Get Updates
Get notified of breaking news, exclusive insights, and must-see stories!

ಸ್ಮಾರ್ಟ್‌ ಸಿಟಿ ಯೋಜನೆ ಬರೆ, ಗಾಂಧಿಬಜಾರ್‌ ಹಳೆ ಪರಂಪರೆ ಕಣ್ಮರೆ

ಬೆಂಗಳೂರು, ಏಪ್ರಿಲ್ 19 : 130 ವರ್ಷಗಳ ಇತಿಹಾಸ ಹೊಂದಿರುವ ಗಾಂಧಿ ಬಜಾರ್‌ಗೆ ಆಧುನೀಕರಣದ ಸ್ಪರ್ಶ ನೀಡುವ ಯೋಜನೆಗೆ ಸ್ಥಳೀಯರು ಹಾಗೂ ಗಾಂಧಿ ಬಜಾರ್‌ನ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಪರಂಪರೆ ಹೊಂದಿರುವ ಗಾಂಧಿಬಜಾರ್‌ ಅನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಮುಖ್ಯ ರಸ್ತೆಯನ್ನು ಕಿರಿದಾಗಿಸಿ ಪಾದಚಾರಿ ಮಾರ್ಗವನ್ನು ವಿಸ್ತರಿಸುವ ನಗರ ಭೂಸಾರಿಗೆ ನಿರ್ದೇಶನಾನಲಯ(DULT) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP)ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಯೋಜನೆಯ ವಿರುದ್ಧವಾಗಿ ಸೋಮವಾರ ಗಾಂಧಿಬಜಾರ್‌ನ ವರ್ತಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಯೋಜನೆಯನ್ನ ಕೂಡಲೇ ಕೈಬಿಡಬೇಕು. ಗಾಂಧಿ ಬಜಾರ್‌ ಅನ್ನು ವಾಣಿಜ್ಯಕರಣಗೊಳಿಸುವುದರಿಂದ ಇಲ್ಲಿ ತುಂಬಾ ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬರುತ್ತಿರುವವರಿಗೆ ಭಾರೀ ಹೊಡೆತ ಬೀಳುತ್ತದೆ ಅಲ್ಲದೆ ಇದು ಬಸವನಗುಡಿನ ಪರಂಪರೆಯನ್ನು ಅಳಿಸಿ ಹಾಕಿದಂತಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Gandhi Bazaar street vendors protesting against BBMP

"ಬೆಂಗಳೂರಿನ ಅತ್ಯಂತ ಶ್ರೀಮಂತ ಪರಂಪರೆಯನ್ನು ಮತ್ತು ಎಲ್ಲಾ ವರ್ಗದ ಜನರನ್ನು ಆಕರ್ಷಿಸುವ ಹಾಗೂ ಸಾಂಸ್ಕೃತಿಕವಾಗಿ ಹಳೆಯ ಕ್ಷೇತ್ರವೆಂದರೆ ಅದು ಬಸವನಗುಡಿ, ಇಲ್ಲಿ ಯಾವುದೇ ಕಮರ್ಷಿಯಲ್ ಸ್ಟ್ರೀಟ್‌ನಂತಹ ಶಾಂಪಿಗ್ ಮಾಲ್ ಇಲ್ಲ, ಪಾಶ್ಚಿಮಾತ್ಯ ಅಂಗಡಿಗಳಿಲ್ಲ. ಹೀಗಾಗಿ 130 ವರ್ಷಗಳ ಹಳೆಯ ಪರಂಪರೆಯನ್ನ ಬಸವನಗುಡಿ ಕ್ಷೇತ್ರ ಉಳಿಸಿಕೊಂಡು ಬಂದಿದೆ. ಆದರೆ ಈಗ ಈ ಯೋಜನೆ ತರುವುದರಿಂದ ಬಸವನಗುಡಿಯ ಸಾಂಸ್ಕೃತಿಕ ಮೆರಗು ಮಾಯವಾಗಲಿದೆ. ಹೀಗಾಗಿ ಈ ಯೋಜನೆಯನ್ನ ನಾವು ವಿರೋಧಿಸುತ್ತೇವೆ," ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವರ್ತಕರೊಬ್ಬರು ತಿಳಿಸಿದ್ದಾರೆ.

ಇನ್ನು ನಗರ ಭೂ ಸಾರಿಗೆ ನಿರ್ದೇಶಾನಲಯದ ಪ್ರಕಾರ ಈ ಯೋಜನೆಯಲ್ಲಿ ಮೊದಲಿಗೆ ಗಾಂಧಿ ಬಜಾರ್‌ ರಸ್ತೆಯಲ್ಲಿರುವ ಅಕ್ಕಪಕ್ಕದ ಹೂವಿನ ಮಾರುಕಟ್ಟೆಯನ್ನು ಬಹು ಹಂತದ ಕಾರ್ ಪಾರ್ಕಿಂಗ್ ಆಗಿ ಪರಿವರ್ತಿಸಲಾಗುತ್ತದೆ. ಪಾರ್ಕಿಂಗ್‌ಗೆ ದಾರಿ ಮಾಡಿಕೊಡಲು ಬೀದಿ ವ್ಯಾಪಾರಿಗಳನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಿದೆ.

