ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನಗೆ ಟೆಲಿಫೋನ್ ಕದ್ದಾಲಿಕೆ ರೂಢಿ ಇಲ್ಲ: ಎಚ್‌ಡಿ ಕುಮಾರಸ್ವಾಮಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ನಾಯಕರ ಟೆಲಿಫೋನ್ ಕದ್ದಾಲಿಕೆ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನನಗೆ ಟೆಲಿಫೋನ್ ಕದ್ದಾಲಿಸುವ ಹವ್ಯಾಸವಿಲ್ಲ ಎಂದಿದ್ದಾರೆ.

ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ, ಮೋದಿ ಭೇಟಿಯಾಗಿ ಯಾವ ಟೆಲಿಫೋನ್ ಎಲ್ಲಿ ಕದ್ದಾಲಿಕೆಯಾಗುತ್ತಿದೆ ಎಂದು ತನಿಖೆ ನಡೆಸಲಿ, ಅವರ ಸರ್ಕಾರ ಇದ್ದಾಗ ಮಾಡಿದ ಕೆಲಸ ನೆನೆಸಿಕೊಂಡು ಮಾತನಾಡಿರಬೇಕು, ಬೇರೆ ಯಾರ ಫೋನ್ ಕದ್ದಾಲಿಕ ಚಟ ನಮಗಿಲ್ಲ, ಈ ಬಗ್ಗೆ ಸಣ್ಣ ಸಾಕ್ಷ್ಯ ತಂದು ಕೊಟ್ಟರೂ ನಾನೇ ಕ್ರಮ ಕೈಗೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

HDK clarifies he never tapped anyones conversation

'ದೆಹಲಿ,ಗುಜರಾತ್ ನಿಂದ ಕಾಂಗ್ರೆಸ್ ನಾಯಕರ ಫೋನ್ ‌ಕದ್ದಾಲಿಕೆ''ದೆಹಲಿ,ಗುಜರಾತ್ ನಿಂದ ಕಾಂಗ್ರೆಸ್ ನಾಯಕರ ಫೋನ್ ‌ಕದ್ದಾಲಿಕೆ'

ಇದಕ್ಕೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಕೂಡ ಹೇಳಿಕೆ ನೀಡಿದ್ದು, ಯಾವ ರಾಜಕೀಯ ನಾಯಕರ ಫೋನ್ ಟ್ರ್ಯಾಪ್ ಆಗಿಲ್ಲ, ದೆಹಲಿಯಿಂದ ಮಾಹಿತಿ ಬಂದರೆ ಪೊಲೀಸರು ಟ್ರ್ಯಾಪ್ ಮಾಡುತ್ತಾರೆ, ಒಂದೊಮ್ಮೆ ಈ ರೀತಿ ಟ್ರ್ಯಾಪ್ ಆಗಿದ್ದರೆ ಗೃಹಸಚಿವನಾಗಿ ನನಗೆ ಮಾಹಿತಿ ಇರುತ್ತಿತ್ತು ಎಂದು ಹೇಳಿದರು.

'ಆದಾಯ ತೆರಿಗೆ ಇಲಾಖೆಯಿಂದ ನನ್ನ ಕುಟುಂಬದ ಫೋನ್ ಕದ್ದಾಲಿಕೆ''ಆದಾಯ ತೆರಿಗೆ ಇಲಾಖೆಯಿಂದ ನನ್ನ ಕುಟುಂಬದ ಫೋನ್ ಕದ್ದಾಲಿಕೆ'

English summary
Chief minister H.D.Kumaraswamy has clarified that he never tapped anyone's telephonic conversation and B.S.Yeddyurappa can appeal to central government for further investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X