ಯಾರ್ಯಾರು ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದ ದೇವೇಗೌಡರು
ಬೆಂಗಳೂರು, ಜುಲೈ 6: ಯಾರ್ಯಾರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಪೀಕರ್ ಅವರ ಅಧೀನದಲ್ಲಿ ಹನ್ನೊಂದು ರಾಜೀನಾಮೆ ಪತ್ರಗಳು ಸೇರಿವೆ ಎನ್ನುವ ಮಾಹಿತಿ ನನಗೆ ಲಭ್ಯವಾಗಿದೆ.
ದೋಸ್ತಿ ಸರ್ಕಾರದ ಅಂತ್ಯ? : ಕ್ಷಣ ಕ್ಷಣದ ಮಾಹಿತಿ Live Updates
ನಾನು ಇದರ ಬಗ್ಗೆ ಬಾಲ್ ಈಸ್ ಇನ್ ದಿ ಕೋರ್ಟ್ ಆಫ್ ದಿ ಸ್ಪೀಕರ್. ನನಗೆ ಈ ವಿಷಯ ಏನೂ ಗೊತ್ತಿಲ್ಲ. ನನ್ನ ಪಕ್ಷದ ಕಚೇರಿಯಲ್ಲಿ ರಾಜ್ಯದ ಎಲ್ಲ ಘಟನೆಗಳ ಬಗ್ಗೆ ಚರ್ಚೆ ಮಾಡಿ ಬೆಂಗಳೂರಿನ 28 ಕ್ಷೇತ್ರಗಳ ವಿಷಯ, ಕಾರ್ಪೊರೇಷನ್ ಚುನಾವನೆ ಬಗ್ಗೆ ಚರ್ಚಿಸಲು ಅಧ್ಯಕ್ಷ ಎಚ್ ಕೆ ಕುಮಾರಸ್ವಾಮಿ, ನಗರ ಘಟಕದ ಅಧ್ಯಕ್ಷ ಪ್ರಕಾಶ್, ಮಂತ್ರಿಗಳ ಜತೆ ಬೆಂಗಳೂರಿನ ವಿಷಯಕ್ಕೆ ಕರೆದಿದ್ದೇನೆ.
ಮುಂದಿನ ಪ್ರಕ್ರಿಯೆ ಏನು ನಡೆಯುತ್ತದೆ ಎಂದು ನೋಡಲು ನಾನು ನಿಮ್ಮ ಜತೆ ಸಿದ್ಧನಿದ್ದೇನೆ. ಯಾರು ಯಾವ ಪಕ್ಷದವರು ಇದ್ದಾರೆ ಅದೆಲ್ಲ ಬೇಡ. ನಾನು ಕೇಳಿಲ್ಲ. ಅದರ ಬಗ್ಗೆ ಮುಂದಿನ ನಡವಳಿಕೆ ಸಭಾಧ್ಯಕ್ಷರು ಸೋಮವಾರ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.
ಯಡಿಯೂರಪ್ಪ ಕೈಗೆ ಅಧಿಕಾರವೋ, ರಾಷ್ಟ್ರಪತಿ ಆಳ್ವಿಕೆಯೋ?
ಅದಕ್ಕೂ ಮುನ್ನ ನಾನು ಒಂದೂ ಮಾತು ಆಡೊಲ್ಲ.ಈ ವಿಷಯದ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ರಾಜೀನಾಮೆ ಕುರಿತು ಮಾತನಾಡಲು ನಿರಾಕರಿಸಿದ್ದಾರೆ.