ವಿಡಿಯೋ: ಬೆಂಗಳೂರಿನಲ್ಲಿ ಇಡ್ಲಿ ಎಟಿಎಂ ಸೆಂಟರ್ ಆರಂಭ
ಬೆಂಗಳೂರು, ಅಕ್ಟೋಬರ್ 14: ನಿಮಗೇನಾದರೂ ಮಧ್ಯರಾತ್ರಿ ಇಡ್ಲಿ ತಿನ್ನುವ ಆಸೆಯೇ ಇದೆಯೇ? ಇದೆ ಎಂದಾದರೆ ಸ್ಟಾರ್ಟಪ್ವೊಂದು ಬೆಂಗಳೂರಿನಲ್ಲಿ ಇಡ್ಲಿಯನ್ನು ಎಟಿಎಂನಂತೆ ತ್ವರಿತವಾಗಿ ಹಾಗೂ ತಾಜಾವಾಗಿ ತಯಾರಿಸಿ ಪ್ಯಾಕೇಜ್ ಮಾಡಿ ವಿತರಿಸಲು ಆರಂಭಿಸಲಾಗಿದೆ.
ಈ ಯಂತ್ರವು ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹಿರೇಮಠ್ ಮತ್ತು ಸುರೇಶ್ ಚಂದ್ರಶೇಖರನ್ ಅವರು ಸ್ಥಾಪಿಸಿದ ಸ್ಟಾರ್ಟ್ಅಪ್ ಫ್ರೆಶಾಟ್ ರೊಬೊಟಿಕ್ಸ್ನ ಉತ್ಪನ್ನವಾಗಿದೆ ಎಂದು ವರದಿಯೊಂದು ಹೇಳಿದೆ.
ಟ್ವಿಟ್ಟರ್ನಲ್ಲಿ ಈ ವೀಡಿಯೊ ವೈರಲ್ ಆಗಿದ್ದು, ಸಂಪೂರ್ಣ ಸ್ವಯಂಚಾಲಿತ ಮತ್ತು ಮಾನವ ಸಂಪರ್ಕರಹಿತ ಪ್ರಕ್ರಿಯೆಯ ಮೂಲಕ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಮತ್ತು ಹಬೆಯಾಡುವ ಇಡ್ಲಿಗಳನ್ನು ನಿಮಿಷಗಳಲ್ಲಿ ವಿತರಿಸಲಾಗುತ್ತದೆ ಎಂದು ವೀಡಿಯೊ ತೋರಿಸುತ್ತದೆ. ಈ ಯಂತ್ರವನ್ನು ಸ್ಥಾಪಿಸುವ ಕಲ್ಪನೆಯು ವೈಯಕ್ತಿಕ ಅನುಭವದಿಂದ ಬಂದಿದೆ. 2016ರಲ್ಲಿ ಶರಣ್ ಹಿರೇಮಠ್ ಅವರು ತಡರಾತ್ರಿಯಲ್ಲಿ ತಮ್ಮ ಮಗಳಿಗೆ ಇಡ್ಲಿಗಳನ್ನು ಖರೀದಿಸಲು ಬಯಸಿದ್ದರು. ಆದರೆ ಯಾವುದೇ ರೆಸ್ಟೋರೆಂಟ್ಗಳು ತೆರೆದಿರಲಿಲ್ಲ.

ಆಗ ಸಾರ್ವಕಾಲಿಕವಾಗಿ ಆಹಾರ ಸಿಗುವಂತೆ ಮಾಡಲು ಇರುವ ಏಕೈಕ ಮಾರ್ಗವೆಂದರೆ ಸ್ವಯಂಚಾಲಿತ ಯಂತ್ರವನ್ನು ನಿರ್ಮಿಸುವುದು ಎಂದು ಅವರು ಕಳೆದ ಭಾವಿಸಿದರು. ಮತ್ತೊಂದು ಘಟನೆಯಲ್ಲಿ ಹಿರೇಮಠ್ ಮತ್ತು ಚಂದ್ರಶೇಖರನ್ ಅವರಿಗೆ ಕಲ್ಲಿನಂತ ಹಾಗೂ ಹಳಸಿದ ಇಡ್ಲಿಗಳನ್ನು ಅವರ ಪ್ರವಾಸಗಳಲ್ಲಿ ಬಡಿಸಲಾಗಿತ್ತು. ಆದರೆ ಎಲ್ಲಿ ಯಾರು ಎಂದು ವರದಿಯಲ್ಲಿ ಹೇಳಿಲ್ಲ.
Idli ATM in Bangalore... pic.twitter.com/NvI7GuZP6Y
— B Padmanaban ([email protected]) (@padhucfp) October 13, 2022
ಮೆಷಿನ್ ಸಿದ್ಧಪಡಿಸಿದ ಅವರು ತಮ್ಮ ಫುಡ್ಬಾಟ್ ದಕ್ಷಿಣ ಭಾರತದ ಭಕ್ಷ್ಯಗಳನ್ನು ಪೂರೈಸುವ ಮೊದಲ ಸಂಪೂರ್ಣ ಸ್ವಯಂಚಾಲಿತ ಅಡುಗೆ ಮತ್ತು ಮಾರಾಟವಾಗಿದೆ ಎಂದು ಹೇಳಿದ್ದಾರೆ. ಅವರು ಬೆಂಗಳೂರಿನ ಎರಡು ಸ್ಥಳಗಳಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದ್ದು, ಇತರ ಕಚೇರಿಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿಯೂ ಯಂತ್ರಗಳನ್ನು ಸ್ಥಾಪಿಸಲು ಯೋಜಿಸಿದ್ದಾರೆ.

ಅವರು ಇಡ್ಲಿ ತಯಾರಿಕೆ ಮಾತ್ರ ಸೀಮಿತವಾಗಿರಲು ಬಯಸದೆ ಡೋಸಾಬಾಟ್ಗಳು, ರೈಸ್ ಬಾಟ್ಗಳು ಮತ್ತು ಜ್ಯೂಸ್ ಬಾಟ್ಗಳು ಸಹ ಪರಿಚಯಿಸುವ ಯೋಜನೆಯನ್ನು ಹೊಂದಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications