ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಪ್ರಕರಣ ತ್ವರಿತ ವಿಲೇವಾರಿಗೆ ಹೈಕೋರ್ಟ್ ಸೂಚನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 11: ಬಿಡಿಎ ವಿರುದ್ಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ತ್ವರಿತ ವಿಲೇವಾರಿಗಾಗು ಪ್ರಾಧಿಕಾರ ಪ್ರತಿನಿಧಿಸುವ ವಕೀಲರಿಗೆ ಅಗತ್ಯ ಮಾಹಿತಿ ಹಾಗೂ ಆಕ್ಷೇಪಣೆ ಸಲ್ಲಿಸಲು ಕಾರ್ಯತಂತ್ರ ರೂಪಿಸುವಂತೆ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಗೆ ಹೈಕೋರ್ಟ್ ನಿರ್ದೇಶಿಸಿದೆ.

ಕೆ. ನಾರಾಯಣಪುರ ಗ್ರಾಮದ ಎಚ್‌.ಎಂ. ಸುಬ್ರಮಣಿ ಎಂಬುವರು ಸಲಲ್ಇಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಪೀಠ, ಪ್ರಕರಣದ ವಿಚಾರಣೆಯಲ್ಲಿ ಬಿಡಿಎ ಪರ ವಕೀಲರಿಂದ ಸೂಕ್ತ ಸಹಕಾರ ಸಿಗದಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿತ್ತು. ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬಿಡಿಎ ಆಯುಕ್ತರಿಗೆ ನಿರ್ದೇಶಿಸಿತ್ತು.

ಬಿಡಿಎ ಜಮೀನಿಗೆ ಪ್ರತಿಯಾಗಿ ಸುರಂಗ ರಸ್ತೆ ನಿರ್ಮಿಸಲಿದೆ ಮೆಟ್ರೋ ನಿಗಮಬಿಡಿಎ ಜಮೀನಿಗೆ ಪ್ರತಿಯಾಗಿ ಸುರಂಗ ರಸ್ತೆ ನಿರ್ಮಿಸಲಿದೆ ಮೆಟ್ರೋ ನಿಗಮ

ಅದರಂತೆ ಮಂಗಳವಾರ ಆಯುಕ್ತ ರಾಕೇಶ್ ಸಿಂಗ್ ನ್ಯಾಯಪೀಠದ ಮುಂದೆ ಹಾಜರಿದ್ದರು. ಬಿಡಿಎ ವಿರುದ್ಧ ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ವಕೀಲರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಹಲವು ಪ್ರಕರಣಗಳಲ್ಲಿ ವರ್ಷಗಳಿಂದ ಆಕ್ಷೇಪಣೆಗಳನ್ನೇ ಸಲ್ಲಿಸಲಾಗಿಲ್ಲ. ಈ ಸಮ್ಯೆಗೆ ತಕ್ಷಣ ಪರಿಹಾರ ಕಂಡುಹಿಡಿಯಬೇಕು ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು.

HC directs BDA to strengthen its own legal cell

ಇನ್ನುಮುಂದೆ ಪ್ರಕರಣಗಳ ಶಿಘ್ರ ವಿಲೇವಾರಿಗೆ ಎಲ್ಲ ರೀತಿಯ ಸಹಕಾರವನ್ನು ವಕೀಲರಿಗೆ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ಆಯುಕ್ತರು ಭರವಸೆ ನೀಡಿದರು.

English summary
High court of Karnataka has given direction to Commissioner of Bangalore Development Authority on Tuesday that the authority should give proper information to its own lawyers about BDA cases which are pending before the court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X