ಮಾಜಿ ಅಬಕಾರಿ ಸಚಿವ ಪ್ರೇಮಾನಂದ್ ಎಸ್ ಜೈವಂತ್ ನಿಧನ
ಬೆಂಗಳೂರು, ಡಿಸೆಂಬರ್ 12: ಮಾಜಿ ಅಬಕಾರಿ ಸಚಿವ ಪ್ರೇಮಾನಂದ್ ಎಸ್ ಜೈವಂತ್ ನಿಧನರಾಗಿದ್ದಾರೆ.
ಅವರಿಗೆ 77 ವರ್ಷ ವಯಸ್ಸಾಗಿತ್ತು. ಶಿರಸಿ ಭಾಗದಿಂದ ಆಯ್ಕೆಯಾಗಿ ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಸಾಕಷ್ಟು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಅವರು ಜನತಾ ಪರಿವಾರದಿಂದ ಗುರುತಿಸಿಕೊಂಡವರಾಗಿದ್ದರು. ಅವರು 1998ರಲ್ಲಿ ಅಂದಿನ ಮುಖ್ಯಮಂತ್ರಿ ಜೆಎಚ್ ಪಾಟೀಲ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದರು.
Recommended Video
ಹೊಸ
ವರುಷ
ಆಚರಣೆ
ಮೂಡ್
ಅಲ್ಲಿ
ಇದ್ರೆ
ಬ್ರೇಕ್
ಹಾಕಿ!
|
New
Year
2021
|
Oneindia
Kannada
ಅವರು 1994ರಲ್ಲಿ ಮೊದಲ ಬಾರಿಗೆ ಶಿರಸಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 199ರಲ್ಲಿ ಪಕ್ಷೇತರರಾಗಿ , 2004ರಲ್ಲಿ ಕಾಂಗ್ರೆಸ್ನಿಂದ ಹಾಗೂ 2008ರಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
Comments
English summary
Former Minister Premanand S Jaivanth Passed Aaway In Bengaluru On December 11.