ಬೆಂಗಳೂರಲ್ಲಿ ಪಾರ್ಕಿಂಗ್ ವಿಚಾರಕ್ಕೆ ಜಗಳ, ಕ್ಯಾಬ್ ಚಾಲಕನ ಹತ್ಯೆ
ಬೆಂಗಳೂರು, ಆಗಸ್ಟ್ 31: ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಜಗಳ ಹತ್ಯೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ರಾಜಕುಮಾರ್ ರಸ್ತೆ ಬಳಿ ಶುಕ್ರವಾರ ನಡೆದಿದೆ.
ಬಾರ್ ಬಳಿ ಕಾರು ನಿಲ್ಲಿಸುವ ಕುರಿತು ಎರಡು ಕ್ಯಾಬ್ ಚಾಲಕರ ಮಧ್ಯೆ ಸಂಭಾಷಣೆ ಆರಂಭವಾಗಿತ್ತು, ಬಳಿಕ ಅದು ಜಗಳಕ್ಕೆ ತಿರುಗಿ ಹತ್ಯೆಯಲ್ಲಿ ಅಂತ್ಯಕಂಡಿದೆ, ಬೆಂಗಳೂರಿನ ರಾಜ್ ಕುಮಾರ್ ರಸ್ತೆ ಬಳಿಯ ನವರಸ ಬಾರ್ ಬಳಿ ಘಟನೆ ನಡೆದಿದ್ದು ರಾಮ್ದಾಸ್ ಹತ್ಯೆಯಾದ ಚಾಲಕ.
ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗೀಗ ಜಗಳಕ್ಕೆ, ಕೊಲೆಗಾಗಲಿ ಕಾರಣವೇ ಇಲ್ಲದಂತಾಗಿದೆ, ನಿಂತಲ್ಲಿ ಕುಂತಲ್ಲೆಲ್ಲಾ ವಿನಾಕಾರಣ ಜಗಳ ಬಳಿಕ ಹೊಡೆದಾಟ, ಹತ್ಯೆ ಇಂತಹ ನೂರಾರು ಪ್ರಕರಣಗಳು ನಿತ್ಯ ನಡೆಯುತ್ತಿರುತ್ತದೆ.

ಸ್ವಲ್ಪ ತಾಳ್ಮೆಯಿಂದ ವರ್ತಿಸಿದ್ದರೆ ಆತನ ಹತ್ಯೆಯಾಗುತ್ತಿರಲಿಲ್ಲವೇನೋ ಎಂದು ಅನಿಸುತ್ತದೆ, ಕ್ಷಣಿಕ ಜಗಳದಿಂದ ಇಡೀ ಜೀವನವೇ ಹಾಳುಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂಬ ಪಾಠ ಇದರಿಂದ ಕಲಿಯಬಹುದಾಗಿದೆ.











Click it and Unblock the Notifications