ಬೆಂಬಲಕ್ಕೆ ನಿಂತಿದ್ದಕ್ಕೆ ಕಿರಣ್ ಬೇಡಿಗೆ ಧನ್ಯವಾದ ಹೇಳಿದ ಡಿ ರೂಪಾ
ಬೆಂಗಳೂರು, ಜುಲೈ 18: ವರ್ಗಾವಣೆ ನಂತರ ಮೊದಲ ಬಾರಿಗೆ ಮಾಧ್ಯಮಗಳ ಜತೆ ಮಾತನಾಡಿರುವ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಯುಕ್ತೆ ಡಿ ರೂಪಾ, "ಸರಕಾರಕ್ಕೆ ಅಧಿಕಾರಿಗಳನ್ನು ವರ್ಗವಾಣೆ ಮಾಡುವ ಹಕ್ಕಿದೆ, ನಾನು ಆದೇಶವನ್ನು ಪಾಲಿಸುತ್ತೇನೆ. ಬೆಲೆಕಟ್ಟಲಾಗದ ಬೆಂಬಲ ಕೊಟ್ಟಿದ್ದಕ್ಕಾಗಿ ಕಿರಣ್ ಬೇಡಿಯವರಿಗೆ ನನ್ನ ಧನ್ಯವಾದಗಳು," ಎಂದು ಡಿಐಜಿ ಡಿ. ರೂಪ ಹೇಳಿದ್ದಾರೆ.
ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ
ಇನ್ನು ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ, "ಆಕೆಗೆ (ಡಿ ರೂಪ) ರಸ್ತೆ ಸುರಕ್ಷತೆಯ ಬಹುಮುಖ್ಯವಾದ ಮತ್ತು ಜವಾಬ್ದಾರಿಯುತ ಹುದ್ದೆ ನೀಡಲಾಗಿದೆ. ಎಲ್ಲಾ ಹುದ್ದೆಗಳೂ ಪ್ರಮುಖವಾದವೇ, ಶಿಕ್ಷೆಯ ಹುದ್ದೆ ಎಂಬುದಿಲ್ಲ," ಎಂದು ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯ ಕಾರಾಗೃಹ ವಿಭಾಗದ ಎಡಿಜಿಪಿ ಆಗಿ ಎನ್.ಎಸ್ ಮೇಘರಿಕ್ ಅಧಿಕಾರ ಸ್ವೀಕರಿಸಿದ್ದಾರೆ. ಸತ್ಯನಾರಯಣ ರಾವ್ ನಿರ್ಗಮನದ ಹಿನ್ನಲೆಯಲ್ಲಿ ಅವರು ಈ ಹುದ್ದೆ ವಹಿಸಿಕೊಂಡಿದ್ದಾರೆ.
Recommended Video
My take on Roopa's Transfer.
— Kiran Bedi (@thekiranbedi) July 17, 2017
It was not the time for her transfer but to get to the bottom of the alleged irregularities and stem the rot!! pic.twitter.com/Vhjs5yz4VT