4 ದಿನಗಳ ಕಾಲ ನಡೆಯಲಿದೆ 'ಈ ಕೆಳಗಿನವರು' ನಾಟಕ ಪ್ರದರ್ಶನ
ಹಲವಾರು ವರ್ಷಗಳಿಂದ ರಂಗ ತರಬೇತಿ ನೀಡುತ್ತ ನಾಟಕಗಳನ್ನು ಮಾಡುತ್ತಲಿರುವ 'ಅಭಿನಯ ತರಂಗ' ರಂಗಶಾಲೆಯು ಈ ಬಾರಿ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬಿ ಟಿ ದೇಸಾಯಿ ರವರು ಕನ್ನಡಕ್ಕೆ ರೂಪಾಂತರ ಗೊಳಿಸಿರುವ ಮಾಕ್ಸಿಮ್ ಗಾರ್ಕ್ಸಿ ರವರ 'The Lower Depth' ನಾಟಕವನ್ನು ರಂಗದ ಮೇಲೆ ತರುತ್ತಿದೆ.
'ಈ ಕೆಳಗಿನವರು' ಎಂಬ ಈ ನಾಟಕ ಹೆಸರಿನ ಮೂಲಕವೇ ಗಮನ ಸೆಳೆಯುತ್ತಿದೆ. ಇದೇ ನವೆಂಬರ್ ತಿಂಗಳ 15, 16 ,17 ಮತ್ತು 18 ರಂದು ಬನಶಂಕರಿಯ ಸುಚಿತ್ರ ಚಲನಚಿತ್ರ ಅಕಾಡೆಮಿಯ ನಾಣಿ ಭಾನು ಅಂಗಳದಲ್ಲಿ ಪ್ರದರ್ಶನ ನಡೆಯಲಿದೆ.
ಗೋಪಾಲ ಕೃಷ್ಣ ದೇಶಪಾಂಡೆ ಮತ್ತು ಕಾಳಿಪ್ರಸಾದ್ ರವರು ನಿರ್ದೇಶನ ಮಾಡಿರುವ ಈ ನಾಟಕಕ್ಕೆ ಭಾಸ್ಕರ್ ನಾಗಮಂಗಲ, ಕಿರಣ್ ನಾಯಕ್, ರವರು ವಿನ್ಯಾಸ ಮಾಡಿದ್ದು, ಹೇಮಂತ್ ಕುಮಾರ್ ರವರು ರಂಗ ಸಜ್ಜಿಕೆ, ಪ್ರಶಾಂತ್ ಕೆ ಎಸ್ ರವರು ಸಂಗೀತ ನಿರ್ವಾಹಣೆ ಮಾಡಲಿದ್ದಾರೆ.

ಅಂದಹಾಗೆ, ಈ ನಾಟಕದ ಪಾತ್ರ ಮತ್ತು ಪಾತ್ರದಾರಿಗಳ ಹೆಸರು ಇಂತಿವೆ. ಜಹಗೀರದಾರ ಪಾತ್ರದಲ್ಲಿ ಶಿವರಾಜ್ ಡಿ ಎನ್ ಎಸ್, ಸುಂದ್ರಿಯಾಗಿ ಪವಿತ್ರ ಬಿ, ಕಾಶ್ಯವ್ವ ರೂಪದಲ್ಲಿ ಭೂಮಿಕ ಪ್ರಸನ್ನ, ಹನುಮಂತನ ವೇಷದಲ್ಲಿ ನಿಂಗರಾಜು, ಗೌರವ್ವಳಾಗಿ ಮೀನಾಕ್ಷಿ, ಬೊಬ್ಬಣ್ಣನಾಗಿ ಗುರು ಪ್ರಸಾದ್, ಸಂಕಪ್ಪ ಪಾತ್ರದಲ್ಲಿ ಸಿದ್ದಾರುಡ್, ನಟ ಪಾತ್ರದಲ್ಲಿ ಅರುಣ್ ಜಾನಕಿ ರಾಮ್ , ವಾಸ್ಯರಾಗಿ ನಿರಂಜನ್ ಎಸ್ ವಿ, ಕ್ರಿಷ್ಟಪ್ಪ ರೂಪದಲ್ಲಿ ಚೇತನ್ ರಾಜ್, ರತ್ನಳಾಗಿ ದಿವ್ಯ ಎಸ್, ಲಕ್ಕಜ್ಜನಾಗಿ ವಿಕ್ರಮ್ ಎಸ್ ವಿ, ವಾಸಕ್ಕ ಪಾತ್ರದಲ್ಲಿ ಗೌತಮಿ ಹಾಗೂ ಸಿದ್ದರಾಜ ಪಾತ್ರದಲ್ಲಿ ಪ್ರೀತಂ ಗೌಡ ನಟಿಸುತ್ತಿದ್ದಾರೆ.
-
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ












Click it and Unblock the Notifications