ನಿರಂತರ ವಿದ್ಯುತ್ ಪೂರೈಸುವಂತೆ ಬಿಡ್ಲುಎಸ್ಎಸ್ಬಿಗೆ ಒತ್ತಾಯ
ಬೆಂಗಳೂರು, ಏಪ್ರಿಲ್ 28: ಬಿಡ್ಲುಎಸ್ಎಸ್ಬಿ ಅಧಿಕಾರಿಗಳು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಬೆಂಗಳೂರಿಗೆ ನಿಯಮಿತವಾಗಿ ನೀರು ಸರಬರಾಜು ಮಾಡಲು ನಿರಂತರ ವಿದ್ಯುತ್ ಒದಗಿಸುವಂತೆ ಮನವಿ ಮಾಡಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಿಡ್ಲುಎಸ್ಎಸ್ಬಿ ) ಬೇಸಿಗೆಯ ಆರಂಭದಿಂದಲೂ ನೀರು ಸರಬರಾಜಿನಲ್ಲಿ ಅಡಚಣೆಯ ಕುರಿತು ಹೆಚ್ಚಿನ ಸಂಖ್ಯೆಯ ದೂರುಗಳನ್ನು ಸ್ವೀಕರಿಸುತ್ತಿರುವ ನಂತರ ಈ ಮನವಿಯನ್ನು ಮಾಡಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಬಿಡ್ಲುಎಸ್ಎಸ್ಬಿ ಒದಗಿಸಿದ ದತ್ತಾಂಶವು ಕಳೆದ ಮೂರು ತಿಂಗಳಲ್ಲಿ ವಿವಿಧ ಪಂಪಿಂಗ್ ಸ್ಟೇಷನ್ಗಳಲ್ಲಿ ಸುಮಾರು 110 ವಿದ್ಯುತ್ ಅಡೆತಡೆಗಳು ಸಂಭವಿಸಿವೆ ಎಂದು ತಿಳಿಸುತ್ತದೆ, ಇದರಿಂದಾಗಿ ನಗರದಾದ್ಯಂತ ನೀರು ಸರಬರಾಜು ಅಡಚಣೆಯಾಗಿದೆ. "ವಿದ್ಯುತ್ ಕಡಿತವು ಅಲ್ಪಾವಧಿಗೆ ಆಗಿದ್ದರೂ, ಮೂರು ಹಂತಗಳಲ್ಲಿ ನೀರನ್ನು ಪಂಪ್ ಮಾಡುವುದರಿಂದ ನೀರು ಸರಬರಾಜಿನಲ್ಲಿ ದೊಡ್ಡ ಸಮಸ್ಯೆ ಉಂಟಾಗುತ್ತದೆ" ಎಂದು ಬಿಡ್ಲುಎಸ್ಎಸ್ಬಿ ಅಧ್ಯಕ್ಷರು ಹೇಳಿದರು.
ಉದಾಹರಣೆಗೆ ಕೇವಲ 20 ನಿಮಿಷಗಳ ವಿದ್ಯುತ್ ಕಡಿತವು ಬಿಡ್ಲುಎಸ್ಎಸ್ಬಿ ಪಂಪ್ಗಳನ್ನು ಮರುಪ್ರಾರಂಭಿಸಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಇದು ಇತರ ನಿಲ್ದಾಣಗಳಲ್ಲಿ ಪೂರೈಕೆಯ ಮೇಲೆ ಏರಿಳಿತದ ಪರಿಣಾಮವನ್ನು ಉಂಟುಮಾಡುತ್ತದೆ. ನಾವು ಪಂಪ್ಗಳನ್ನು ಪುನಃ ಆರಂಭಿಸುವ ಹೊತ್ತಿಗೆ ಬೆಂಗಳೂರಿನ ಕನಿಷ್ಠ 20% ಪ್ರದೇಶಗಳು ಪರಿಣಾಮ ಬೀರುತ್ತವೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಹೊರತುಪಡಿಸಿ ಗ್ರೌಂಡ್ ಲೆವಲ್ ಜಲಾಶಯಗಳಲ್ಲಿ (ಜಿಎಲ್ಆರ್) ನೀರಿನ ಮಟ್ಟವನ್ನು ಪುನಃ ಆರಂಭಿಸಲು ನಮಗೆ ಇನ್ನೂ ಮೂರು ಗಂಟೆಗಳ ಅಗತ್ಯ ಬೀಳುತ್ತದೆ ಎಂದು ಹಿರಿಯ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಪಮಾನ ಹೆಚ್ಚಾದಂತೆ ನೀರಿನ ಬೇಡಿಕೆ ಹೆಚ್ಚಿದೆ ಎಂದು ಅಧಿಕಾರಿಗಳು ಗಮನಿಸಿದ್ದಾರೆ, ಸಮರ್ಪಕ ಮತ್ತು ವಿಶ್ವಾಸಾರ್ಹ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ) ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಭೆಯಲ್ಲಿ, ಬಿಡ್ಲುಎಸ್ಎಸ್ಬಿ ಅಧಿಕಾರಿಗಳು ಯಾವುದೇ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಸಾರ್ವಜನಿಕರು ಸ್ವೀಕರಿಸುವ ದೂರುಗಳ ಬಗ್ಗೆ ತ್ವರಿತವಾಗಿ ಕಾರ್ಯನಿರ್ವಹಿಸಲು ದೃಢವಾದ ಕಾರ್ಯವಿಧಾನವನ್ನು ಹಾಕಲು ಮತ್ತು ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಬಿಡ್ಲುಎಸ್ಎಸ್ಬಿ ಅಧಿಕಾರಿಗಳಿಗೆ ಸಿಂಗ್ ಒತ್ತಾಯಿಸಿದರು.












Click it and Unblock the Notifications