ಭಿಕ್ಷುಕರಿಗೆ ಬೆಡ್ ಶೀಟ್ ಕೊಟ್ಟು ಮಾನವೀಯತೆ ತೋರಿದ ಪೊಲೀಸರು
ಬೆಂಗಳೂರು, ಜೂ. 17: ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ. ಬಡವರು ಹಾಗೂ ಭಿಕ್ಷಕರಿಗೆ ಆಸರೆ ನೀಡುವ ಮನೆ. ಹೊಟ್ಟೆ ಪಾಡಿಗಾಗಿ ಬೀದಿ ಬದಿ ವ್ಯಾಪಾರ ಮಾಡಿ ಅನ್ನ ಗಿಟ್ಟಿಸಿಕೊಳ್ಳುವರು ಆಸರೆಗಾಗಿ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ಅವಲಂಬಿಸಿದ್ದಾರೆ. ಆದರೆ, ಮಳೆ ಬಂದರೆ ನೆಂದು ಹೋಗುತ್ತಾರೆ. ಬಿಸಿಲಿಗೆ ಒಣಗುತ್ತಾರೆ. ಚಳಿಯಾದರೆ ಅಲ್ಲಿಯೇ ಬೆಂಕಿ ಹಾಕಿಕೊಂಡು ಜೀವನ ಸಾಗಿಸುತ್ತಾರೆ. ಭಿಕ್ಷುಕರ ಪಾಲಿಗೆ ಇದು ಕೊನೆ ಉಸಿರು ಎಳೆಯುವವರೆಗೂ ಆಶ್ರಯ ನೀಡುವ ಜಾಗ. ಇದು ಯಾರ ಕಣ್ಣಿಗೂ ಬೀಳುವುದೇ ಇಲ್ಲ. ಹೀಗೆ ಚಳಿ- ಮಳೆಯಲ್ಲಿ ದಿನದೂಡುವ ಬಡವರ ಕಷ್ಟಕ್ಕೆ ಕೆ.ಆರ್. ಮಾರ್ಕೆಟ್ ಪೊಲೀಸರು ಮಿಡಿದಿದ್ದಾರೆ. ಮೇಲ್ಸೇತುವೆ ಬಳಿ ಮಲಗುವ ಭಿಕ್ಷುಕರಿಗೆ ಮತ್ತು ಬಡವರಿಗೆ ಬೆಡ್ ಶೀಟ್ ನೀಡಿ ಮಾನವೀಯತೆ ಮರೆದಿದ್ದಾರೆ.
ಸೂರಿಗಾಗಿ ಮೇಲ್ಸೇತುವೆ:
ತಲೆ ಮೇಲೆ ಸೂರಿಲ್ಲದಿದ್ದರೂ ಮೇಲ್ಸೇತುವೆ ಕೆಳಗೆ ಮಲಗುವ ಜನರು ಬೆಳಗಿನ ಜಾವ ಚಳಿ ತಾಳಲಾರದೇ ಅಲ್ಲಿಯೇ ಬೆಂಕಿ ಹಾಕಿಕೊಂಡು ಮೈ ಬಿಸಿ ಮಾಡಿಕೊಳ್ಳುತ್ತಾರೆ. ಚಳಿಗೆ ನಡುಗುವ ಬಡವರು ನೆಮ್ಮದಿ ನಿದ್ದೆ ಮಾಡಲೆಂದು ಕೆ.ಆರ್. ಮಾರ್ಕೆಟ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ಮತ್ತು ಸಿಬ್ಬಂದಿ ಬೆಡ್ ಶೀಟ್ ಗಳನ್ನು ಹಂಚಿ ಮಾನವೀಯತೆ ಮರೆದಿದ್ದಾರೆ. ಕೆ.ಆರ್. ಮಾರ್ಕೆಟ್ ನ ಮೇಲ್ಸೇತುವೆ ಕೆಳಗೆ ಮಲಗುವ ನೂರಕ್ಕೂ ಹೆಚ್ಚು ಬಡವರಿಗೆ ಬೆಡ್ ಶೀಟ್ ವಿತರಿಸಿದ್ದಾರೆ. ಪೊಲೀಸರ ಈ ಸೇವಾ ಕಾರ್ಯಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೊಲೀಸರ ಈ ಮಾನವೀಯ ಸೇವೆಗೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಕೂಡ ಕೈ ಜೋಡಿಸಿದ್ದಾರೆ.

ಪೊಲೀಸರನ್ನು ಕಂಡ್ರೆ ಓಡ್ತಿದ್ರು:
ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ, ಮೆಟ್ರೋ ಸ್ಟೇಷನ್ ಸಮೀಪ ಭಿಕ್ಷಕರು ಮಲಗಿದ್ದರೆ ಈ ಹಿಂದೆ ಪೊಲೀಸರೇ ಹೆದರಿಸಿ ಓಡಿಸುತ್ತಿದ್ದರು. ಪುಟ್ ಪಾತ್ ಒತ್ತುವರಿ ತೆರವು ಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಕೂಡ ಇಲ್ಲಿನ ಭಿಕ್ಷಕುರನ್ನು ತೆರವುಗೊಳಿಸುತ್ತಿದ್ದರು. ಹೀಗಾಗಿ ಈ ಹಿಂದೆ ಪೊಲೀಸರನ್ನು, ಬಿಬಿಎಂಪಿ ಅಧಿಕಾರಿಗಳನ್ನು ನೋಡಿದರೆ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ಬಳಿ ತಂಗಿದ್ದ ಭಿಕ್ಷುಕರು ಓಡಿ ಹೋಗುತ್ತಿದ್ದರು. ಕೆಲ ವರ್ಷಗಳಿಂದಲೂ ಪೊಲೀಸರು ರಾತ್ರಿ ವೇಳೆ ಅಲ್ಲಿ ಮಲಗುವ ಭಿಕ್ಷಕರಿಗೆ ಯಾವುದೇ ತೊಂದರೆ ನೀಡುತ್ತಿಲ್ಲ. ಬದಲಿಗೆ ಅವರ ನಿದ್ದೆಗೆ ಭಂಗ ತರದೇ ಅವಕಾಶ ಮಾಡುವ ಜತೆಗೆ ಇದೀಗ ಬೆಡ್ ಶೀಟ್ ಗಳನ್ನು ವಿತರಿಸುವ ಮೂಲಕ ಕೆ.ಆರ್. ಮಾರ್ಕೆಟ್ ಪೊಲೀಸರು ತೋರಿರುವ ಮಾನವೀಯತೆ ಪೊಲೀಸ್ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.

Recommended Video
ಕೆ ಆರ್. ಮಾರ್ಕೆಟ್ ವಿವರ: ಬೆಳಗಿನ ಜಾವ ಹೂವು- ತರಕಾರಿ ವಹಿವಾಟು. ಸೂರ್ಯ ಮೂಡುತ್ತಿದ್ದಂತೆ ಲೋಕಲ್ನಿಂದ ಗ್ಲೋಬಲ್ವರೆಗೂ ವಹಿವಾಟು ನಡೆಸುವ ಪ್ರದೇಶ. ಬೆಳಗ್ಗೆ ಕಾಲಿಡಲು ಜಾಗವಿಲ್ಲದಂತೆ ಜನ ತುಂಬಿರುವ ಕೆ.ಆರ್. ಮಾರ್ಕೆಟ್ ಮೇಲ್ಸೇತುವೆ ಕತ್ತಲಾದರೆ ಬಡವರ ಪಾಲಿಗೆ ಆಸರೆಯಾಗಿದೆ. ಬದುಕಿಗಾಗಿ ಬೀದಿ ಬದಿ ವ್ಯಾಪಾರ ಮಾಡುವರು ಕೂಡ ಮೇಲ್ಸೇತುವೆ ಕೆಳಗೆ ಮಲಗುತ್ತಾರೆ. ಇರುವ ಜೀವ ಉಳಿಸಿಕೊಳ್ಳಲು ಬಡಿದಾಡುವರ ಪಾಲಿಗೆ ಪೊಲೀಸರೇ ಇದೀಗ ಆಶ್ರಯ ನೀಡಿ ತಮ್ಮ ಹೃದಯ ಶ್ರೀಮಂತಿಕೆ ತೋರಿದ್ದಾರೆ.
-
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026: ಬೆಂಗಳೂರು ಕ್ರಿಕೆಟ್ ಪ್ರೇಮಿಗಳೇ ಗಮನಿಸಿ, ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗುವ ಮುನ್ನ ಈ ಹೊಸ ರೂಲ್ಸ್ ಗೊತ್ತಿರಲಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?












Click it and Unblock the Notifications