ಆರೋಗ್ಯ ಸಚಿವ ಕೆ.ಸುಧಾಕರ್ ಪ್ರತಿಜ್ಞೆಗೆ ಡಾ.ಭುಜಂಗ ಶೆಟ್ಟಿ ಶ್ಲಾಘನೆ
ಬೆಂಗಳೂರು, ಏಪ್ರಿಲ್ 12: ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕಳೆದ ಬುಧವಾರ ನಡೆದ ವಿಶ್ವ ಆರೋಗ್ಯ ದಿನದಂದು ನಡೆದ ಕಾರ್ಯಕ್ರಮದಲ್ಲಿ ತಮ್ಮ ನೇತ್ರದಾನ ಮಾಡುವ ಪ್ರತಿಜ್ಞೆ ಮಾಡಿದ್ದರು.
ಆರೋಗ್ಯ ಸಚಿವರ ಈ ಮಹತ್ವದ ನಿರ್ಧಾರವನ್ನು ಸ್ವಾಗತಿಸಿರುವ ನಾರಾಯಣ ನೇತ್ರಾಲಯದ ಡಾ.ಕೆ.ಭುಜಂಗ ಶೆಟ್ಟಿ, "ನಮ್ಮ ಸಚಿವರ ಈ ನಿರ್ಧಾರವು ನೇತ್ರದಾನ ಮಾಡುವ ಅರಿವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹಾಗೂ ಸಾವಿರಾರು ಮಂದಿಗೆ ದೃಷ್ಟಿ ನೀಡುವ ವಾಸ್ತವ ನೇತ್ರದಾನದಲ್ಲಿ ಬಹಳ ದೂರ ಸಾಗಲಿದೆ" ಎಂದು ಹೇಳಿದರು.
ಇತ್ತೀಚೆಗೆ ನಾರಾಯಣ ನೇತ್ರಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವ ಡಾ.ಸುಧಾಕರ್ ಅವರು ಡಾ.ಭುಜಂಗ ಶೆಟ್ಟಿ ಅವರಿಗೆ ರಾಜ್ಯವ್ಯಾಪಿ ನೇತ್ರದಾನ ಅಭಿಯಾನದ ನೇತೃತ್ವ ವಹಿಸಲು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ಕೋರಿದ್ದಾರೆ.

ಭಾರತ ದೇಶದಲ್ಲಿ ನೇತ್ರದಾನ ಪಡೆಯಲು ಸುಮಾರು 30 ಲಕ್ಷಗಳಕ್ಕಿಂತ ಹೆಚ್ಚಿನ ಅಂಧ ಜನರು ಕಾಯುತ್ತಿರುವುದರಿಂದ ಅದನ್ನು ಸಾಧಿಸಲು ಭಾರತ ದೇಶಕ್ಕೆ ಎಲ್ಲಾ ಸಂಪನ್ಮೂಲಗಳ ಅವಶ್ಯಕತೆ ಇದೆ.
ಕರ್ನಾಟಕದಲ್ಲಿ ಶೇ.50ರಷ್ಟು ನೇತ್ರ ಸಂಗ್ರಹವನ್ನು ನಾರಾಯಣ ನೇತ್ರಾಲಯ ನಡೆಸುತ್ತಿದೆ. ಕಳೆದ ತಿಂಗಳು ಖ್ಯಾತ ನಟ ಶಿವರಾಜ್ಕುಮಾರ್ ಕೂಡಾ ತಮ್ಮ ನೇತ್ರದಾನದ ಪ್ರತಿಜ್ಞೆ ಮಾಡಿದರು ಮತ್ತು ನಾರಾಯಣ ನೇತ್ರಾಲಯದಲ್ಲಿ ಡಾ.ಭುಜಂಗ ಶೆಟ್ಟಿ ಅವರಿಂದ ಡೋನರ್ ಕಾರ್ಡ್ ಸ್ವೀಕರಿಸಿದ್ದರು.
"ನೇತ್ರದಾನ ವ್ಯಕ್ತಿಗೆ ಬರೀ ದೃಷ್ಟಿ ನೀಡುವುದಲ್ಲ, ಅದಕ್ಕಿಂತ ಹೆಚ್ಚಿನದಾಗಿದೆ ಮತ್ತು ಹೀಗೆ ಪಡೆದ ಕಾರ್ನಿಯಾದ ಗರಿಷ್ಠ ಬಳಕೆಗೆ ನಮ್ಮಲ್ಲಿ ತಂತ್ರಜ್ಞಾನವಿದೆ" ಎಂದು ಡಾ.ಭುಜಂಗ ಶೆಟ್ಟಿ ಹೇಳಿದರು.

"ಕಳೆದ ವರ್ಷದ ಕೊರೊನಾ ಮಾಹಾಮಾರಿ ಅವಧಿಯಲ್ಲಿ ನೇತ್ರದಾನ ಬಹುತೇಕ ಶೂನ್ಯಕ್ಕೆ ಕುಸಿದಿತ್ತು. ಸಕಾಲಿಕ ನೇತ್ರದಾನ ಮತ್ತು ಗಣ್ಯರಿಂದ ನೇತ್ರದಾನದ ಮನವಿಗಳು ಜನರನ್ನು ನೇತ್ರದಾನ ಮಾಡುವತ್ತ ಉತ್ತೇಜಿಸುತ್ತವೆ" ಎಂದು ಡಾ.ಶೆಟ್ಟಿ ತಿಳಿಸಿದರು.
ಆರೋಗ್ಯ ಸಚಿವ ಡಾ.ಸುಧಾಕರ್ ರವರು ಎಲ್ಲಾ ಜನತೆಗೆ ನೇತ್ರದಾನ ಮಾಡಲು ಮನವಿಯನ್ನು ಮಾಡಿದ್ದಾರೆ. ನಾವು ಮಾಡಬಹುದಾದ ನೇತ್ರದಾನವು ಇತರರಿಗೆ ಒಂದು ವರವಾಗಿರಬಹುದು. ಇದು ಒಂದು ಉದಾತ್ತ ಕಾರಣ ಆದ್ದುದರಿಂದ ಎಲ್ಲರೂ ಇತರರ ಜೀವನದಲ್ಲಿ ಒಂದು ಕಾಂತಿಯ ರೇಖೆಯನ್ನು ತರಲು ತಮ್ಮನ್ನು ನೇತ್ರದಾನ ಮಾಡುತ್ತೇವೆಂದು ನೋಂದಣಿ ಮಾಡಿಕೊಳ್ಳಬೇಕೆಂದರು.
ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಆರ್ಜಿಯುಎಚ್ಎಸ್ ನಿಂದ ವಾಕಥಾನ್ ಆಯೋಜಿಸಲಾಗಿತ್ತು. ಡಾ.ಸುಧಾಕರ್ ಈ ವಿಶ್ವ ಆರೋಗ್ಯ ದಿನದಂದು ನೇತ್ರದಾನದ ಪ್ರತಿಜ್ಞೆ ಪ್ರಕಟಿಸಿರುವುದು ತಮಗೆ ಸಂತೃಪ್ತಿಯ ಭಾವ ತಂದಿದೆ ಎಂದು ಡಾ.ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟರು.
"ನಮ್ಮ ದಾನ ಇತರರಿಗೆ ಮಹದುಪಕಾರ ಮಾಡಬಲ್ಲದು. ಇದು ನಿಜಕ್ಕೂ ಶ್ರೇಷ್ಠ ಕಾರ್ಯ ಮತ್ತು ಪ್ರತಿಯೊಬ್ಬರೂ ಇತರರಲ್ಲಿ ಭರವಸೆಯ ಬೆಳಕನ್ನು ತರಲು ನೋಂದಣಿ ಮಾಡಿಕೊಳ್ಳಬೇಕು" ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications