ಬುಡಾಪೆಸ್ಟ್ ಬೆಂಗಳೂರು ಸಂಗೀತ ಹಬ್ಬದಲ್ಲಿ ಜಾನಪದ ಸುಧೆ
ಬೆಂಗಳೂರು, ಅ, 20 : ಮೆಶಿದಾ ಬ್ಯಾಂಡ್ ಎಂಬ ಹಂಗೇರಿಯನ್ ಫೋಕ್ ಗ್ರೂಪ್ 'ಬುಡಾಪೆಸ್ಟ್ ಬೆಂಗಳೂರು ಸಂಗೀತ ಹಬ್ಬ-2015' ಕಾರ್ಯಕ್ರಮವನ್ನು ನಗರದ ಭಾರತೀಯ ವಿದ್ಯಾಭವನದ ಕಿಂಚಾ ಸಭಾಂಗಣದಲ್ಲಿ ಅಕ್ಟೋಬರ್ 22ರ ಗುರುವಾರದಂದು ಸಂಜೆ 6 ಗಂಟೆಗೆ ಹಮ್ಮಿಕೊಂಡಿದೆ.
ಬುಡಾಪೆಸ್ಟ್ ಬೆಂಗಳೂರು ಸಂಗೀತ ಮನೋರಂಜನಾ ಕಾರ್ಯಕ್ರಮವನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ICCR), ಭಾರತೀಯ ವಿದ್ಯಾಭವನ, ಇಂಟರ್ ನ್ಯಾಷನಲ್ ಆರ್ಟ್ಸ್ ಆಂಡ್ ಕಲ್ಚರಲ್ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದೆ.[ಕ್ಯಾನ್ಸರಿಗೆ ಬಲಿಯಾದ ವೇಣು ವಾದಕ ಎನ್ ರಮಣಿ]

ನಾನಾ ದೇಶ, ಸಂಸ್ಕೃತಿಯ ನಡುವೆ ಬಾಂಧವ್ಯ ಬೆಸೆಯುವ ಉದ್ದೇಶ ಹೊಂದಿರುವ ಮೆಶಿದಾ ಬ್ಯಾಂಡ್ ಎಂಬ ಹಂಗೇರಿಯನ್ ಫೋಕ್ ಗ್ರೂಪ್ ಈಗಾಗಲೇ ಅಮೆರಿಕಾ ಫ್ರಾನ್ಸ್, ಟರ್ಕಿ, ಇಟಲಿ ಹೀಗೆ ನಾನಾ ಕಡೆ ಸಂಗೀತ ಕಾರ್ಯಕ್ರಮ ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನೈಜ ಜೀವನದ ಸೌಂದರ್ಯವನ್ನು ಜಾನಪದ ಹಾಡುಗಳ ಮೂಲಕ ಬಿಂಬಿಸುವಲ್ಲಿ ಸತತ ಪ್ರಯತ್ನಿಸುತ್ತಿದೆ ಎಂದು 'ಬುಡಾಪೆಸ್ಟ್ ಬೆಂಗಳೂರು' ಕಾರ್ಯಕ್ರಮ ಆಯೋಜಕರು ತಿಳಿಸಿದರು
ಈ ಹಂಗೇರಿಯನ್ ಮ್ಯೂಸಿಕ್ ಬ್ಯಾಂಡ್ ತಂಡದಲ್ಲಿನ ಮೆಶಿಯಾದ ಗೆಸಸ್ ಮಜ್ದಾ ಮಾರೀಯ ಅವರು ಹಂಗೇರಿಯಾ ಜೂನಿಯರ್ ಪ್ರೈಮ್ ಪ್ರಶಸ್ತಿ ವಿಜೇತರು. ಇವರು ಹಂಗೇರಿಯನ್ ಜಾನಪದ ಸಂಗೀತದಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದಿದ್ದಾರೆ. ರೈನ್ಬೊ ಬ್ರಿಡ್ಜ್ ಎಂಬ ಮೊದಲ ಆಲ್ಬಂನ್ನು 2011ರಲ್ಲಿ ತಯಾರಿಸಿದ್ದಾರೆ. ಎರಡನೇ ಆಲ್ಬಂ ಆದ ಗ್ಲಾಡ್ ಮೇಶ್ ನ್ನು 2013ರಲ್ಲಿ ಜನತೆಗೆ ನೀಡಿದ್ದರು.
ಸಂಗೀತ ರಸದೌತಣಕ್ಕೆ ಪ್ರವೇಶ ಉಚಿತವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀವತ್ಸ- 9845106655, www.intlarts.org ಸಂಪರ್ಕಿಸಬಹುದು
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications