ಜುಲೈ 30 ರ ಒಳಗೆ ಬಿಜೆಪಿ ಸರ್ಕಾರ ರಚಿಸದಿದ್ದರೆ ಮಧ್ಯಂತರ ಚುನಾವಣೆ: ಸಿದ್ದರಾಮಯ್ಯ
ಬೆಂಗಳೂರು, ಜುಲೈ 25: ಇದೇ ತಿಂಗಳ 30 ನೇ ತಾರೀಖಿನ ಒಳಗಾಗಿ ಬಿಜೆಪಿಯು ಸರ್ಕಾರ ರಚನೆ ಮಾಡದೇ ಇದ್ದರೆ ಮಧ್ಯಂತರ ಚುನಾವಣೆ ಪಕ್ಕಾ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಮುಖಂಡರಿಗೆ ಸಲಹೆ ನೀಡಿದ್ದಾರೆ.
ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಮಾಜಿ ಸಂಸದ ಧೃವನಾರಾಯಣ್, ಐವನ್ ಡಿಸೋಜಾ, ಕೃಷ್ಣಪ್ಪ ಸೇರಿ ಇನ್ನೂ ಹಲವು ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ.
1 ವಾರದಲ್ಲಿ ಹೊಸ ಸರಕಾರ ರಚನೆಯಾಗದಿದ್ದಲ್ಲಿ ಭಾರೀ ಸಾಂವಿಧಾನಿಕ ಬಿಕ್ಕಟ್ಟು: ಸ್ಪೀಕರ್
ಭೇಟಿ ಮಾಡಿದ ಮುಖಂಡರಿಗೆ ಮಧ್ಯಂತರ ಚುನಾವಣೆಗೆ ತಯಾರಿರುವಂತೆ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಗೆ ಸರ್ಕಾರ ರಚನೆ ಮಾಡುವುದು ಅಷ್ಟೇನೂ ಸುಲಭವಿಲ್ಲ ಎಂದಿರುವ ಅವರು ರಾಷ್ಟ್ರಪತಿ ಆಡಳಿತದ ಸುಳಿವನ್ನು ಕಾಂಗ್ರೆಸ್ ಮುಖಂಡರ ಮುಂದೆ ಬಿಚ್ಚಿಟ್ಟಿದ್ದಾರೆ. ಮೈತ್ರಿ ಮುರಿವ, ಮುಂದುವರೆಸುವ ಕುರಿತು ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪೀಕರ್ ಅವರ ಬಳಿ ಮತ್ತೆ ಮನವಿ ಮಾಡಿದ್ದು, ಸ್ಪೀಕರ್ ಅವರು ಇಂದು ತೆಗೆದುಕೊಳ್ಳುವ ನಿರ್ಣಯದ ಮೇಲೆ ಬಿಜೆಪಿ ಸರ್ಕಾರದ ಅಳಿವು-ಉಳಿವು ನಿರ್ಧಾರವಾಗಲಿದೆ.
ಬಿಜೆಪಿ ಸರ್ಕಾರ ರಚನೆ ವಿಳಂಬ : ಎಚ್ಡಿಕೆ - ರಾಮಲಿಂಗಾರೆಡ್ಡಿ ಮಹತ್ವದ ಭೇಟಿ
ಸಿದ್ದರಾಮಯ್ಯ ಅವರು ಇಂದು ಮಧ್ಯಂತರ ಚುನಾವಣೆಯ ಬಗ್ಗೆ ಸುಳಿವು ನೀಡಿರುವುದು ನೋಡಿದರೆ ಸ್ಪೀಕರ್ ಅವರ ನಿರ್ಧಾರದ ಸುಳಿವು ಸಿದ್ದರಾಮಯ್ಯ ಅವರಿಗೆ ಮೊದಲೇ ಸಿಕ್ಕಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಮುಂಬೈನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ನಿನ್ನೆ ವಾಪಸ್ ಬಂದಿದ್ದು 'ಸಿದ್ದರಾಮಯ್ಯ ಅವರು ನಮ್ಮ ನಾಯಕರು' ಎಂದು ಬಾಂಬ್ ಸಿಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