5 ವರ್ಷಗಳ ನಂತರ ಗಾಲಿ ರೆಡ್ಡಿ, ಬಂಧುಗಳೇ ಅಂದಾಗ!
ಬಂಧುಗಳೇ, ಏನು ಈ ಐದು ವರ್ಷ ನಡೆಯಿತು ಎನ್ನೋದನ್ನಾ ಮರೆತುಬಿಟ್ಟಿದ್ದೀನಿ. ನಾನು ಇವತ್ತು ಇಲ್ಲಿ ನಿಲ್ಲಲು 'ರೆಡ್ಡಿ' ಅನ್ನುವುದೇ ಕಾರಣ...ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭರ್ಜರಿ ಭಾಷಣ, ರೆಡ್ಡಿ ಜನ ಸಂಘದ ಸಮಾವೇಶ ಮುಖ್ಯ ಆಕರ್ಷಣೆಯಾಗಿತ್ತು
ಬೆಂಗಳೂರು, ಜನವರಿ 30: ರೆಡ್ಡಿ ಜನ ಸಂಘದ ಪ್ರಪ್ರಥಮ ಸಮಾವೇಶದಲ್ಲಿ ಹೇಗೆಲ್ಲ ಮಿಂಚಬೇಕು ಎಂದು ಯಾರೆಲ್ಲ ಯೋಜನೆ ಹಾಕಿಕೊಂಡಿದ್ರೋ ಗೊತ್ತಿಲ್ಲ. ಆದರೆ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸರಿ ಸುಮಾರು ಐದು ವರ್ಷಗಳ ಬಳಿಕ ಬೃಹತ್ ಸಮಾವೇಶದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಮೈಕ್ ಹಿಡಿದು ಕ್ವಿಕ್ ಆಗಿ ಭಾಷಣ ಮಾಡಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಮಾಜಿ ಮುಖ್ಯಮಂತ್ರಿ ಹಾಲಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರನ್ನು ಸ್ವಾಗತಿಸಿ ವೇದಿಕೆಗೆ ಕರೆ ತಂದ ಸತೀಶ್ ರೆಡ್ಡಿ ಅವರ ಹಿಂಬದಿಯಲ್ಲೇ ಇದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಏನು ಹುಕ್ಕಿ ಬಂತೋ ಗೊತ್ತಿಲ್ಲ.[ರೆಡ್ಡಿ ಸಮುದಾಯಕ್ಕೆ ಆಶ್ವಾಸನೆ ಕೊಟ್ಟ ಸಿದ್ದರಾಮಯ್ಯ]

ಮೈಕ್ ಹತ್ತಿರಕ್ಕೆ ಬಂದು, ಬಂಧುಗಳೇ ಎನ್ನುತ್ತಿದ್ದಂತೆ, ಭಾರಿ ಚಪ್ಪಾಳೆಯ ಸ್ವಾಗತ ಸಿಕ್ಕಿತು. ಒಂದು ಕ್ಷಣ ಬಿಜೆಪಿಯ ಹಿರಿ-ಕಿರಿ ತಲೆಗಳತ್ತ ಅತ್ತ ತಿರುಗಿ ನೋಡುವಂತಾಯಿತು. ಭಾಷಣ ಮುಂದುವರೆಸಿದ ಗಾಲಿ ರೆಡ್ಡಿ, ಏನು ಈ ಐದು ವರ್ಷ ನಡೆಯಿತು ಎನ್ನೋದನ್ನಾ ಮರೆತುಬಿಟ್ಟಿದ್ದೀನಿ. ನಾನು ಇವತ್ತು ಇಲ್ಲಿ ನಿಲ್ಲಲು 'ರೆಡ್ಡಿ' ಅನ್ನುವುದೇ ಕಾರಣ, ನನ್ನನ್ನು ಈ ಮಟ್ಟಕ್ಕೆ ತಂದಿತ್ತು, ನನಗೆ ಗೌರವ ನೀಡುತ್ತಿರುವುದಕ್ಕೆ ರೆಡ್ಡಿ ಅನ್ನುವುದೇ ಕಾರಣ ಎಂದರು.
ನಾನೇನು ರಾಜಕೀಯವಾಗಿ ಬೆಳೆದು ಸಿಎಂ ಆಗಬೇಕಾಗಿಲ್ಲ. ರಾಜಕೀಯವಾಗಿ ಯಾವ ಆಶೆನೂ ಉಳಿದಿಲ್ಲ. ನಾನು ನನ್ನ ಸಮುದಾಯಕ್ಕೆ ಮುಂದಿನ ಅವಧಿಯನ್ನು ಮೀಸಲಿಡುತ್ತೇನೆ. ನನ್ನ ಸಮುದಾಯ ಚಿನ್ನಕ್ಕೆ ಸಮನಾಗಿದೆ ಎಂದರು.
ಸಮಾವೇಶದಲ್ಲಿ ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸಬೇಕು, ಕೇಂದ್ರ ಮೀಸಲಾತಿ ನೀತಿಯಡಿ ಒಬಿಸಿ ಸೇರಿಸಬೇಕು, ಮಹಾಯೋಗಿ ವೇಮನ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರ ವತಿಯಿಂದ ಆಚರಿಸಬೇಕು ಎಂಬುದು ಬಹುಕಾಲದ ಬೇಡಿಕೆ ಎಂದು ಹೇಳಿ ಮೈಕ್ ಬಿಟ್ಟು ಸರಿದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಸಚಿವ ಎಂಬಿ ಪಾಟೀಲ್, ಮಾಜಿ ಸಚಿವ ಜನಾರ್ದನ ರೆಡ್ಡಿ, ಪರಿಸರವಾದಿ ಯಲ್ಲಪ್ಪ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ











Click it and Unblock the Notifications