Get Updates
Get notified of breaking news, exclusive insights, and must-see stories!

BWSSB: ನೀರಿನ ಅಕ್ರಮ ಸಂಪರ್ಕ ಹೊಂದಿರುವವರಿಗೆ ಶಾಕ್‌, ಇನ್ಮುಂದೆ ಕಳ್ಳಾಟ ನಡೆಯಲ್ಲ!

ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಅಕ್ರಮ ಸಂಪರ್ಕಗಳ ಬಗ್ಗೆ ಮಾಹಿತಿ ಬಂದಿರುವ ಹಿನ್ನೆಲೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು (ಬಿಡಬ್ಲ್ಯುಎಸ್‌ಎಸ್‌ಬಿ) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಲ್ಲದೆ ನೀರು ಸೋರಿಕೆ ಪ್ರಕರಣಗಳ ಪತ್ತೆಗೂ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದಕ್ಕಾಗಿ ನೀಲಿ ಪಡೆ ಎನ್ನುವ ವಿಶೇಷ ದಳಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಇಂದು ಚಾಲನೆ ನೀಡಿದ್ದಾರೆ. ಈ ನೀಲಿ ಪಡೆಯು ನೀರಿನ ಅಕ್ರಮ ಸಂಪರ್ಕ, ಸೋರಿಕೆ ಪತ್ತೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಬೆಂಗಳೂರು ನಗರದಲ್ಲಿ ನೀರಿನ ಸೋರಿಕೆ ತಡೆಯಲು ಮತ್ತು ಅನಧಿಕೃತ ನೀರು ಮತ್ತು ಚರಂಡಿ ಸಂಪರ್ಕ ಪತ್ತೆಹಚ್ಚಲು ವಿನೂತನವಾಗಿ ನೀಲಿ ಪಡೆಯನ್ನು ಕಾರ್ಯರೂಪಕ್ಕೆ ತರುತ್ತಿದೆ. ಈ ನೀಲಿ ಪಡೆ ವಿಶೇಷ ದಳಕ್ಕೆ ಚಾಲನೆ ನೀಡಲಾಗಿದೆ. ಜಲಮಂಡಳಿಯು ಪ್ರತಿ ಉಪವಿಭಾಗಕ್ಕೆ ಒಂದು ತಂಡವನ್ನು ರಚಿಸಲಾಗಿದ್ದು, ಈ ವಿಶೇಷ ತಂಡಗಳು ನೀರಿನ ಅಕ್ರಮ ಸಂಪರ್ಕ ಮತ್ತು ನೀರಿನ ಸೋರಿಕೆಯನ್ನು ಪತ್ತೆ ಹಚ್ಚಲಿವೆ. ಜೊತೆಗೆ ರೋಬೋಟಿಕ್‌ ಮತ್ತು ಎಐ ತಂತ್ರಜ್ಞಾನದ ಅಳವಡಿಕೆ ಮಾಡಿಕೊಂಡು ಸೋರಿಕೆಯ ನಿಖರತೆಯನ್ನು ಪತ್ತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

DK Shivakumar Launches BWSSB Blue Force To Detect Illegal Water Connections In Bengaluru

ಈ ನೀಲಿ ಪಡೆ (ಬ್ಲ್ಯೂ ಫೋರ್ಸ್‌) ಹೆಸರಿನ ವಿಶೇಷ ತಂಡವನ್ನು ಜಲಮಂಡಳಿಯ 43 ಉಪವಿಭಾಗಗಳಲ್ಲೂ ನಿಯೋಜನೆ ಮಾಡಲಾಗುತ್ತದೆ. ಈ ತಂಡವು ಆಯಾ ಉಪವಿಭಾಗದಲ್ಲಿ ಕಾರ್ಯಾಚರಣೆ ನಡೆಸಿ, ಅಕ್ರಮ ನೀರಿನ ಸಂಪರ್ಕವನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ₹5 ಸಾವಿರ ದಂಡ ಕೂಡ ವಿಧಿಸಲಿದೆ. ಜಲಮಂಡಳಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದೆ. ಈ ಪ್ರತಿ ಟೀಂನಲ್ಲಿ ಒಬ್ಬರು ಮಾಜಿ ಸೈನಿಕ ಅಥವಾ ನಿವೃತ್ತ ಪೊಲೀಸ್ ಅಧಿಕಾರಿ ಇರಲಿದ್ದಾರೆ. ಇವರೊಂದಿಗೆ ಜಲಮಂಡಳಿಯ ಮೂವರು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ತಂಡಕ್ಕೂ ಒಂದು ವಾಹನ ಇರಲಿದೆ. ಈ ತಂಡವು ನಿರಂತರವಾಗಿ ತಪಾಸಣೆ ನಡೆಸಲಿದೆ. ಅನಧಿಕೃತ ನೀರಿನ ಸಂಪರ್ಕ ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆ ಮಾಡುತ್ತವೆ. ಅಕ್ರಮ ಸಂಪರ್ಕ ಪ್ರಕರಣಗಳನ್ನು ಪತ್ತೆ ಮಾಡಿ ದಂಡ ವಿಧಿಸಲಿದೆ.

ಬಾಟಲ್‌ ನೀರಿಗೆ 30-40 ರೂಪಾಯಿ ಕೊಡಬೇಕು

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಡಿಕೆಶಿ, ನಾವು ಒಂದು ದಿನ ಇತಿಹಾಸದ ಪುಟ ಸೇರುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಪರಿಸರ, ನೀರು, ಗಾಳಿ ಮತ್ತು ಬೆಳಕು ಇಲ್ಲೇ ಉಳಿಯುತ್ತವೆ. ಆದ್ದರಿಂದ, ನಾವು ಅವುಗಳನ್ನು ರಕ್ಷಿಸುವುದು ಅತಿ ಮುಖ್ಯ ಎಂದು ಕಿವಿಮಾತು ಹೇಳಿದ್ದಾರೆ.

DK Shivakumar Launches BWSSB Blue Force To Detect Illegal Water Connections In Bengaluru

ಇಂದು ಕುಡಿಯುವ ನೀರಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹಿಂದೆ ನಾವೆಲ್ಲಾ ಹೊಳೆಗಳು ಮತ್ತು ಬಾವಿಗಳಿಂದ ನೇರವಾಗಿ ನೀರು ಕುಡಿಯುತ್ತಿದ್ದೆವು. ಆದರೆ ಈಗ ಒಂದು ಬಾಟಲ್‌ ನೀರಿಗಾಗಿ ಮೂವತ್ತರಿಂದ ನಲವತ್ತು ರೂಪಾಯಿ ತೆರಬೇಕಾಗಿದೆ. ಇದಕ್ಕೆ ಮುಖ್ಯ ಕಾರಣ ನೀರಿನ ಪರಿಶುದ್ಧತೆ ಇಲ್ಲದಿರುವುದು ಎಂದಿದ್ದಾರೆ. ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ಶ್ರಮಿಸುತ್ತಿರುವ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+