ಖೋಟಾನೋಟು ದಂಧೆ, ಬಿಎಂಟಿಸಿ ಸಿಬ್ಬಂದಿ ಜೈಲುಪಾಲು
ಬೆಂಗಳೂರು, ಮೇ 4: ಬಿಎಂಟಿಸಿ ಅಥವಾ ಖಾಸಗಿ ಬಸ್ಗಳು ಯಾವುದೇ ಇರಲಿ, ಅವರು ನೀಡಿದ ನೋಟಿನ ಬಗ್ಗೆ ನಿಮಗೆ ಅನುಮಾನ ಬಂದರೆ ತೆಗೆದುಕೊಳ್ಳಬೇಡಿ.
ಬಿಎಂಟಿಸಿ ಬಸ್ ಕಂಡಕ್ಟರ್ ಒಬ್ಬರು ದಿಢೀರ್ ಶ್ರೀಮಂತನಾಗುವ ಆಸೆಯಿಂದ ಖೋಟಾನೋಟು ದಂಧೆಗೆ ಇಳಿದು ಈಗ ಜೈಲು ಪಾಲಾಗಿರುವ ಘಟನೆ ನಡೆದಿದೆ.
ಊರಲ್ಲಿದ್ದ ಜಮೀನು ಮಾರಿ 7 ಲಕ್ಷ ರೂ ಅಸಲಿ ನೋಟು ಕೊಟ್ಟು 15 ಲಕ್ಷ ನಕಲಿ ನೋಟು ಪಡೆದು ಶ್ರೀಮಂತನಾಗಲು ಹೊರಟು ಪರಿಚಿತನಿಂದಲೇ ಮೋಸ ಹೋಗಿ, ಕೊನೆಗೆ ಅದೇ ವಂಚಕನ ಮಾತಿಗೆ ಬಿದ್ದು ಖೋಟಾನೋಟು ಮುದ್ರಣ ಹಾಗೂ ಚಲಾವಣೆ ದಂಧೆಗೆ ಇಳಿದು ಈಗ ಜೈಲು ಸೇರಿದ್ದಾನೆ.

2 ಸಾವಿರ ಮತ್ತು 500 ರೂ ಮೌಲ್ಯದ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡಲು ಮುಂದಾಗಿದ್ದ ಬಿಟಂಟಿಸಿ ಡ್ರೈವರ್ ಕಂ ಕಂಡಕ್ಟರ್ ಸೋಮನಗೌಡ, ನಂಜೇಗೌಡ, ಫೋಟೊಗ್ರಾಫರ್ ಕಿರಣ್ ಕುಮಾರ್ ಎಂಬುವವರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಸೋಮನಗೌಡ ಹಾಗೂ ನಂಜೇಗೌಡ ಬಿಎಂಟಿಸಿ ಸಿಬ್ಬಂದಿಯಾಗಿದ್ದು, ಖಾಟಾ ನೋಟುಗಳನ್ನು ಪ್ರಯಾಣಿಕರಿಗೆ ಚಲಾವಣೆ ಮಾಡಿರುವ ಸಾದ್ಯತೆ ಇದೆ. ಆದರೆ ಇದುವರೆಗೂ ಯಾರಿಗೂ ಚಲಾವಣೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಸೋಮನಗೌಡನಿಗೆ ಎರಡು ವರ್ಷಗಳ ಹಿಂದೆ ರಾಮಕೃಷ್ಣ ಎಂಬುವವನ ಪರಿಚಯವಾಗಿತ್ತು. ಒಂದು ಲಕ್ಷ ರೂ ಅಸಲಿ ನೋಟ ಕೊಟ್ಟರೆ 2 ಲಕ್ಷ ರೂ ಖೋಟಾನೋಟು ನೀಡುತ್ತೇನೆ, ಚಲಾವಣೆ ಮಾಡಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಹೇಳಿದ್ದ.
ಬಳಿಕ 1 ಲಕ್ಷ ರೂ ನೀಡಿ, 2 ಲಕ್ಷ ಖೋಟಾನೋಟು ಪಡೆದು ಅದನ್ನು ಚಲಾವಣೆ ಮಾಡಿದ್ದ. ಬಳಿಕ ದುರಾಸೆಯಿಂದ ಮನೆಯ ಜಮೀನು ಮಾರಿ ಬಂದ ಹಣವನ್ನೆಲ್ಲಾ ಈ ದಂಧೆಗೆ ಸುರಿದಿದ್ದ. ಆದರೆ ಖೋಟಾನೋಟು ಸಿಕ್ಕಿರಲಿಲ್ಲ. ಅವರ ಮಧ್ಯೆ ಜಗಳವೂ ನಡೆದಿತ್ತು. ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
-
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications