ಪತ್ನಿಗಾಗಿ ಸೀರೆ ಖರೀದಿಸಿದ ಸಿಎಂ ಬೊಮ್ಮಾಯಿ: ಇತರರಿಗೂ ಸೂಚನೆ
ಬೆಂಗಳೂರು, ಅಕ್ಟೋಬರ್ 2: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಪ್ರಯುಕ್ತ ಖಾದಿ ಬಟ್ಟೆ ಖರೀದಿಸಿದರು.
ಬೆಂಗಳೂರು ನಗರದ ಗಾಂಧಿ ಭವನದ ಪಕ್ಕದಲ್ಲಿರುವ ಖಾದಿ ಎಂಪೋರಿಯಂನಲ್ಲಿ ತಲಾ ಮೂರು ಮೀಟರ್ ಅಳತೆಯ 10 ಜುಬ್ಬಾ ಪೀಸ್ಗಳನ್ನು ಸಿಎಂ ಬೊಮ್ಮಾಯಿ ಖರೀದಿಸಿದರಲ್ಲದೆ, ಇದೇ ವೇಳೆ ತಮ್ಮ ಪತ್ನಿಗೆ ಸೀರೆಯನ್ನೂ ಖರೀದಿಸಿ ಅಚ್ಚರಿ ಮೂಡಿಸಿದರು.
ಖಾದಿ ಎಂಪೋರಿಯಂನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಮಡದಿಗಾಗಿ ಮೂರು ಸೀರೆ ನೋಡಿದರು. ಕಡೆಗೆ ಒಂದನ್ನು ಆಯ್ಕೆ ಮಾಡಿಕೊಂಡರು. ಸಿಎಂ ಬೊಮ್ಮಾಯಿಯವರು ಒಟ್ಟು 16,000 ರೂ. ಮೊತ್ತದ ಬಟ್ಟೆ ಖರೀದಿಸಿದ್ದಾರೆ.
ಖರೀದಿ
ವೇಳೆ
ಸಚಿವರಿಗೂ
ಸೀರೆ
ಕೊಳ್ಳುವಂತೆ
ಸೂಚಿಸಿದ
ಸಿಎಂ
ಬೊಮ್ಮಾಯಿ
ಸಿಎಂ
ಬಸವರಾಜ
ಬೊಮ್ಮಾಯಿ
ಸೀರೆ
ಖರೀದಿ
ವೇಳೆ
ಆಗಮಿಸಿದ
ರಾಜ್ಯ
ಬಿಜೆಪಿ
ಉಪಾಧ್ಯಕ್ಷ
ಬಿ.ವೈ.
ವಿಜಯೇಂದ್ರರಿಗೆ,
''ಬಾರಪ್ಪಾ,
ನಿಮ್ಮ
ಮನೆಯವರಿಗೆ
ಸೀರೆ
ಖರೀದಿ
ಮಾಡು''
ಎಂದಿದ್ದಾರೆ.
ಬೊಮ್ಮಾಯಿಯವರ
ಮಾತನ್ನು
ಕೇಳಿದ
ವಿಜಯೇಂದ್ರ,
''ನಮಗೊಂದು
ಸೀರೆ
ಕೊಡಿ''
ಎಂದು
ಹೇಳಿ
ಸುಮಾರು
4,300
ರೂಪಾಯಿ
ಮೊತ್ತದ
ಸೀರೆ
ಖರೀದಿಸಿದ್ದಾರೆ.
ಇದೇ ವೇಳೆ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳರಿಗೂ ಸೀರೆ ತೆಗೆದುಕೊಳ್ಳಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಆಗ ಗೋವಿಂದ ಕಾರಜೋಳರು, ''ಸಾರ್, ನನಗೆ ಅದೆಲ್ಲಾ ಗೊತ್ತಾಗಲ್ಲ'' ಎಂದು ಹೇಳಿದರು. ''ಈಗಲಾದರೂ ಕಲಿತುಕೊಳ್ಳಿ'' ಎಂದು ಬೊಮ್ಮಾಯಿ ತಮಾಷೆ ಮಾಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮಾತಿಗೆ ಕಟ್ಟು ಬಿದ್ದ ಸಚಿವ ಗೋವಿಂದ ಕಾರಜೋಳ, ''ಇರಲಿ, ನನಗೊಂದು ಸೀರೆ ಕೊಡಿ'' ಎಂದು ಹೇಳಿ, ಸೀರೆ ಖರೀದಿಸಿದ್ದಾರೆ. ಇದೇ ವೇಳೆ ಪೌರಾಡಳಿತ ಎಂಟಿಬಿ ನಾಗರಾಜ್ ಕೂಡ ಬಟ್ಟೆ ಖರೀದಿಸಿದ್ದು, ಅವರ ಬಿಲ್ 3000 ರೂ. ಮೊತ್ತದ್ದಾಗಿದೆ.
ಶಾಸ್ತ್ರಿ
ಪ್ರತಿಮೆಗೆ
ಪುಷ್ಪಾರ್ಚನೆ
ಭಾರತದ
ಮಾಜಿ
ಪ್ರಧಾನಮಂತ್ರಿ
ಲಾಲ್
ಬಹದ್ದೂರ್
ಶಾಸ್ತ್ರಿಯವರ
117ನೇ
ಜನ್ಮ
ದಿನಾಚರಣೆ
ಅಂಗವಾಗಿ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ವಿಧಾನ
ಸೌಧದ
ಆವರಣದಲ್ಲಿರುವ
ಶಾಸ್ತ್ರಿ
ಪ್ರತಿಮೆಗೆ
ಪುಷ್ಪಾರ್ಚನೆ
ಮಾಡಿ
ಗೌರವ
ಸಲ್ಲಿಸಿದರು.
"ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಗೌರವ ನಮನಗಳು," ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, "ಮಾಜಿ ಪ್ರಧಾನಮಂತ್ರಿ, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಂದು ಅವರಿಗೆ ಆದರ ಪೂರ್ವಕ ಪ್ರಣಾಮಗಳು. ಅವರ ಪ್ರಾಮಾಣಿಕತೆ, ಪರಿಶ್ರಮ, ಸ್ವಾತಂತ್ರ್ಯ ಹೋರಾಟ, ದೇಶಸೇವೆ, ಪ್ರಧಾನಮಂತ್ರಿಗಳಾಗಿ ಅವರ ಆಡಳಿತ, ದಿಟ್ಟ ನಿರ್ಣಯಗಳು, ಅವರ ಸಾಧನೆಗಳು ಎಂದೆಂದಿಗೂ ಅಮರ," ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಗಾಂಧಿ
ಪುತ್ಥಳಿಗೆ
ಪುಷ್ಪಾರ್ಚನೆ
ಮಾಡಿದ
ರಾಜ್ಯಪಾಲರು
ಮಹಾತ್ಮ
ಗಾಂಧೀಜಿ
ಜನ್ಮದಿನದ
ಅಂಗವಾಗಿ
ರಾಜ್ಯಪಾಲ
ಥಾವರ್
ಚಂದ್
ಗೆಹ್ಲೋಟ್
ರಾಜಭವನದ
ಅಂಗಳದಲ್ಲಿರುವ
ಗಾಂಧಿ
ಪುತ್ಥಳಿಗೆ
ಶನಿವಾರ
ಪುಷ್ಪಾರ್ಚನೆ
ಮಾಡಿದರು.
Recommended Video