16ನೇ ಚಿತ್ರ ಸಂತೆಗೆ ಸಿಕೆಪಿ ಸಜ್ಜು, ಗಾಂಧಿ ಪ್ರಮುಖ ಆಕರ್ಷಣೆ
ಬೆಂಗಳೂರು, ಡಿಸೆಂಬರ್ 25: ಚಿತ್ರಸಂತೆಗೆ ಚಿತ್ರಕಲಾ ಪರಿಷತ್ತು ಸಜ್ಜಾಗುತ್ತಿದೆ. ಜನವರಿ 6ರಂದು ಚಿತ್ರ ಸಂತೆ ನಡೆಯಲಿದೆ.
ಕರ್ನಾಟಕದಿಂದ ಹೆಚ್ಚು ಕಲಾವಿದರು ಆಗಮಿಸುತ್ತಿದ್ದಾರೆ. ಉಳಿದಂತೆ ಕೇರಳ, ಮಹಾರಾಷ್ಟ್ರ,ಆಂಧ್ರ, ಒಡಿಶಾ, ರಾಜಸ್ಥಾನ ಮತ್ತಿತರೆ ರಾಜ್ಯಗಳ ಕಲಾವಿದರು ಭಾಗವಹಿಸಲಿದ್ದಾರೆ. ವಿಕಲಚೇತನರಿಗಾಗಿ 100 ಮಳಿಗೆಗಳನ್ನು ಮೀಸಲಿಡಲಾಗಿದೆ.

ಈ ಬಾರಿ 1400 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಚಿತ್ರಸಂತೆಯಲ್ಲಿ ನಿರ್ಮಿಸುವ ಮಳಿಗೆಗಳಿಗೆ ಬೇಕಾದ ಚೇರ್, ಟೇಬಲ್ ಮತ್ತಿತರೆ ಪರಿಕರಗಳು ಹಾಗೂ ಚಿತ್ರಕಲಾವಿದರು, ಸ್ವಯಂ ಸೇವಕರು, ಭದ್ರತಾ ಸಿಬ್ಬಂದಿ ಸೇರಿದಂತೆ ಚಿತ್ರಸಂತೆಯಲ್ಲಿ ಭಾಗವಹಿಸುವವರಿಗೆ ಊಟ, ಕುಡಿಯುವ ನೀರು, ತಿಂಡಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಗಾಂಧಿ 150 ಶೀರ್ಷಿಕೆಯಡಿ ಗಾಂಧೀಜಿಯವರ ಕುರಿತ ಶಿಲ್ಪಕಲೆ, ಬೊಂಬೆಗಳು ಮತ್ತಿತರೆ ಪ್ರದರ್ಶನ ಗ್ಯಾಲರಿಯನ್ನು ನಿರ್ಮಿಸಲಾಗುತ್ತಿದೆ.












Click it and Unblock the Notifications