ಇನ್ನು ಈ ಯೋಜನೆಯ ಕುರಿತಾಗಿ ಒಕ್ಕಲಿಗರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಎಂ ನಾರಾಯಣ್ ಮಾತನಾಡಿದ್ದು, "ಈ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತದೆ, ಇದರ ಬದಲು ಬಿಬಿಎಂಪಿ ಹಾಗೂ ಡಲ್ಟ್‌ ಸೇರಿ ಮಾರಾಟಗಾರರಿಗೆ ಸ್ಟಾಲ್ ವ್ಯವಸ್ಥೆಗಳು, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಂತಹ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಮೂಲಕ ವರ್ತಕರ ಜೀವನವನ್ನ ಸುಧಾರಿಸುವ ಕೆಲಸವನ್ನ ಮಾಡಬೇಕು. ಅದನ್ನು ಬಿಟ್ಟು ಪಾದಚಾರಿ ಮಾರ್ಗವನ್ನು ವಿಸ್ತರಿಸುವುದರಿಂದ ತಲೆ ಮಾರುಗಳಿಂದ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬರುತ್ತಿರುವವರ ಮೇಲೆ ಆರ್ಥಿಕ ಹೊಡೆತ ಬೀಳುತ್ತದೆ. ಅಲ್ಲದೆ ಬಸವನಗುಡಿಯ ಐತಿಹಾಸಿಕ ಪರಂಪರೆಯು ಈ ಆಧುನಿಕರಣದಿಂದ ನಾಶಗೊಳ್ಳುತ್ತದೆ. ಹೀಗಾಗಿ ಈ ಸ್ಮಾರ್ಟ್‌ಸಿಟಿ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು," ಅಂತ ಎಂ ನಾರಾಯಣ್ ಮನವಿ ಮಾಡಿಕೊಂಡಿದ್ದಾರೆ.

Gandhi Bazaar street vendors protesting against BBMP

"ಗಾಂಧಿ ಬಜಾರ್ 130 ವರ್ಷಗಳ ಇತಿಹಾಸ ಹೊಂದಿದೆ. ಹೀಗಾಗಿ ಈ ಪ್ರದೇಶವನ್ನ ಪ್ರಸ್ತುತ ಸ್ಥಿತಿಯಲ್ಲಿ ಸಂರಕ್ಷಿಸುವ ಕೆಲಸ ಸಮುದಾಯ ಮಾಡಬೇಕು. ಅಲ್ಲದೆ ಅದನ್ನು ಸುಧಾರಿಸಲು ಅಗತ್ಯವಿರುವ ಅಭಿವೃದ್ದಿಗೆ ಅವಕಾಶ ಕಲ್ಪಸಿಕೊಡಬೇಕು, ಯಾವುದೇ ಯೋಜನೆಗಳನ್ನು ತರುವ ಮೊದಲು ಆ ಯೋಜನೆಯ ಕುರಿತಾಗಿ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದುಕೊಳ್ಳುವುದು ಮುಖ್ಯ. ಇದರಿಂದ ಮುಂದೆ ಆ ಯೋಜನೆ ತಂದರೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ," ಅಂತ ಮತ್ತೊಬ್ಬ ಪ್ರತಿಭಟನಾಕಾರ ವಿಷ್ಣು ಎಂಬುವವರು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಸವನಗುಡಿಯ ನಿವಾಸಿಗಳ ಸಂಘದ ಅಧ್ಯಕ್ಷ ಗುರುಪ್ರಸಾದ್, ಆಮ್‌ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್, ಸುಧೀಂದ್ರ, ಕ್ರಿಕೆಟ್ ತರಬೇತುದಾರ ಮುರುಳೀಧರ್ ಭಾಗವಹಿಸಿ ಈ ಯೋಜನೆಯ ವಿರುದ್ದ ಪ್ರತಿಭಟನೆ ನಡೆಸಿದ್ದರು.

ಒಟ್ಟಾರೆ, ಐರೋಪ್ಯ ಶೈಲಿಯ ಆಧುನೀಕರಣವವನ್ನು ಗಾಂಧಿ ಬಜಾರ್‌ನಲ್ಲಿ ಮಾಡುವುದರಿಂದ ನೂರಾರು ವರ್ಷಗಳ ಇತಿಹಾಸ ಪರಂಪರೆಯನ್ನ ಬಸವನಗುಡಿ ಕ್ಷೇತ್ರ ಕಳೆದುಕೊಳ್ಳಲಿದೆ. ಇದರಿಂದ ತುಂಬಾ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಪರಂಪರೆ ಸಂಪೂರ್ಣ ಆಧುನೀಕರಣವಾಗಿ ಬದಲಾಗಲಿದ್ದು, ಮುಂದಿನ ಪೀಳಿಗೆಗೂ ಇದರ ಅನುಪಸ್ಥಿತಿ ಕಾಡುವ ಸಾಧ್ಯತೆ ಇದೆ. ಅಲ್ಲದೆ ತಲೆಮಾರುಗಳಿಂದ ವ್ಯಾಪಾರ ಮಾಡಿಕೊಂಡು ಇದರಲ್ಲೇ ಜೀವನ ಕಟ್ಟಿಕೊಂಡಿರುವ ಎಷ್ಟೂ ಕುಟುಂಬಗಳು ಸಹ ಈ ಯೋಜನೆಯಿಂದ ಬೀದಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಕೂಡ ಇಂತಹ ಅವೈಜ್ಞಾನಿಕ ಯೋಜನೆಯ ಕುರಿತು ಮತ್ತೊಮ್ಮೆ ಚಿಂತನೆ ನಡೆಸಿ ಮುಂದಿನ ತೀರ್ಮಾ ನ ಕೈಗೊಳ್ಳಬೇಕಿದೆ.

Recommended Video

      ದುಃಖದ ಮಡುವಿನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ:ಮಗನ ಸಾವಿಗೆ ರೊನಾಲ್ಡೊ ಹೇಳಿದ್ದೇನು? | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+