ಬೆಂಗಳೂರಿಗರಿಗೆ ಟ್ವೀಟ್ ಮೂಲಕ ಭಾಸ್ಕರಾವ್ ಮನವಿ
ಬೆಂಗಳೂರು, ಜೂನ್ 24 : ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರಾವ್ ಬೆಂಗಳೂರಿಗರಿಗೆ ಟ್ವೀಟ್ ಮೂಲಕ ಮನವಿಯೊಂದನ್ನು ಮಾಡಿದ್ದಾರೆ.
ಬುಧವಾರ ಒಂದೇ ದಿನ ನಗರದಲ್ಲಿ 173 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1678ಕ್ಕೆ ಏರಿಕೆಯಾಗಿದೆ.
ಬೆಂಗಳೂರು; ಪೊಲೀಸರಿಗಾಗಿ 2 ಕೋವಿಡ್ ಆಸ್ಪತ್ರೆ ಮೀಸಲು
ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಬುಧವಾರ ರಾತ್ರಿ ಟ್ವೀಟ್ ಮಾಡಿದ್ದು, "ಪ್ರತಿಯೊಬ್ಬ ಬೆಂಗಳೂರಿಗರು ಕೊರೊನಾ ವಾರಿಯರ್ಸ್ ಆಗಬೇಕಿದೆ" ಎಂದು ಕರೆ ನೀಡಿದ್ದಾರೆ. ಭಾಸ್ಕರರಾವ್ ತಮ್ಮ ಟ್ವೀಟ್ನಲ್ಲಿ ಮೂರು ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು
*
ಶೇ
100ರಷ್ಟು
ಮಾಸ್ಕ್
ಧರಿಸುವುದು
*
ಸ್ಯಾನಿಟೈಸರ್
ಬಳಕೆ
ಮಾಡುವುದು
*
ಕಡ್ಡಾಯವಾಗಿ
ಸಾಮಾಜಿಕ
ಅಂತರ
ಕಾಪಾಡುವುದು
ರಾಜ್ಯದಲ್ಲಿಂದು 322 ಕೊರೊನಾ ಕೇಸ್ ಪತ್ತೆ, ಬೆಂಗಳೂರು ಟಾಪ್
ಕಳೆದ ಎರಡು ವಾರಗಳಿಂದ ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಹೆಚ್ಚು ಕಡಿಮೆ ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆ 100ರ ಗಡಿಯನ್ನು ದಾಟುತ್ತಿದೆ.
Requesting each Bangalurean to become Corona Warrior. If all Organizations and Associations join, we can flatten the curve.
— Bhaskar Rao IPS (@deepolice12) June 24, 2020
1. Ensure 100% Mask,
2. Use Sanitizer. 3.Compulsory ensure Safe Distance
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ನಗರದಲ್ಲಿ ಹೆಚ್ಚು ಪ್ರಕರಣಗಳು ಇರುವ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ ಇದುವರೆಗೂ 475 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ನಗರದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1678. ಇವುಗಳಲ್ಲಿ ಸಕ್ರಿಯ ಪ್ರಕರಣಗಳು 1124.