Karnataka Weather: ಹವಾಮಾನ ಇಲಾಖೆಯ ಮೈಲಿಗಲ್ಲು ಹೆಜ್ಜೆಗೆ ತೊಡಕು
ಬೆಂಗಳೂರು, ಮೇ 14: ಬೆಂಗಳೂರು ಹಾಗೂ ಕರ್ನಾಟಕದ ಹವಾಮಾನ ಮುನ್ಸೂಚನೆಯ ಚಿತ್ರಣ ಕೊಡುಗೆ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಈ ವಲಯದಲ್ಲಿ ಮತ್ತೊಂದು ಮೈಲಿಗಲ್ಲು ಸಾಧನೆಗೆ ಮುಂದಾಗಿದೆ. ಆದರೆ ಇದಕ್ಕೆ ಸಣ್ಣ ತೊಡಕು ಉಂಟಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಹವಾಮಾನ ವರದಿಯನ್ನು ತಿಳಿಸಲು ರಾಜ್ಯ ಮತ್ತು ಭಾರತೀಯ ಹವಾಮಾನ ಸಂಸ್ಥೆಗಳು (IMD) ಇವೆ. ಮುಂದಿನ ಮೂರು ದಿನದಿಂದ ಹಿಡಿದು ಐದು ದಿನಗಳ ಹವಾಮಾನ ಮುನ್ಸೂಚನೆ ಖಚಿತತೆಯನ್ನು ಹಾಲಿ ಸಂಸ್ಥೆಗಳು ನೀಡುತ್ತಿವೆ.

ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಐಎಂಡಿ ಹವಾಮಾನ ತಜ್ಞರು, ಹವಾಮಾನ ವೈಪರಿತ್ಯ, ಮಳೆ, ತಾಪಮಾನ ಇನ್ನಿತರ ವಿಷಯಗಳ ಮತ್ತಷ್ಟು ನಿಖರ ಮಾಹಿತಿಗೆ ಬೆಂಗಳೂರಿನಲ್ಲಿ 'ಡಾಪ್ಲರ್ ವೆದರ್ ರಾಡಾರ್ (DWR)' ಅಳವಡಿಕೆಗೆ ಮುಂದಾಗಿದೆ. ಆದರೆ ಈ ಸಾಧನ ಅಳವಡಿಕೆಗೆ ಹಿನ್ನಡೆ ಆಗಿದೆ ಎಂದು ವರದಿ ಆಗಿದೆ.
ಸರ್ಕಾರಿ-ಖಾಸಗಿ ಕಟ್ಟಡದವರ ಜತೆ ಮಾತುಕತೆ
'ಡಾಪ್ಲರ್ ವೆದರ್ ರಾಡಾರ್ (DWR)' ಅನ್ನು ಅತೀ ಎತ್ತರದ ಕಟ್ಟಡದ ಮೇಲೆ ಅಳವಡಿಕೆಗೆ ಐಎಂಡಿ ಯೋಜಿಸಿದೆ. ಈ ಬಗ್ಗೆ ಸರ್ಕಾರಿ ಮತ್ತು ಖಾಸಗಿ ಕಟ್ಟಡದ ಮೇಲೆ ಅಳಡಿಕೆಗೆ ಮುಂದಾಗಿದ್ದು, ಮಾಲೀಕರ ಜತೆ ಮಾತುಕತೆ ನಡೆಸಿದೆ. ಅದರೆ ನಗರದಲ್ಲಿ ಎಲ್ಲೂ ಅದಕ್ಕೆ ಸೂಕ್ತ ಜಾಗ ಸಿಕ್ಕಿಲ್ಲ. ಹೀಗಾಗಿ ಮಹತ್ವದ ಯೋಜನೆಗೆ ತಾತ್ಕಲಿಕವಾಗಿ ಹಿನ್ನಡೆ ಆಗಿದೆ.
ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಮಳೆಗಾಲ ಹಿನ್ನೆಲೆಯಲ್ಲಿ ಈ ರಾಡಾರ್ ಅಳಡವಿಕೆ ಭಾರೀ ಮಹತ್ವ ಪಡೆದಿದೆ. ಈಗಾಗಲೇ ಇದೇ ಐಎಂಡಿಯು ಗೋವಾ ಹಾಗೂ ತಮಿಳುನಾಡಿನಲ್ಲಿ ಯಶಸ್ವಿಯಾಗಿ ಅಳವಡಿಕೆ ಮಾಡಿದೆ.

ಎರಡು ಸ್ಥಳ ಪರಿಶೀಲನೆ
ಅದೇ ರೀತಿ ಬೆಂಗಳೂರಿನಲ್ಲಿ ಅಳವಡಿಕೆಗೆ ಐಎಂಡಿ ಮುಂದಾಗಿದೆ. ಈಗಾಗಲೇ ಹೆಸರಘಟ್ಟ, ಬೆಂಗಳೂರು ಕೃಷಿ ವಿದ್ಯಾಲಯ (ಜಿಕೆವಿಕೆ) ಭಾಗದಲ್ಲಿ ಪರಿಶೀಲಿಸಿರುವ ಅಧಿಕಾರಿಗಳು ಅಲ್ಲಿನ ಸ್ಥಳ ಈ ರಾಡಾರ್ ಅಳವಡಿಕೆಗೆ ಯೋಗ್ಯವಾಗಿಲ್ಲ ಎಂದು ಹೇಳಿದೆ. ಅಲ್ಲದೇ ಖಾಸಗಿ ಮತ್ತು ಸರ್ಕಾರ ಬೃಹತ್ ಕಟ್ಟಡಗಳ ಮಾಲೀಕರ ಜೊತೆಗೆ ಐಎಂಡಿ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.
ಈ ರಾಡಾರ್ ಅನ್ನು ಸುಮಾರು 25 ಅಂತಸ್ತಿನ ಕಟ್ಟಡಗಳ ಮೇಲೆ ಅಳವಡಿಸಬೇಕಿದೆ. ರಾಡಾರ್ ಇರುವ ಕಟ್ಟಡದ ಸುತ್ತಮುತ್ತ ಸುಮಾರು 40 ಮೀಟರ್ ವ್ಯಾಪ್ತಿಯಲ್ಲಿ ರಾಡಾರ್ಗೆ ಬರುವ ಎಲೆಕ್ಟ್ರಾನಿಕ್ ಸಿಗ್ನಲ್ ಬರುತ್ತವೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಯಾವುದೇ ಅಡೆತಡೆಗಳು ಇರಬಾರದು. ಅಂತಹ ಕಟ್ಟಡಗಳನ್ನು ಐಎಂಡಿ ಅಧಿಕಾರಿಗಳು ಹುಡುಕುತ್ತಿದ್ದಾರೆ. ಸದ್ಯಕ್ಕೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ರಾಡಾರ್ ನಿಂದ ಗಂಟೆ ಗಂಟೆಯ ಖಚಿತ ಮಾಹಿತಿ
ಐಎಂಡಿಯು ಈ ರಾಡಾರ್ ಅಳವಡಿಕೆ ಮಾಡಿದ ನಂತರ ಮೋಡಗಳು, ಸಿಡಿಲು, ಗಾಳಿಯ ಮಾದರಿ ಕುರಿತು ಸಂಪೂರ್ಣ ಅಧ್ಯಯನ ನಡೆಸಲಿದೆ. ಪ್ರತಿ ಗಂಟೆಯ ವ್ಯತ್ಯಾಸದಲ್ಲಿ ನಡೆಯುವ ಹವಾಮಾನ ವೈಪರಿತ್ಯಗಳ ಸ್ಪಷ್ಟತೆ ಬಗ್ಗೆ ಖಚತಿ ಮಾಹಿತಿ ನೀಡಲು, ಅಧ್ಯಯನ ಮಾಡಲು ಅನುಕೂಲವಾಗುತ್ತದೆ.
ಪ್ರಸ್ತುತದಲ್ಲಿ ಉತ್ತರ ಒಳನಾಡಿನಲ್ಲಿ ಭೂಮಿ ಮೇಲ್ಮೈನಲ್ಲಿ ಸ್ಟ್ರಫ್ ಏರ್ಪಟ್ಟಿದೆ. ಇದನ್ನು ಹವಾಮಾನ ಇಲಾಖೆ ಸುಮಾರು ನಾಲ್ಕು ದಿನಗಳ ಹಿಂದೆಯೇ ಮುನ್ಸೂಚನೆ ನೀಡಿದೆ. ಇದರಿಂದಲೇ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಬರುತ್ತಿದೆ. ಉತ್ತರ ಕರ್ನಾಟಕ ಹಾಗೂ ಇನ್ನಿತರ ಭಾಗದಲ್ಲಿ ಸಾಧಾರಣ ಮಳೆ ಆಗುತ್ತಿದೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್











Click it and Unblock the Notifications