Get Updates
Get notified of breaking news, exclusive insights, and must-see stories!

ಬಿಜೆಪಿ ನಾಯಕರ ತಿರುಕನ ಕನಸು: ಸಚಿವ ವೆಂಕಟರಮಣಪ್ಪ ಗೇಲಿ

ಬೆಂಗಳೂರು, ಆಗಸ್ಟ್ 27: ಹಣೆಬರಹ ಗಟ್ಟಿ ಇದ್ದರೆ ಯಾರಾದರೂ ಸಿಎಂ ಆಗಬಹುದು. ಆದರೆ ಎಚ್.ಡಿ.ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿರುತ್ತಾರೆ. ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ವೆಂಕಟರಮಣಪ್ಪ ಗೇಲಿ‌ ಮಾಡಿದ್ದಾರೆ.

ಮೈತ್ರಿ ಸರಕಾರ ಸುಭ್ರವಾಗಿದೆ ಐದು ವರ್ಷ ಅಧಿಕಾರದಲ್ಲಿರಲಿದೆ. ಸರ್ಕಾರದಲ್ಲಿ ಗೊಂದಲ ಇಲ್ಲ. ಬಿಜೆಪಿಯವರದ್ದು ತಿರುಕನ ಕನಸು. ಅವರು ಸರ್ಕಾರ ಬಿದ್ದು ಹೋಗಲಿ ಅಂತ ಕಾಯುತ್ತಿದ್ದಾರೆ ಆದರೆ ಸರ್ಕಾರ ಐದೂ ವರ್ಷ ಇರಲಿದೆ. ಕುಮಾರಸ್ವಾಮಿಯವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದರು.

ಸಿದ್ದರಾಮಯ್ಯ ಅವರು ಈ ಬಾರಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ. ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದು. ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಲಾಗಿದೆ.ಹಣೆಬರಹ ಚೆನಾಗಿದ್ದರೆ ಯಾರಾದ್ರೂ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದರು.

HDK will be CM for five years: Venkataramanappa

ಬಗಲಗುಂಟೆಯಲ್ಲಿ ಕಾರ್ಮಿಕರಿಗಾಗಿ ಅಪಾರ್ಟ್ ಮೆಂಟ್ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡಲಾಗುತ್ತದೆ, 5000 ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಈ ಮನೆಗಳ ನಿರ್ಮಿಸಲಾಗುತ್ತಿದೆ. ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಮೂಲಕ ಮನೆ ಕಟ್ಟಿಸಲು ಸರ್ಕಾರ ನಿರ್ಧಾರ ಮಾಡಲಾಗಿದೆ.

ಈಗಾಗಲೇ ಕಾರ್ಮಿಕರಿಗೆ ಟೈಲರಿಂಗ್, ಮೊಬೈಲ್ ದುರಸ್ತಿ, ಬಣ್ಣಬಳಿಯುವ ತರಬೇತಿ ನೀಡಿ, ಜೀವನೋಪಾಯಕ್ಕೆ ನೆರವು, ತರಬೇತಿ ಮುಗಿದ ಬಳಿಕ ಅವರಿಗೆ ಕಿಟ್ ಕೊಡಲಾಗುವುದು. ಸದ್ಯ ನೋಂದಾಣಿ ನವೀಕರಣ ಮಾಡಿರುವ ಸುಮಾರು 3-4ಲಕ್ಷ ಕಾರ್ಮಿಕರಿದ್ದಾರೆ.

ಮೊದಲು ಕಾರ್ಮಿಕರು ಒಂದು ವರ್ಷಕ್ಕೊಮ್ಮೆ ನೋಂದಾಣಿ ಮಾಡಬೇಕಾಗಿತ್ತು ಈಗ ಅದನ್ನು ಮೂರು ವರ್ಷಕ್ಕೊಮ್ಮೆ ನೋಂದಣಿ ನವೀಕರಣ ಮಾಡಲು ನಿರ್ಧಾರ ಕಾರ್ಮಿಕರು ವರ್ಷಂಪ್ರತಿ ನೋಂದಣಿ ನವೀಕರಣಕ್ಕೆ ಅಧಿಕಾರಿಗಳ ಬಳಿ ಹೋಗುವುದನ್ನ ತಪ್ಪಿಸಲು ಚಿಂತನೆ ಮಾಡಲಾಗಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+