Get Updates
Get notified of breaking news, exclusive insights, and must-see stories!

ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು, ಏಪ್ರಿಲ್ 10: ಲೇಖಕ ವಸಂತ್ ಶೆಟ್ಟಿ ಅವರ ಮುನ್ನೋಟ ಮಳಿಗೆಯಲ್ಲಿ ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು ಎನ್ನುವ ಅರಿಮೆ ಕಾರ್ಯಕ್ರಮವನ್ನು ಏಪ್ರಿಲ್ 15 ರಂದು ಹಮ್ಮಿಕೊಂಡಿದೆ.

ಕನ್ನಡದ ವ್ಯಾಕರಣ ಎಂದು ಬರಹದಲ್ಲಿ ಕಲಿಸಲಾಗುವ ಇಂದಿನ ವ್ಯಾಕರಣ ನಿಜಕ್ಕೂ ಕನ್ನಡದ ಸ್ವರೂಪವನ್ನು ಸರಿಯಾಗಿ ಬಣ್ಣಿಸುತ್ತಿದೆಯೇ? ಈ ಬಗ್ಗೆ ಬಹಳ ಹಿಂದಿನಿಂದ ಸಂಶೋಧನೆ ಮಾಡುತ್ತಾ ಬಂದಿರುವ ಡಾ.ಡಿ. ಎನ್. ಶಂಕರ ಭಟ್ಟರು ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವನ್ನು ಬರೆಯುವ ಪ್ರಯತ್ನವನ್ನು 'ಕನ್ನಡ ಬರಹದ ಸೊಲ್ಲರಿಮೆ' ಎಂಬ ಹಲವು ಕಂತುಗಳ ಹೊತ್ತಗೆಯ ಮೂಲಕ ಮಾಡುತ್ತಿರುವರು. ಕಾರ್ಯಕ್ರಮ ಬೆಳಗ್ಗೆ 11.30ಕ್ಕೆ ಪ್ರಾರಂಭವಾಗಲಿದೆ.

ಈಗಾಗಲೇ ಈ ಹೊತ್ತಗೆಯ ಐದು ಕಂತುಗಳು ಹೊರಬಂದಿವೆ ಮತ್ತು ಇದೀಗ ಕನ್ನಡದಲ್ಲಿ ವಾಕ್ಯಗಳ ರಚನೆ ಕುರಿತು ಚರ್ಚಿಸಲಾಗಿರುವ ಆರನೇ ಕಂತು ಹೊರಬಂದಿದೆ.

How much you know about Kannada Grammer?

ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣದ ಅವಶ್ಯಕತೆಯ ಬಗ್ಗೆ ಮತ್ತು ಕನ್ನಡದ ವಾಕ್ಯಗಳ ಜೋಡಣೆಯಲ್ಲಿ ಎಂತಹ ಕಟ್ಟಲೆಗಳು ಒಪ್ಪಿತವಾಗುತ್ತವೆ ಎಂಬುದರ ಬಗ್ಗೆ ಈ ಹೊತ್ತಗೆಯಲ್ಲಿನ ವಾದಗಳ ಕುರಿತು ಒಂದು ಪರಿಚಯ ನೀಡುವ ಮಾತುಕತೆಯನ್ನು ಕನ್ನಡ ನುಡಿಯರಿಮೆಯ ಕುರಿತು ಆಳವಾದ ಓದು ಮತ್ತು ತಿಳುವಳಿಕೆ ಹೊಂದಿರುವ ಸಂದೀಪ್ ಕಂಬಿ ಅವರು ನಡೆಸಿಕೊಡಲಿದ್ದಾರೆ.

ಏನು-ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು?
ಎಲ್ಲಿ-ಮುನ್ನೋಟ, ನಂ.67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ
ಯಾವಾಗ-ಏಪ್ರಿಲ್ 15, ಭಾನುವಾರ ಬೆಳಗ್ಗೆ 11.30

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+