Get Updates
Get notified of breaking news, exclusive insights, and must-see stories!

ಪುಸ್ತಕ ಮರೆತರೆ ಪ್ರಪಂಚ ಮರೆತಂತೆ, ಪೋಷಕರು ಎಚ್ಚೆತ್ತುಕೊಳ್ಳಲಿ!

ಆಧುನಿಕ ಕಾಲದಲ್ಲಿ ಪುಸ್ತಕಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮರೆಯಾಗುತ್ತಿದ್ದು, ಮೊಬೈಲ್ & ತಂತ್ರಜ್ಞಾನದ ಕಡೆ ಮಾತ್ರ ಗಮನ ಕೇಂದ್ರಿಕೃತವಾಗಿದೆ. ಹೀಗಾಗಿ ಇದು ಭವಿಷ್ಯದಲ್ಲಿ ಇಡೀ ಮನುಷ್ಯನ ಬದುಕಿಗೆ ಮಾರಕ ಎಂದು, ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ ಕೆ. ವಾಸುದೇವ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜಧಾನಿ ಬೆಂಗಳೂರಿನ, ಎಚ್‌ಎಸ್‌ಆರ್ ಬಡಾವಣೆಯಲ್ಲಿ ಆಯೋಜಿಸಿದ್ದ 'ಪುಸ್ತಕ ಸಂತೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ 2 ದಿನಗಳಿಂದ ನಡೆದ ಕಾರ್ಯಕ್ರಮ ಸ್ಥಳೀಯರಲ್ಲಿ ಕನ್ನಡತನ & ಕನ್ನಡ ಪುಸ್ತಕಗಳ ಕುರಿತು ಜ್ಞಾನ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಈ 'ಪುಸ್ತಕ ಸಂತೆ' ಕಾರ್ಯಕ್ರಮ. ಈ ವೇಳೆ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಕೆಪಿಸಿಸಿ ಪ್ರಚಾರ ಸಮಿತಿಯ ಸದಸ್ಯ & ಪ್ರಾಧ್ಯಾಪಕರಾದ ಕೆ. ವಾಸುದೇವ್ ರೆಡ್ಡಿ ಕೂಡ ಸಮಾರಂಭದಲ್ಲಿ ಪುಸ್ತಕ ಅಗತ್ಯತೆ ಬಗ್ಗೆ ಮಾತನಾಡಿದರು.

HSR Layout Book Mela Spreads Awareness About Books In Locals

ಮಕ್ಕಳ ಆರೋಗ್ಯದ ಮೇಲೆ ಪರಿಣಾಮ

ಶಾಲೆ & ಟ್ಯೂಷನ್ ಹೊರತಾಗಿ ಮಕ್ಕಳು ಮನೆಗೆ ಬಂದರೆ ಬರೀ ಮೊಬೈಲ್‌ಗಳಲ್ಲಿ ಮುಳುಗಿ ಹೋಗುತ್ತಾರೆ. ಹೀಗಾದಾಗ ಅವರ ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಉಂಟಾಗುತ್ತೆ ಎಂಬುದು ಪೋಷಕರಿಗೆ ಅರಿವು ಇರಲಿ. ಹೀಗಾಗಿ ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿ ಹಾಗೂ ಈ ಮೂಲಕ ಅವರ ಜ್ಞಾನವನ್ನೂ ವೃದ್ಧಿಸಬಹುದಾಗಿದೆ ಎಂದು ಕೆ. ವಾಸುದೇವ್ ರೆಡ್ಡಿ ಇದೇ ವೇಳೆ ಮಕ್ಕಳ ಪೋಷಕರಿಗೆ ಸಲಹೆ ನೀಡಿದರು. ಹಾಗೇ ಪುಸ್ತಕ ಮರೆತರೆ ಪ್ರಪಂಚ ಮರೆತಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

150ಕ್ಕೂ ಹೆಚ್ಚು ಪ್ರಕಾಶಕರು ಭಾಗಿ

ಪುಸ್ತಕ ಸಂತೆಯಲ್ಲಿ ಕನ್ನಡ ನಾಡಿನ 150ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಿದ್ದರು. ಸಿಎಂ & ಡಿಸಿಎಂ ಸಮೇತ ನೂರಾರು ಸಾಹಿತಿಗಳು, ಸಾವಿರಾರು ಓದುಗರು ಕೂಡ ಪುಸ್ತಕ ಸಂತೆಗೆ ಬಂದು ಕನ್ನಡತನ ಮೆರೆದರು. ಕನ್ನಡ ಓದುವ ಸಂಸ್ಕೃತಿ ಪಸರಿಸುವ ದೃಷ್ಠಿಯಿಂದಲೇ ಈ ಪುಸ್ತಕ ಸಂತೆ ಗಮನ ಸೆಳೆದಿದೆ. ವೀರಕಪುತ್ರ ಶ್ರೀನಿವಾಸ್ & ಅನಿಲ್ ರೆಡ್ಡಿ ಸಾರಥ್ಯದಲ್ಲಿ ಪುಸ್ತಕದ ಸಂತೆಯನ್ನು ಆಯೋಜನೆ ಮಾಡಲಾಗಿತ್ತು. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು, ಈ ಪುಸ್ತಕ ಸಂತೆಗೆ ಮುಂದಾಳತ್ವ ವಹಿಸಿದ್ದರು. ಕನ್ನಡಿಗರ ಮೆಚ್ಚಿನ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೂಡ ಭಾಗವಹಿಸಿದ್ದರು.

HSR Layout Book Mela Spreads Awareness About Books In Locals

ಬೆಂಗಳೂರಿನಲ್ಲಿ ಕನ್ನಡ ಕಲರವ

ಎಚ್‌ಎಸ್‌ಆರ್ ಬಡಾವಣೆಯಲ್ಲಿ 'ಪುಸ್ತಕ ಸಂತೆ' ಜೊತೆಗೆ ವಿವಿಧ ಕನ್ನಡ ಪರ ಕಾರ್ಯಕ್ರಮ ಕೂಡ ನಡೆದವು. ಈ ಮೂಲಕ ಮಕ್ಕಳ ಸಮೇತ, ಎಚ್‌ಎಸ್‌ಆರ್ ಬಡಾವಣೆ ಸುತ್ತಮುತ್ತಲು ವಾಸ ಮಾಡುವ ನಿವಾಸಿಗಳು ಈ ಪುಸ್ತಕ ಸಂತೆಗೆ ಬಂದು ಬುಕ್ ಖರೀದಿ ಮಾಡಿದರು. ಈ ವೇಳೆ ಸಿನಿಮಾ ಸ್ಟಾರ್‌ಗಳು ಕೂಡ ಪುಸ್ತಕ ಸಂತೆ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು. ಹೀಗೆ ವಾರಾಂತ್ಯದಲ್ಲಿ ಎಚ್‌ಎಸ್‌ಆರ್ ಲೇಔಟ್ ಕನ್ನಡತನ ಪಸರಿಸಲು ಸಾಕ್ಷಿಯಾಗಿತ್ತು.

ಒಟ್ನಲ್ಲಿ ಪುಸ್ತಕ ಸಂತೆ ಇಡೀ ಬೆಂಗಳೂರಿನ ಗಮನ ಸೆಳೆದಿದೆ. ನಿನ್ನೆ ಈ ಕಾರ್ಯಕ್ರಮದಲ್ಲಿ ಸ್ವತಃ ಸಿಎಂ ಭಾಗವಹಿಸಿದ್ದರು. ಅಲ್ಲದೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರೂ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದು ಕೊನೆಯ ದಿನವಾದ ಹಿನ್ನೆಲೆ, ಸ್ಥಳೀಯ ನಿವಾಸಿಗಳು ಸೇರಿದಂತೆ ವಿವಿಧ ಪ್ರದೇಶದಿಂದ ಜನ ಆಗಮಿಸಿ ಪುಸ್ತಕ ಸಂತೆಯಲ್ಲಿ ಪುಸ್ತಕದ ಖರೀದಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+