಹೇಳಿದೆ.

ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಯಶವಂತಪುರ-ವಾಸ್ಕೋ-ಡಾ-ಗಾಮಾ ನಡುವಿನ 1 ಟ್ರಿಪ್ ವಿಶೇಷ ರೈಲು ಸಂಚಾರದ ಮಾಹಿತಿ ನೀಡಿದೆ. ರೈಲು ಸಂಖ್ಯೆ 07357/ 07358 ಸಂಚಾರ ನಡೆಸಲಿದೆ. ಯಶವಂತಪುರದಿಂದ ವಿಶೇಷ ರೈಲು ಆಗಸ್ಟ್ 11ರಂದು ಮತ್ತು ಆಗಸ್ಟ್ 12ರಂದು ವಾಸ್ಕೋ-ಡಾ-ಗಾಮಾ ನಿಲ್ದಾಣದಿಂದ ಹೊರಡಲಿದೆ.
ವಿಶೇಷ ರೈಲು ವೇಳಾಪಟ್ಟಿ, ನಿಲ್ದಾಣಗಳು
ರೈಲು ಸಂಖ್ಯೆ 07357 ಆಗಸ್ಟ್ 11ರಂದು ಯಶವಂತಪುರ ನಿಲ್ದಾಣದಿಂದ ಸಂಜೆ 6.15 ಗಂಟೆಗೆ ಹೊರಟು ಮರುದಿನ, ವಾಸ್ಕೋ-ಡ-ಗಾಮಾ ನಿಲ್ದಾಣವನ್ನು ಬೆಳಗ್ಗೆ 9.30ಕ್ಕೆ ತಲುಪಲಿದೆ.
ಈ ರೈಲು ತುಮಕೂರು (7:03/7:05 pm), ಅರಸೀಕೆರೆ (8:15/8:20 pm), ಬೀರೂರು (8:58/9:00 pm), ದಾವಣಗೆರೆ (10:20/10:22 pm), ಹರಿಹರ (10:36/10:38 pm), ಹಾವೇರಿ (12:03/12:05 am), ಹುಬ್ಬಳ್ಳಿ (2:00/02:10 am.), ಧಾರವಾಡ (2:38/2:40 am), ಲೋಂಡಾ (4:10/4:12 am), ಕ್ಯಾಸಲ್ರಾಕ್ (4:45/5:00 am), ಕುಲೆಮ್ (6:50/7:00 am), ಸ್ಯಾಂವೊರ್ಡೆಮ್ (7:43/ 7:44 am) ಮತ್ತು ಮಡಗಾಂವ (7:55/8:00 am)ಈ ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ರೈಲು ಸಂಖ್ಯೆ 07358 ಆಗಸ್ಟ್ 12 ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ಹೊರಟು, ಮರುದಿನ ಬೆಳಗ್ಗೆ 4:30 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಮಡಗಾಂವ (3:15/3:20 pm), ಸ್ಯಾಂವೊರ್ಡೆಮ್ (3:29/3:30 pm), ಕುಲೆಮ್ (4:00/4:05 pm), ಕ್ಯಾಸಲ್ರಾಕ್ (5:05/5:15 pm), ಲೋಂಡಾ (5:39/5:40 pm), ಧಾರವಾಡ (7:23/7:25 pm), ಹುಬ್ಬಳ್ಳಿ (8:35/8:45 pm), ಹಾವೇರಿ (9:58/10:00 pm), ಹರಿಹರ (10:43/10:45 pm), ದಾವಣಗೆರೆ (11:13/11:15 pm), ಬೀರೂರು (12:38/12:40 pm), ಅರಸೀಕೆರೆ (01:15/ 01:20 am) ಮತ್ತು ತುಮಕೂರು (2:28/2:30 am) ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ಈ ವಿಶೇಷ ರೈಲುಗಳು ಎಸಿ ಪಸ್ಟ್ ಕ್ಲಾಸ್ 1, ಎಸಿ ಟು ಟೈಯರ್ 2, ಎಸಿ ತ್ರಿ ಟೈಯರ್ 7, ಸ್ಲೀಪರ್ ಕ್ಲಾಸ್ 8 ಮತ್ತು ದಿವ್ಯಾಂಗ್ ಸ್ನೇಹಿ ಬೋಗಿಗಳಿಂದ ಕೂಡಿದ ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್ ವ್ಯಾನ್ಗಳು 2 ಸೇರಿದಂತೆ ಒಟ್ಟು 20 ಬೋಗಿ ಹೊಂದಿರಲಿದೆ.
ಬೆಂಗಳೂರು-ಕಲಬುರಗಿ ರೈಲು; ಇದೇ ಮಾದರಿಯಲ್ಲಿ 2 ಟ್ರಿಪ್ ಬೆಂಗಳೂರು ಮತ್ತು ಕಲಬುರಗಿ ನಡುವೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ರೈಲು ನಂಬರ್ 06201/ 06202 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ. ವಿಶೇಷ ರೈಲು ಬೆಂಗಳೂರಿನಿಂದ ಆಗಸ್ಟ್ 11 ಮತ್ತು 14 ರಂದು ಹೊರಡಲಿದೆ. ಆಗಸ್ಟ್ 12 ಮತ್ತು 15ರಂದು ಕಲಬುರಗಿಯಿಂದ ಹೊರಡಲಿದೆ.
ರೈಲು ಸಂಖ್ಯೆ 06201 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ರಾತ್ರಿ 10.25ಕ್ಕೆ ಹೊರಟು, ಮರುದಿನ ಬೆಳಗ್ಗೆ 9 ಗಂಟೆಗೆ ಕಲಬುರಗಿ ತಲುಪಲಿದೆ. ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್, ರಾಯಚೂರು, ಮತ್ತು ವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ರೈಲು ಸಂಖ್ಯೆ 06202 ಆಗಸ್ಟ್ 12 ಮತ್ತು 15 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 9:15 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಲುಪಲಿದೆ. ರೈಲು ವಾಡಿ, ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಮತ್ತು ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
-
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ












Click it and Unblock the Notifications