GBA Property Auction: ಕೊನೆಗೂ ಆಸ್ತಿ ತೆರಿಗೆ ಕಟ್ಟದ 7000 ಆಸ್ತಿಗಳ ಹರಾಜು, ಮಾರಾಟವಾಗಿದ್ದೆಷ್ಟು?
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪಾಲಿಕೆವಾರು ಆಸ್ತಿ ತೆರಿಗೆ ಕಟ್ಟದ ಮನೆ, ವಾಣಿಜ್ಯ ಕಟ್ಟಡಗಳ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಐದೂ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಆಸ್ತಿಗಳಿಂದ ಒಟ್ಟು ನೂರಾರು ಕೋಟಿ ರೂಪಾಯಿ ತೆರಿಗೆ ಪಾವತಿಸುವುದು ಬಾಕಿ ಇದೆ. ಎಚ್ಚರಿಕೆ ಕೊಟ್ಟು ಸಾಕಾದ ಪ್ರಾಧಿಕಾರ ಇದೀಗ ತೆರಿಗೆ ಪಾವತಿಸದ ಸ್ವತ್ತುಗಳನ್ನು ಫೆಬ್ರವರಿ 21ರಂದು ಹರಾಜು ಹಾಕಿದೆ.
ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಹರಾಜು ಮಾಡಲಾಗುತ್ತದೆ. ಅಷ್ಟರೊಳಗೆ ತೆರಿಗೆ ಕಟ್ಟಲು ಸಹ ವಕಾಶ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸುಮಾರು 7,000 ಆಸ್ತಿಗಳಿಂದ 430 ಕೋಟಿ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗುವುದು ಬಾಕಿ ಇದೆ. ಈಗಾಗಲೇ ಹಲವು ಬಾರಿ ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಆದರೆ ಪಾವತಿಸದವರ ವಿರುದ್ಧ ಈ ಹರಾಜು ಕಠಿಣ ಕ್ರಮಕ್ಕೆ ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೇ ಬಾಕಿ ಇರುವ ಆಸ್ತಿ ಮಾಲೀಕರಿಗೆ ನಿರಂತರ SMS ಸಂದೇಶ, IVRS ಕರೆಗಳ ಮೂಲಕ ಜ್ಞಾಪಿಸಲಾಗುತ್ತಿದೆ. ನಿರಂತರ ಫಾಲೋ ಅಪ್ ಮಾಡಿದರೂ ಕರೆಗಳನ್ನು ನಿರ್ಲಕ್ಷಿಸಿದ್ದಾರೆ. ಪಾವತಿ ಮೊಂಡುತನ ಪ್ರದರ್ಶಿಸಿದ್ದಾರೆ. ಬಳಿಕ ಆಸ್ತಿಗಳ ಜಪ್ತಿ ಆದೇಶಗಳನ್ನು ಹೊರಡಿಸಲಾಯಿತು. ಆದರೂ ಸ್ಪಂದಿಸದ ಮಾಲೀಕರ ಆಸ್ತಿಗಳನ್ನು ಹರಾಜಿಗೆ ಇಡಲಾಗಿದೆ.
7000 ಆಸ್ತಿಗಳ ಹರಾಜು ಇಟ್ಟ ಜಿಬಿಎ
ಈ ಹಿಂದೆ ಹೊರಡಿಸಿದ್ದ ಜಪ್ತಿ ಆದೇಶ ನಂತರ ಸುಮಾರು 60 ದಿನಗಳಿಗಿಂತ ಹೆಚ್ಚು ಅವಧಿ ಕಳೆದರೂ ಪಾವತಿ ಆಗದ ಕಾರಣ, ಕೊನೆಯ ಕ್ರಮವಾಗಿ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಅನ್ವಯ, ಮೇಲ್ಕಂಡ 7000 ಆಸ್ತಿಗಳನ್ನು ಹರಾಜಿಗೆ ಇಟ್ಟಿದೆ. ಹರಾಜು ನಡೆಯುವ ಮೊದಲು ಬಾಕಿದಾರರು ತಮ್ಮ ಬಾಕಿ ತೆರಿಗೆಯನ್ನು ಪಾವತಿಸುವ ಅವಕಾಶ ಇದೆ. ಪಾವತಿ ಮಾಡಿದಲ್ಲಿ ಹರಾಜು ರದ್ದುಪಡಿಸಲಾಗುತ್ತದೆ.
ಹರಾಜಿನಲ್ಲಿ 07 ಮಾರಾಟ, ಪ್ರಕ್ರಿಯೆ ಮುಂದುವರಿಕೆ
ಆದರೆ ಹಲವರು ಇನ್ನೂ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬಾಕಿ ಇರುವ ಪ್ರಕರಣಗಳಿಂದ ಪ್ರಾರಂಭಿಸಿ, ವಲಯಗಳ ಜಂಟಿ ಆಯುಕ್ತರು ಫೆ 21ರಂದು ಹರಾಜು ಪ್ರಕ್ರಿಯೆ ನಡೆಸಿದರು. ಈ ಹರಾಜಿನಲ್ಲಿ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಒಟ್ಟು ಆಸ್ತಿಗಳ ಪೈಕಿ ಉತ್ತರ ನಗರ ಪಾಲಿಕೆಯಲ್ಲಿ 2 ಮತ್ತು ಪೂರ್ವ ನಗರ ಪಾಲಿಕೆಯಲ್ಲಿ 5 ಆಸ್ತಿಗಳು ಮಾರಾಟವಾಗಿವೆ.
ಹರಾಜು ಮಾರಾಟ ಪ್ರಕ್ರಿಯೆ ನಿಯಮಿತವಾಗಿ ಮುಂದುವರಿಯಲಿದೆ. ಹರಾಜು ನೋಟಿಸ್ ಪಡೆದಿರುವ ಎಲ್ಲಾ ಬಾಕಿದಾರರು ತಮ್ಮ ಬಾಕಿ ತೆರಿಗೆಯನ್ನು ತಕ್ಷಣ ಪಾವತಿಸಲು ವಿನಂತಿಸಲಾಗಿದೆ. ಒಂದು ವೇಳೆ ಈಗಲೇ ವಿಳಂಬ ಮಾಡಿದರೆ ನಿಮ್ಮ ಆಸ್ತಿಗಳು ಮಾರಾಟವಾಗಲಿವೆ ಎಂದು ಜಿಬಿಎ ಕೊನೆ ಬಾರಿಗೆ ಎಚ್ಚರಿಸಿತು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications