ಬೆಂಗಳೂರಿಗೆ ವಿದಾಯ ಹೇಳಿದ 'ಪಂಕ್ಚರ್ ಮಾಫಿಯಾ' ಪತ್ತೆದಾರ ಬೆನೆಡಿಕ್ಟ್
ಬೆನ್ನುಹತ್ತಿ ರಿಂಗ್ ರೋಡ್ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಪ್ರತಿ ದಿನ ರಾಶಿಗಟ್ಟಲೆ ಬೀಳುತ್ತಿದ್ದ ಮೊಳೆಗಳನ್ನು ಪತ್ತೆ ಹಚ್ಚಿದ್ದರು. ಈವರೆಗೆ 50 ಕೆಜಿಗೂ ಹೆಚ್ಚು ಮೊಳೆಗಳನ್ನು ಸಂಗ್ರಹಿಸಿದ್ದು, ಅದರ ವಿಲೇವಾರಿಯೂ ಕಷ್ಟವಾಗಿದೆಯಂತೆ.
ಬೆಂಗಳೂರು, ಫೆಬ್ರವರಿ 8: ಬೆಂಗಳೂರು ನಗರದ ಪಂಕ್ಚರ್ ಮಾಫಿಯಾ ಪತ್ತೆ ಹಚ್ಚಿದ್ದ ಬೆನೆಡಿಕ್ಟ್ ಜೆಬಕುಮಾರ್ ಅವರು ಶೀಘ್ರವೇ ಬೆಂಗಳೂರಿಗೆ ವಿದಾಯ ಹೇಳಲಿದ್ದಾರೆ.
ಇದೇ ಶುಕ್ರವಾರ (ಫೆಬ್ರವರಿ 10) ಅವರು ಬೆಂಗಳೂರನ್ನು ತೊರೆಯಲಿರುವುದಾಗಿ ತಿಳಿಸಿದ್ದಾರೆ. ಆದರೆ, ಅವರು ನಗರವನ್ನು ತೊರೆಯಲಿರುವ ಕಾರಣ ಬಹಿರಂಗಗೊಂಡಿಲ್ಲ. [ಪಂಕ್ಚರ್ ಮಾಫಿಯಾ ಪತ್ತೆ ಹಚ್ಚಿದ ಬೆಂಗಳೂರು ಇಂಜಿನಿಯರ್]
ಮುಂದೆ ಅವರು ಯಾವ ಊರಿಗೆ ತೆರಳಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿಯಿಲ್ಲ.
ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಅವರು, ಐದು ವರ್ಷಗಳ ಹಿಂದೆ ಕೆಲಸಕ್ಕೆ ಹೋಗಿ ಬರುವಾಗ ತಮ್ಮ ವಾಹನ ಪದೇ ಪದೇ ಪಂಕ್ಚರ್ ಆಗುತ್ತಿದ್ದುದನ್ನು ಗಮನಿಸಿದ್ದರಲ್ಲದೆ, ಅನೇಕರೂ ಇಂಥದ್ದೇ ತೊಂದರೆಗೊಳಗಾಗುತ್ತಿದ್ದನ್ನು ನೋಡಿದ್ದರು.

ಇದರ ಹಿಂದೆ ಯಾರದ್ದೋ ಕೈವಾಡವಿರಬೇಕೆಂದು ನಿರ್ಧರಿಸಿದ್ದ ಅವರು, ಅದರ ಬೆನ್ನುಹತ್ತಿ ರಿಂಗ್ ರೋಡ್ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಪ್ರತಿ ದಿನ ರಾಶಿಗಟ್ಟಲೆ ಬೀಳುತ್ತಿದ್ದ ಮೊಳೆಗಳನ್ನು ಪತ್ತೆ ಹಚ್ಚಿದ್ದರು. ಸುಮಾರು ಐದು ವರ್ಷಗಳಿಂದ ಇಂಥ ಮೊಳೆಗಳನ್ನು ಪತ್ತೆ ಹಚ್ಚುತ್ತಿದ್ದ ಅವರು, 50 ಕೆಜಿಗಿಂತಲೂ ಹೆಚ್ಚು ಮೊಳೆಗಳನ್ನು ಸಂಗ್ರಹಿಸಿದ್ದಾರೆ.
ಅವರ ಈ ಸೇವೆ, ದೇಶ ವಿದೇಶಗಳಲ್ಲೂ ಮಾಧ್ಯಮಗಳ ಮೂಲಕ ಹರಿದಾಡಿತ್ತು.
ಈ ಪ್ರಾಂತ್ಯದಲ್ಲಿ ಪಂಕ್ಚರ್ ಅಂಗಡಿಗಳ ಕೆಲಸಗಾರರು ವಾಹನಗಳು ಪಂಕ್ಚರ್ ಆಗಲೆಂದೇ ಇಂಥ ಕುತಂತ್ರಗಳನ್ನು ಮಾಡುತ್ತಿದ್ದರೆಂಬುದು ಅವರ ವಾದವಾಗಿತ್ತು.
ಈವರೆಗೆ ಸಂಗ್ರಹಿಸಲಾಗಿರುವ ಸುಮಾರು 50 ಕೆಜಿ ಮೊಳೆಗಳನ್ನು ವಿಲೇವಾರಿ ಮಾಡುವುದೇ ಅವರಿಗೆ ಕಷ್ಟವಾಗಿದೆಯೆಂದು ಅವರು ಹೇಳಿಕೊಂಡಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications