ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿಗೆ ಬಿದ್ದು ಬೆಂದ ಬಾಲಕಿ, ಯಾರು ಹೊಣೆ?

ಬೆಂಗಳೂರು, ಮಾರ್ಚ್ 26: ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿಗೆ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೇದೆ ಲೋಕೇಶಪ್ಪ ಪುತ್ರಿ ಹರ್ಷಾಲಿ (4) ಮೃತ ಬಾಲಕಿ.ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಬಿದ್ದಿರುವ ಒಣ ಮರದ ಬುಡಕ್ಕೆ , ರೆಂಬೆಗಳಿಗೆ ಬೆಂಕಿ ಹಾಕಲಾಗಿತ್ತು.

ಆ ಸ್ಥಳದಲ್ಲಿ ಮಕ್ಕಳು ಆಟವಾಡುವಾಗ ಹರ್ಷಾಲಿ ಮೊದಲು ಚೆಂಡು ತೆಗೆದುಕೊಂಡಿದ್ದಳು. ಬಾಲಕ ಅವಳಿಂದ ಚೆಂಡು ಕಿತ್ತುಕೊಳ್ಳಲು ಹೋಗಿ ಅವಳನ್ನು ತಳ್ಳಿದ್ದು, ಬೆಂಕಿಗೆ ಬಿದ್ದಿದ್ದಾಳೆ. ಹರ್ಷಾಲಿ ಮೈ, ಕೈ, ಎದೆ, ಬೆನ್ನಿನ ಭಾಗ ಸಂಪೂರ್ಣ ಸುಟ್ಟು ಹೋಗಿತ್ತು ಇದನ್ನು ಕಂಡು ಭಯಗೊಂಡ ಬಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Constable’s daughter falls on pile of burning garbage

ಲೋಕೇಶಪ್ಪ ಕಳೆದ 10 ವರ್ಷಗಳಿಂದ ಶಿವಾಜಿನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಕುಟುಂಬದವರ ಜತೆ ವಾಸಿಸುತ್ತಿದ್ದಾರೆ. ಒಣಗಿದ ಮರಕ್ಕೆ ಬೆಂಕಿ ಹಚ್ಚಿದವರು ಯಾರೆಂದು ಯಾರಿಗೂ ತಿಳಿದಿಲ್ಲ. ಮಗಳ ಸಾವಿನಿಂದ ನೊಂದ ಪೇದೆ ಈ ಪ್ರಕರಣದ ಕುರಿತು ಬರೆದಿರುವ ಪತ್ರ ಎಲ್ಲೆಡೆ ಹರಿದಾಡುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶಿವಾಜಿನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್​ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪ್ರಕರಣದ ಬಗ್ಗೆ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+