ಬಿಎಸ್ ವೈ ಸಮ್ಮುಖದಲ್ಲಿ ಮಾಜಿ ರಾಷ್ಟ್ರಪತಿಗಳ ಮೊಮ್ಮಗ ಇಂದು ಬಿಜೆಪಿಗೆ
ಬೆಂಗಳೂರು, ಜನವರಿ 26: ಮಾಜಿ ರಾಷ್ಟ್ರಪತಿ, ದಿವಗಂತ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಮೊಮ್ಮಗ ಸುಬ್ರಹ್ಮಣ್ಯಂ ಶರ್ಮಾ ಜಿ. ಅವರು ಶುಕ್ರವಾರ ಬಿಜೆಪಿ ಸೇರಲಿದ್ದಾರೆ.
ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ, ಗಣರಾಜ್ಯೋತ್ಸವ ದಿನದಂದು ಶರ್ಮಾ ಬಿಜೆಪಿ ಸೇರಲಿದ್ದಾರೆ.
44 ವರ್ಷ ವಯಸ್ಸಿನ ಸುಬ್ರಹ್ಮಣ್ಯಂ ಶರ್ಮಾ ಗೌರವರಂ ಅವರು ಮಾಜಿ ರಾಷ್ಟ್ರಪತಿ, ಶಿಕ್ಷಕ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಮೊಮ್ಮಗ. ಚೆನ್ನೈಯಲ್ಲಿ ವಾಸವಿದ್ದ ಅವರು 2006 ರಲ್ಲಿ ಬೆಂಗಳೂರಿಗೆ ಬಂದು,ಇಲ್ಲಿಯೇ ನೆಲೆಸಿದ್ದರು. 2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಸರ್ವಪಳ್ಳಿ ರಾಧಾಕೃಷ್ಣನ್ ಅವರು 1962 ರಿಂದ 1967 ರವರೆಗೆ ಭಾರತದ ಎರಡನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದರು. ಅತ್ಯುತ್ತಮ ಶಿಕ್ಷಕರೂ, ಶಿಕ್ಷಣತಜ್ಞರೂ ಆಗಿದ್ದ ಅವರ ಜನ್ಮದಿನವನ್ನು(ಸೆ.5) ಇಂದಿಗೂ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.












Click it and Unblock the Notifications