ICSE ಫಲಿತಾಂಶ: ಬೆಂಗಳೂರಿನ ಬಾಲಕಿ ವಿಭಾ ದೇಶಕ್ಕೆ ಪ್ರಥಮ
ಬೆಂಗಳೂರು, ಮೇ 8 : ಐಸಿಎಸ್ಇ 12ನೇ ತರಗತಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬೆಂಗಳೂರಿನ ಮಲ್ಯ ಅದಿತಿ ಶಾಲೆಯ ವಿಭಾ ಸ್ವಾಮಿನಾಥನ್ ದೇಶದಲ್ಲೇ ಅಗ್ರಸ್ಥಾನ ಗಳಿಸಿದ್ದಾರೆ.
ವಿಭಾ ಶೇಕಡಾ ನೂರಕ್ಕೆ ನೂರರಷ್ಟು ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾಳೆ. ಕೋಲ್ಕತ್ತದ ದೇವಾಂಗ್ ಅಗರ್ವಾಲ್ ಕೂಡ 100 ರಷ್ಟು ಅಂಕಗಳಿಸಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಅದೇ ಶಾಲೆಯ ಇನ್ನಿಬ್ಬರು ವಿದ್ಯಾರ್ಥಿಗಳು ಕೂಡ ಎರಡು ಹಾಗೂ ಮೂರನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಫಜಲ್ ನಯೀರ್ ಎರಡನೇ ಸ್ಥಾನವನ್ನು ಗಳಿಸಿದರೆ, ದೀಕ್ಷಾ ಬಾಲಾಜಿ ವಿಶ್ವನಾಥನ್ ಹಾಗೂ ಮಿಹಿರ್ ರಾಜೇಂದ್ರ ರಾಜಮಾನೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

10ನೇ ತರಗತಿಯಲ್ಲಿ ಶ್ರೀ ವಾಣಿ ಪಬ್ಲಿಕ್ ಶಾಲೆಯ ಸಾಧನಾ 99.20 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟು 60 ವಿಷಯಗಳಿಗೆ ಐಸಿಎಸ್ಇ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 22 ಭಾರತೀಯ ಭಾಷೆ ಹಾಗೂ 10 ವಿದೇಶಿ ಭಾಷೆಗಳು ಹಾಗೂ ಎರಡು ಶಾಸ್ತ್ರೀಯ ಭಾಷೆಗಳಿದ್ದವು.
ಇಂಗ್ಲಿಷ್ ಹಾಗೂ ಇತರೆ ಮೂರು ಆಯ್ದ ಉತ್ತಮ ವಿಷಯಗಳಲ್ಲಿ ಇವರು 400 ಕ್ಕೆ 400 ಅಂಕಗಳಿಸಿ ಶೇ. 100ರಷ್ಟು ಅಂಕಗಳಿಸಿದ್ದಾಳೆ. ವಿಭಾ ಸ್ವಾಮಿನಾಥನ್ ಬೆಂಗಳೂರಿನ ಮಲ್ಯ ಅದಿತಿ ಶಾಲೆಯ ವಿದ್ಯಾರ್ಥಿನಿ.
ಕೋಲ್ಕತ್ತಾದ ದೇವಾಂಗ ಕುಮಾರ್ ಅಗರ್ವಾಲ್ ಕೂಡ 100ಕ್ಕೂ 100 ಪ್ರತಿಶತ ಅಂಕ ಪಡೆದಿದ್ದಾರೆ. ಈ ಇಬ್ಬರೂ ಐಎಸ್ಸಿ ಪರೀಕ್ಷೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಐಎಸ್ಸಿ ಬೋರ್ಡ್ 12ನೇ ತರಗತಿ ಪರೀಕ್ಷೆಯಲ್ಲಿ ಇದುವರೆಗೂ ವಿದ್ಯಾರ್ಥಿಗಳು ಶೇ.100 ಸ್ಕೋರ್ ಮಾಡಿರುವುದು ಇದೇ ಮೊದಲು.
ರಾಜ್ಯದ ಐವರು ಟಾಪರ್ಗಳ ವಿವರ
1. ವಿ.ಸಾಧನಾ - ಶೇ. 99.20
2. ನಿತಿನ್ ಅರವಿಂದ್ ಬೀರೂರು - ಶೇ. 99.00
3. ಅನಘಾ ಎಚ್.ಸಿ - ಶೇ. 99.00
4. ಸನಾ ದತ್ - ಶೇ. 99.00
5. ನಿತ್ಯಾ ಅಗರ್ವಾಲ್ - ಶೇ. 99.00
ಐಸಿಎಸ್ಇ ಪರೀಕ್ಷೆಯಲ್ಲಿ ರಾಜ್ಯದ 18,217 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಶೇ. 99.77 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 99.89 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದರೆ, ಬಾಲಕರು ಶೇ. 99.65 ರಷ್ಟು ತೇರ್ಗಡೆ ಹೊಂದಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications