ಈ ಶನಿವಾರ 'ಇಲ್ಲ ಅಂದ್ರೆ ಇದೆ!' ನಾಟಕ ಪ್ರದರ್ಶನ
ಸ್ತ್ರೀವಾದವೆಂದರೆ ಪುರುಷದ್ವೇಷ ಎಂಬ ತಪ್ಪು ಕಲ್ಪನೆಯಲ್ಲಿರುವ ಇಂದಿನ ಸಮಾಜಕ್ಕೆ, ಹಾಸ್ಯದ ಮೂಲಕ ಸ್ತ್ರೀಯರ ಮನದಾಳದ ಮಾತುಗಳನ್ನು ಮನಮುಟ್ಟಿಸುವ ನಾಟಕವಿದು. ಶೈಲೇಶ್ ಕುಮಾರ್ ಎಂ.ಎಂ ಅವರು ರಚಿಸಿ-ನಿರ್ದೇಶಿಸಿರುವ ನಾಟಕವು ಈಗಾಗಲೇ 54 ಪ್ರದರ್ಶನಗಳನ್ನು ಕಂಡಿದ್ದು, ಹಲವಾರು ರಾಷ್ಟ್ರೀಯ ನಾಟಕೋತ್ಸವಗಳಲ್ಲಿ, ಹೊರರಾಜ್ಯಗಳಲ್ಲಿ ಪ್ರದರ್ಶನಗೊಂಡಿದೆ. ಈ ನಾಟಕ ಈ ಶನಿವಾರ ಬೆಂಗಳೂರಿನ ಎನ್.ಆರ್.ಕಾಲೋನಿಯ ಪ್ರಭಾತ್ ಕಲಾಪೂರ್ಣಿಮದಲ್ಲಿ ಪ್ರದರ್ಶನ ಆಗುತ್ತಿದೆ.
ನಾಟಕ: ಇಲ್ಲ..ಅಂದ್ರೆ..ಇದೆ!
ರಚನೆ ಮತ್ತು ನಿರ್ದೇಶನ: ಶೈಲೇಶ್ ಕುಮಾರ್ ಎಂ.ಎಂ
ತಂಡ : ಸೈಡ್ವಿಂಗ್ (ರಿ)
ಸ್ಥಳ: ಪ್ರಭಾತ್ ಕಲಾಪೂರ್ಣಿಮ. ಎನ್.ಆರ್.ಕಾಲೋನಿ
ದಿನಾಂಕ: 2ನೇ ಫೆಬ್ರವರಿ 2019
ಸಮಯ: ಸಂಜೆ 5ಕ್ಕೆ ಮತ್ತು 7:30ಕ್ಕೆ

'ಇಲ್ಲ ಅಂದ್ರೆ ಇದೆ!' ನಾಟಕದ ಮತ್ತೊಂದು ವಿಶೇಷ ಅಂದರೆ, ಇದೊಂದು ದ್ವಿವ್ಯಕ್ತಿ ಪ್ರದರ್ಶನದ ನಾಟಕ. ಇಡೀ ನಾಟಕದಲ್ಲಿ ಇಬ್ಬರೇ ಕಲಾವಿದರು ಇರಲಿದ್ದು, ಲತಾ ಸರ್ವೇಶ್ ಹಾಗೂ ನಿತ್ಯಾ ಜೋಶಿ ನಾಟಕದಲ್ಲಿ ಅಭಿನಯಿಸಿದ್ದಾರೆ.
ನಿರ್ದೇಶಕ: ಶೈಲೇಶ್ ಕುಮಾರ್ ಎಂ.ಎಂ.
ಉದ್ಯಮಿಯಾಗಿರುವ ಶೈಲೇಶ್ ಕುಮಾರ್ ಅವರು ರಂಗಭೂಮಿಯ ಸೆಳೆತಕ್ಕೆ ಒಳಗಾಗಿ, ರಂಗಭೂಮಿಯಲ್ಲಿ ಒಂದು ವರ್ಷದ ಡಿಪ್ಲೋಮಾ ಮುಗಿಸಿ ನಂತರ 'ಸೊಂಡಲ್ ಮ್ಯಾನ್', 'ಸಲಿಲ', 'ಕಾಡ್ನಲ್ಲೊಂದೂರಿತ್ತಂತೆ' ಹೀಗೆ ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರು ರಚಿಸಿರುವ ದ್ವಿವ್ಯಕ್ತಿ ಪ್ರದರ್ಶನ 'ಇಲ್ಲ.. ಅಂದ್ರೆ.. ಇದೆ !' ನಾಟಕವು ಯಶಸ್ವಿ 54 ಪ್ರದರ್ಶನಗಳನ್ನು ಹವಾರು ನಾಟಕೋತ್ಸವಗಳಲ್ಲಿ ಕಂಡು, ರಂಗಭೂಮಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ.
ತಂಡ: ಸೈಡ್ವಿಂಗ್ (ರಿ)
ನಿರಂತರವಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ, ಸಮಾನಮನಸ್ಕರು ಸೇರಿ ಆರಂಭಿಸಿರುವ ರಂಗತಂಡ 'ಸೈಡ್ವಿಂಗ್'. ಇದು ಹೊಸ ತಂಡವಾಗಿದ್ದುಈಗಾಗಲೇ ಐದು ಬೀದಿನಾಟಕಗಳನ್ನು ಹಾಗೂ 'ಇಲ್ಯಾಡ್ಗಣ್ಣ', 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್', 'ಸಡನ್ನಾಗ್ ಸತ್ತೋದ್ರೆ?', 'ಇಲ್ಲ..ಅಂದ್ರೆ.. ಇದೆ !', 'ಸರ್ಗ' ಈ ಸಿದ್ಧ ನಾಟಕಗಳು ಉತ್ತಮ ಪ್ರತಿಕ್ರಿಯೆ ಪಡೆದು ರಾಜ್ಯದ ವಿವಿಧೆಡೆಗಳಲ್ಲಿ ಪ್ರದರ್ಶನಗಳನ್ನು ಕಾಣುತ್ತಿದೆ.
-
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ












Click it and Unblock the Notifications