ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂಬೆಳಗ್ಗೆ ಬೆಂಗಳೂರನ್ನು ತೊಯ್ದು ತೊಪ್ಪೆಯಾಗಿಸಿದ ಮಳೆ

|
Google Oneindia Kannada News

ಬೆಂಗಳೂರು, ಮೇ 1: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ(ಏ.30)ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಷಿಷಿಯಸ್ ವರೆಗೂ ತಲುಪಿ, 'ಉಸ್ಸಪ್ಪಾ ಎಂಥ ಸೆಖೆ' ಎಂದು ಬೈದುಕೊಂಡವರಿಗೆಲ್ಲ ಇಂದು ಬೆಳ್ಳಂಬೆಳಗ್ಗೆ ವರುಣನ ಶುಭೋದಯ ಸಂದೇಶ ಸಿಕ್ಕಿದೆ!

ಕಳೆದ ಆರು ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನ ಸೆಕೆ ಕಡಿಮೆ! ಕಳೆದ ಆರು ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನ ಸೆಕೆ ಕಡಿಮೆ!

ಹೌದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ಗುಡುಗು, ಗಾಳಿ ಸಮೇತ ಮಳೆ ಸುರಿದಿದೆ. ಜಾಲಹಳ್ಳಿ, ರಾಜಾಜೀನಗರ, ಚಾಮರಾಜಪೇಟೆ, ಗಾಂಧಿನಗರ, ಬಿನ್ನಿಪೇಟೆ ಮುಂತಾದ ಹಲವೆಡೆ ಮಳೆ ಸುರಿದಿದೆ.

ಅಚ್ಚರಿ ಎಂದರೆ ಹವಾಮಾನ ಇಲಾಖೆಯಿಂದ ಯಾವುದೂ ಮುನ್ಸೂಚನೆ ಇರಲಿಲ್ಲ. ಏ.28 ಮತ್ತು 29 ರಂದು ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ನಿನ್ನೆ(ಏ.30) ಸಾಂಸ್ಕೃತಿಕ ನಗರಿ ಮೈಸೂರನ್ನು ತೊಯ್ದು ತೊಪ್ಪೆಯಾಗಿಸಿದ್ದ ಮಳೆ, ಇಂದು ಉದ್ಯಾನ ನಗರಿ ಬೆಂಗಳೂರನ್ನು ತೋಯಿಸಿದೆ.

ಮೇ.4 ಅಥವಾ 5 ರಂದು ರಾಜ್ಯದಲ್ಲಿ ಮೋಡಕವಿದ ವಾತಾವರಣ ಕಂಡುಬರಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕಾರ್ಮಿಕರ ದಿನದ ಸರ್ಕಾರಿ ರಜೆಯಂದು ರಿಲ್ಯಾಕ್ಸ್ ಆಗಿ ಬೆಳಿಗ್ಗೆ ಎದ್ದವರಿಗೆಲ್ಲ ಸಿಕ್ಕಿದ್ದು ದಟ್ಟ ಮೋಡದ ಶುಭೋದಯ ಸಂದೇಶ. ಕೆಲವೇ ಕ್ಷಣದಲ್ಲಿ ಗಾಳಿಯೊಂದಿಗೆ ಆರಂಭವಾದ ಮಳೆ ರಾಜಧಾನಿಯನ್ನು ಬೆಳ್ಳಂಬೆಳಗ್ಗೆ ತೋಯ್ದು ತೊಪ್ಪೆಯಾಗಿಸಿದೆ. ಒಂದೇ ಸಮಾಧಾನ ಅಂದ್ರೆ ಇವತ್ತು ಆಫೀಸಿಗೆ ಹೋಗೋ ಗೋಜಿಲ್ಲ, ರಜೆ ಎಂಬುದು!

English summary
After mercury rises in the garden city Bengaluru, It's raining in the morning. many areas including Rjajajinagar, Uttarahalli, Chamarajpet are witnessed rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X