ಕೋವಿಡ್-19 ವಾರಿಯರ್ಸ್-ಪೊಲೀಸರಿಗೆ ಟಿವಿಎಸ್ ಅಪಾಚೆ ಬೈಕ್
ಬೆಂಗಳೂರು, ನ. 12: ಕೋವಿಡ್-19 ವಿರುದ್ಧ ನಿರ್ಣಾಯಕ ಹೋರಾಟ ನಡೆಸಿರುವ ಕರ್ನಾಟಕ ಸರ್ಕಾರದ ಜೊತೆಗೆ ಟಿವಿಎಸ್ ಮೋಟರ್ಸ್ ಜೂನ್ ತಿಂಗಳಿನಿಂದಲೇ ಕೈಜೋಡಿಸಿದೆ. ಸರ್ಕಾರದ ಕ್ರಮಗಳನ್ನು ಬೆಂಬಲಿಸುವುದರ ಜೊತೆಗೆ ಕೊರೊನಾ ವಾರಿಯರ್ಸ್ ಗೆ ಅಗತ್ಯವಾಗಿ ಬೇಕಿರುವ ವೈದ್ಯಕೀಯ ಸಾಧನಗಳನ್ನು ಈ ಹಿಂದೆ ನೀಡಿತ್ತು. ಈಗ ಕೋವಿಡ್ 19 ವಾರಿಯರ್ಸ್ ಗಳೆನಿಸಿರುವ ಬೆಂಗಳೂರು ಪೊಲೀಸರಿಗೆ ಕಂಪನಿಯ ಪ್ರಿಮಿಯಮ್ ಮೋಟರ್ ಸೈಕಲ್ ಬ್ರಾಂಡ್ ಟಿವಿಎಸ್ ಅಪಾಚೆ ಬೈಕ್ ಗಳನ್ನು ನೀಡಲಾಗಿದೆ.
ವಿಶ್ವದಲ್ಲಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹಗಳನ್ನು ಉತ್ಪಾದಿಸುವ ಪ್ರತಿಷ್ಠಿತ ಕಂಪನಿಯಾದ ಟಿವಿಎಸ್ ಮೋಟರ್ ಕಂಪನಿಯ ಪ್ರಿಮಿಯಮ್ ಮೋಟರ್ ಸೈಕಲ್ ಬ್ರಾಂಡ್ ಟಿವಿಎಸ್ ಅಪಾಚೆ ಜಾಗತಿಕ ಮಟ್ಟದಲ್ಲಿ 40 ಲಕ್ಷ ಮಾರಾಟದ ಮೈಲುಗಲ್ಲು ದಾಟಿದೆ.
ಟಿವಿಎಸ್ ಮೋಟಾರ್ ಸಂಸ್ಥೆಯ (ಮಾರ್ಕೆಟಿಂಗ್) ಪ್ರೀಮಿಯಂ ಮೋಟರ್ ಸೈಕಲ್ಸ್, ಮುಖ್ಯಸ್ಥ - ಮೇಘಶ್ಯಾಮ್ ದಿಘೋಲೆ, ಅವರು ಇಂದು 25 ಟಿವಿಎಸ್ ಅಪಾಚೆ ಆರ್ಟಿಆರ್ 160 ಮೋಟಾರ್ ಸೈಕಲ್ ಗಳನ್ನು ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗೆ ಗೌರವಾನ್ವಿತ ಸಚಿವರು - ಗೃಹ, ಕರ್ನಾಟಕ ಸರ್ಕಾರ - ಬಸವರಾಜ್ ಬೊಮ್ಮಾಯಿ ಮತ್ತು ಬೆಂಗಳೂರಿನ ಪೊಲೀಸ್ ಆಯುಕ್ತರು -ಕಮಲ್ ಪಂತ್ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು. ಈ ಕಾರ್ಯಕ್ರಮವು ನಮ್ಮ ಮುಂಚೂಣಿ ಕಾರ್ಮಿಕರನ್ನು ಬೆಂಬಲಿಸುವ ಸಂಸ್ಥೆಯ ಬದ್ಧತೆಯ ಭಾಗವಾಗಿದೆ.

ಟಿವಿಎಸ್ ಅಪಾಚೆ ಸರಣಿಯು ಪ್ರಿಮಿಯಂ ಮೋಟರ್ ಸೈಕಲ್ ಬ್ರಾಂಡ್ ಆಗಿದ್ದು, ನೇಕೆಡ್ ಹಾಗೂ ಸೂಪರ್ ಸ್ಪೋರ್ಟ್ಸ್ ಹೀಗೆ ಎರಡು ವರ್ಗಗಳಲ್ಲಿದೆ. ಆರ್ಟಿಆರ್ (ರೇಸಿಂಗ್ ಥ್ರೋಟಲ್ ರೆಸ್ಪಾನ್ಸ್) ಸರಣಿಯ ನೇಕೆಡ್ ಮೋಟರ್ ಸೈಕಲ್ ವರ್ಗದಲ್ಲಿ ಟಿವಿಎಸ್ ಅಪಾಚೆ ಆರ್ಟಿಆರ್160, ಟಿವಿಎಸ್ ಅಪಾಚೆ ಆರ್ಟಿಆರ್ 1604ವಿ, ಟಿವಿಎಸ್ ಅಪಾಚೆ ಆರ್ಟಿಆರ್ 180 ಮತ್ತು ಟಿವಿಎಸ್ ಅಪಾಚೆ ಆರ್ಟಿಆರ್200 4ವಿಯನ್ನು ಹೊಂದಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications