ಸಿದ್ದರಾಮಯ್ಯ ಮೇಲೆ ಕೆಂಡಕಾರಿದ ರೋಷನ್ ಬೇಗ್: ಸೋತ್ರೆ ನೀವೇ ಕಾರಣ
Recommended Video
ಬೆಂಗಳೂರು, ಮೇ 21: ತೀರಾ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ರೋಷನ್ ಬೇಗ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸಮಯ, ಸಂದರ್ಭ ನೋಡಿ ನಾವು (ಮುಸ್ಲಿಮರು) ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ, ಅವಶ್ಯಕತೆಬಿದ್ದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲಿಸಲು ನಾವು ಹಿಂಜರಿಯುವುದಿಲ್ಲ ಎನ್ನುವ ಎಚ್ಚರಿಕೆಯನ್ನು ರೋಷನ್ ಬೇಗ್ ನೀಡಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ಬಗ್ಗೆ ತೀರಾ ಅಸಮಾಧಾನ ವ್ಯಕ್ತಪಡಿಸಿದ ಬೇಗ್, ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೇ ನೇರ ಕಾರಣ ಎಂದಿದ್ದಾರೆ.

ಮುಸ್ಲಿಮರ ಬೆಂಬಲ ಯಾವತ್ತಿದ್ದರೂ ಕಾಂಗ್ರೆಸ್ಸಿಗೆ ಎಂದು ಎಲ್ಲೂ ಶಾಸನ ವಿಧಿಸಿಲ್ಲ. ನಮ್ಮ ರಕ್ಷಣೆ, ಸ್ವಾಭಿಮಾನ ಉಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದರೆ ಮಾತ್ರ ನಮ್ಮ ಬೆಂಬಲ ಅವರಿಗೆ ಎಂದು ರೋಷನ್ ಬೇಗ್ ಹೇಳಿದ್ದಾರೆ.
ಎಕ್ಸಿಟ್ ಪೋಲ್ ಅನ್ನು ಉಲ್ಲೇಖಿಸಿ ಮಾತನಾಡಿದ ರೋಷನ್ ಬೇಗ್, ಕಾಂಗ್ರೆಸ್ ಪ್ರಚಾರದ ವೈಖರಿ ನೋಡಿದಾಗಲೇ, ಇದೊಂದು ಪಕ್ಕಾ ಪ್ಲಾಪ್ ಶೋ ಆಗುತ್ತೆ ಎನ್ನುವ ಅರಿವು ನನಗಾಗಿತ್ತು ಎಂದು ಫಲಿತಾಂಶಕ್ಕೂ ಮುನ್ನವೇ, ಕಾಂಗ್ರೆಸ್ ಮುಖಂಡ ಸೋಲೊಪ್ಪಿಕೊಂಡಂತಾಗಿದೆ.
Roshan Baig, Congress when asked if Siddaramaiah is responsible for the collapse of the govt: KC Venugopal is a buffoon. I feel sorry for my leader Rahul Gandhi ji. Buffoons like Venugopal, the arrogant attitude of Siddaramaiah & the flop show of Gundu Rao...The result is this. https://t.co/WOxFkk9enD
— ANI (@ANI) May 21, 2019
ರಾಜ್ಯದ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು ಎನ್ನುವ ಅಸಮಾಧಾನ ನಮಗಿದೆ ಎಂದಿರುವ ರೋಷನ್ ಬೇಗ್, ಎನ್ದಿಎ ಸರಕಾರ ರಚಿಸುವ ಸಾಧ್ಯತೆಯೇ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications