ವಿಡಿಯೋ: ಬೆಂಗಳೂರಿನಲ್ಲಿ ಇಡ್ಲಿ ಎಟಿಎಂ ಸೆಂಟರ್ ಆರಂಭ
ಬೆಂಗಳೂರು, ಅಕ್ಟೋಬರ್ 14: ನಿಮಗೇನಾದರೂ ಮಧ್ಯರಾತ್ರಿ ಇಡ್ಲಿ ತಿನ್ನುವ ಆಸೆಯೇ ಇದೆಯೇ? ಇದೆ ಎಂದಾದರೆ ಸ್ಟಾರ್ಟಪ್ವೊಂದು ಬೆಂಗಳೂರಿನಲ್ಲಿ ಇಡ್ಲಿಯನ್ನು ಎಟಿಎಂನಂತೆ ತ್ವರಿತವಾಗಿ ಹಾಗೂ ತಾಜಾವಾಗಿ ತಯಾರಿಸಿ ಪ್ಯಾಕೇಜ್ ಮಾಡಿ ವಿತರಿಸಲು ಆರಂಭಿಸಲಾಗಿದೆ.
ಈ ಯಂತ್ರವು ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹಿರೇಮಠ್ ಮತ್ತು ಸುರೇಶ್ ಚಂದ್ರಶೇಖರನ್ ಅವರು ಸ್ಥಾಪಿಸಿದ ಸ್ಟಾರ್ಟ್ಅಪ್ ಫ್ರೆಶಾಟ್ ರೊಬೊಟಿಕ್ಸ್ನ ಉತ್ಪನ್ನವಾಗಿದೆ ಎಂದು ವರದಿಯೊಂದು ಹೇಳಿದೆ.
ಟ್ವಿಟ್ಟರ್ನಲ್ಲಿ ಈ ವೀಡಿಯೊ ವೈರಲ್ ಆಗಿದ್ದು, ಸಂಪೂರ್ಣ ಸ್ವಯಂಚಾಲಿತ ಮತ್ತು ಮಾನವ ಸಂಪರ್ಕರಹಿತ ಪ್ರಕ್ರಿಯೆಯ ಮೂಲಕ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಮತ್ತು ಹಬೆಯಾಡುವ ಇಡ್ಲಿಗಳನ್ನು ನಿಮಿಷಗಳಲ್ಲಿ ವಿತರಿಸಲಾಗುತ್ತದೆ ಎಂದು ವೀಡಿಯೊ ತೋರಿಸುತ್ತದೆ. ಈ ಯಂತ್ರವನ್ನು ಸ್ಥಾಪಿಸುವ ಕಲ್ಪನೆಯು ವೈಯಕ್ತಿಕ ಅನುಭವದಿಂದ ಬಂದಿದೆ. 2016ರಲ್ಲಿ ಶರಣ್ ಹಿರೇಮಠ್ ಅವರು ತಡರಾತ್ರಿಯಲ್ಲಿ ತಮ್ಮ ಮಗಳಿಗೆ ಇಡ್ಲಿಗಳನ್ನು ಖರೀದಿಸಲು ಬಯಸಿದ್ದರು. ಆದರೆ ಯಾವುದೇ ರೆಸ್ಟೋರೆಂಟ್ಗಳು ತೆರೆದಿರಲಿಲ್ಲ.

ಆಗ ಸಾರ್ವಕಾಲಿಕವಾಗಿ ಆಹಾರ ಸಿಗುವಂತೆ ಮಾಡಲು ಇರುವ ಏಕೈಕ ಮಾರ್ಗವೆಂದರೆ ಸ್ವಯಂಚಾಲಿತ ಯಂತ್ರವನ್ನು ನಿರ್ಮಿಸುವುದು ಎಂದು ಅವರು ಕಳೆದ ಭಾವಿಸಿದರು. ಮತ್ತೊಂದು ಘಟನೆಯಲ್ಲಿ ಹಿರೇಮಠ್ ಮತ್ತು ಚಂದ್ರಶೇಖರನ್ ಅವರಿಗೆ ಕಲ್ಲಿನಂತ ಹಾಗೂ ಹಳಸಿದ ಇಡ್ಲಿಗಳನ್ನು ಅವರ ಪ್ರವಾಸಗಳಲ್ಲಿ ಬಡಿಸಲಾಗಿತ್ತು. ಆದರೆ ಎಲ್ಲಿ ಯಾರು ಎಂದು ವರದಿಯಲ್ಲಿ ಹೇಳಿಲ್ಲ.
Idli ATM in Bangalore... pic.twitter.com/NvI7GuZP6Y
— B Padmanaban ([email protected]) (@padhucfp) October 13, 2022
ಮೆಷಿನ್ ಸಿದ್ಧಪಡಿಸಿದ ಅವರು ತಮ್ಮ ಫುಡ್ಬಾಟ್ ದಕ್ಷಿಣ ಭಾರತದ ಭಕ್ಷ್ಯಗಳನ್ನು ಪೂರೈಸುವ ಮೊದಲ ಸಂಪೂರ್ಣ ಸ್ವಯಂಚಾಲಿತ ಅಡುಗೆ ಮತ್ತು ಮಾರಾಟವಾಗಿದೆ ಎಂದು ಹೇಳಿದ್ದಾರೆ. ಅವರು ಬೆಂಗಳೂರಿನ ಎರಡು ಸ್ಥಳಗಳಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದ್ದು, ಇತರ ಕಚೇರಿಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿಯೂ ಯಂತ್ರಗಳನ್ನು ಸ್ಥಾಪಿಸಲು ಯೋಜಿಸಿದ್ದಾರೆ.

ಅವರು ಇಡ್ಲಿ ತಯಾರಿಕೆ ಮಾತ್ರ ಸೀಮಿತವಾಗಿರಲು ಬಯಸದೆ ಡೋಸಾಬಾಟ್ಗಳು, ರೈಸ್ ಬಾಟ್ಗಳು ಮತ್ತು ಜ್ಯೂಸ್ ಬಾಟ್ಗಳು ಸಹ ಪರಿಚಯಿಸುವ ಯೋಜನೆಯನ್ನು ಹೊಂದಿದ್ದಾರೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications