ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲಿಗೆ ಹೊಸ ಬೋಗಿ: ಪ್ರಯಾಣಿಕರ ಹರ್ಷ
ಬೆಂಗಳೂರು: 2026ರ ಹೊಸ ವರ್ಷದಿಂದ ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಿಗೆ ಸಂಪರ್ಕಿಸುವ ಬೆಂಗಳೂರು-ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲಿಗೆ ಆಧುನಿಕ ಮತ್ತು ಜರ್ಮನ್ ತಂತ್ರಜ್ಞಾನದ ವಿನ್ಯಾಸದಲ್ಲಿ ತಯಾರಿಸಲಾದ ಎಲ್ಎಚ್ಬಿ ಕೋಚ್ಗಳನ್ನು ಅಳವಡಿಸಲಾಗಿದೆ. ಹೊಸ ಬೋಗಿ ಸಹಿತ ರೈಲು ಕಾರ್ಯಾಚರಣೆ ನಡೆಸಿದ್ದು, ರೈಲಿನ ಹೊಸ ಅವತಾರ ಇಷ್ಟ ಪಟ್ಟ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾರತೀಯ ರೈಲ್ವೆಯು ದೇಶದ ವಿವಿಧ ಮಾರ್ಗಗಳಲ್ಲಿ 2026ರಿಂದ ಹಂತ ಹಂತವಾಗಿ ಸೂಪರ್ ಫಾಸ್ಟ್ ರೈಲುಗಳ ಹಾಲಿ ಸಾಂಪ್ರದಾಯಿಕ ಬೋಗಿಗಳನ್ನು ಕ್ರಮೇಣ ಎಲ್ಎಚ್ಬಿ (Linke-Hofmann Busch) ಸುಧಾರಿತ ಬೋಗಿಗಳಿಗೆ ಬದಲಾಯಿಸಲಾಗುವುದು ಎಂದು ಈ ಹಿಂದೆ ಘೋಷಿಸಿತ್ತು. ಅದಕ್ಕಾಗಿ ಒಂದಷ್ಟು ಮಾರ್ಗದ ಸೂಪರ್ ಫಾಸ್ಟ್ ರೈಲುಗಳನ್ನು ಆಯ್ಕೆ ಮಾಡಿಕೊಂಡಿತ್ತು. ಅದರಲ್ಲಿ 16 ಬೋಗಿಗಳನ್ನು ಹೊಂದಿದ್ದ ಹುಬ್ಬಳ್ಳಿ-ಬೆಂಗಳೂರು ಮಾರ್ಗದ ಈ ರೈಲು ಒಂದು.

ಈ ವರ್ಷ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಹಳೆಯ ಬೋಗಿಗಳನ್ನು ಹೊಸ ಬೋಗಿಗಳಿಗೆ ಬದಲಾವಣೆಗೊಂಡ ಮೊದಲ ರೈಲು ಬೆಂಗಳೂರು-ಹುಬ್ಬಳ್ಳಿ ಮಾರ್ಗದ್ದಾಗಿದೆ. ಮತ್ತಷ್ಟು ಆರಾಮದಾಯಕ, ಸುರಕ್ಷಿತ ಸೇವೆ ಒದಗಿಸುವ ಬೋಗಿಗಳು ಇವಾಗಿವೆ. ಹೊಳೆಯುವ ಬೋಗಿಗಳನ್ನು ನೋಡಿದ ಪ್ರಯಾಣಿಕರು ಸಂತಸ ಹಂಚಿಕೊಂಡಿದ್ದಾರೆ. ಆದರೆ ಗುಟ್ಕಾ, ಪಾನ್ ಮಸಾಲ ಉಗಿಯುವವರ ಸಂಖ್ಯೆ ಕಡಿಮೆ ಏನು ಇಲ್ಲ. ಹೀಗಾಗಿ ಬೋಗಿಗಳ ಸ್ವಚ್ಛತೆಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಳವಳ ಸಹ ವ್ಯಕ್ತವಾಗಿದೆ. ಈ ಬಗ್ಗೆ ನೈಋತ್ಯ ರೈಲ್ವೆ ಸೂಕ್ತ ಕ್ರಮ ವಹಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ವಿಶೇಷವಾದ ಈ ಬೋಗಿಗಳು ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವ ಜೊತೆಗೆ ಅಪಘಾತದ ಸಂದರ್ಭದಲ್ಲಿ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. ಬೆಂಗಳೂರು-ಹುಬ್ಬಳ್ಳಿ ಮಾರ್ಗದ ರೈಲಿನ ಜೊತೆಗೆ ರಾಜ್ಯದ ಇತರ ಮಾರ್ಗದ ಸೂಪರ್ಫಾಸ್ಟ್ ರೈಲುಗಳಿಗೂ ಇದೇ ರೀತಿ ಬೋಗಿಗಳ ಬದಲಾವಣೆ ಹಂತ ಹಂತವಾಗಿ ಆಗಲಿದೆ.
ಎಲ್ಎಚ್ಬಿ ಕೋಚ್ಗಳ ವಿಶೇಷತೆಗಳೇನು?
1. ಅಲ್ಸ್ಟಾಮ್ ಜರ್ಮನ್ ತಂತ್ರಜ್ಞಾನದಿಂದ ಈ ಹೊಸ ಬೋಗಿಗಳನ್ನು ನಿರ್ಮಿಸಲಾಗಿದೆ.
2. ಸ್ಟೇನ್ಲೆಸ್ ಸ್ಟೀಲ್ ಬಾಡಿಗಳನ್ನು ಹೊಂದಿವೆ.
3. ಸುಧಾರಿತ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಇದರಲ್ಲಿದೆ.
4. ಪ್ರತಿ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ.
5. ಆಂಟಿ-ಕ್ಲೈಂಬಿಂಗ್ ಸಾಧನಗಳಂತಹ ವರ್ಧಿತ ಸುರಕ್ಷತಾ ಕಾರ್ಯವಿಧಾನ ಹೊಂದಿವೆ.
6. ಇತರ ಸುರಕ್ಷತಾ ವಿನ್ಯಾಸಗಳು ಇದರಲ್ಲಿವೆ.
ಹೊಸ ಬೋಗಿಗಳ ಉತ್ಪಾದನೆ ಹೆಚ್ಚಳ
ಭಾರತೀಯ ರೈಲ್ವೆ ಇಲಾಖೆ ಉದ್ದೇಶದಂತೆ ಹೊಸ ಬೋಗಿಗಳ ತಯಾರಿಕೆಯಲ್ಲಿ ಭಾರೀ ಪ್ರಗತಿ ಆಗಿದೆ. 2014 ರಿಂದ ಈವರೆಗೆ ಒಂದು ದಶಕದಲ್ಲಿ 42 ಸಾವಿರಕ್ಕೂ ಹೆಚ್ಚು ಬೋಗಿಗಳನ್ನು ತಯಾರಿಸಲಾಗಿದೆ. 2004 ರಿಂದ 2014ರವರೆಗೆ ಕೇವಲ 2300 ಬೋಗಿಗಳ ಉತ್ಪಾದನೆ ಆಗಿತ್ತು. ಹೊಸ ಬೋಗಿಗಳ ತಯಾರಿಕೆಯಲ್ಲಿ 18 ಪಟ್ಟು ಏರಿಕೆ ಆಗಿದೆ. ಈ ಬೋಗಿಗಳು ದೇಶದ ವಿವಿಧ ರೈಲುಗಳಿಗೆ ಅಳವಡಿಸುವ ಕೆಲಸ ಆಗುತ್ತಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications