2 ಕಡೆ ಪಾದಚಾರಿ ಸುರಂಗ ಮಾರ್ಗ ಯೋಜನೆ ಕೈಬಿಟ್ಟ ಮೆಟ್ರೋ ನಿಗಮ

ಬೆಂಗಳೂರು, ಮೇ 12: ನಗರದ ಎರಡು ಪ್ರತಿಷ್ಠಿತ ಮೆಟ್ರೋ ನಿಲ್ದಾಣದೆದುರು ಪಾದಚಾರಿ ಸುರಂಗ ಮಾರ್ಗ ನಿರ್ಮಿಸುವ ಕಾಮಗಾರಿಯನ್ನು ಕೈಬಿಟ್ಟು ಬದಲು ಸ್ಕೈವಾಕ್ ನಿರ್ಮಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ತುಮಕೂರು ರಸ್ತೆ ನಾಗಸಂದ್ರ ಹಾಗೂ ದಾಸರಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಇಳಿಯುವವರು ರಸ್ತೆ ನಡುವಿನ ಬ್ಯಾರಿಕೇಡ್ ಹತ್ತಿ ದಾಟುತ್ತಿದ್ದಾರೆ. ಕಳೆದ ವರ್ಷ ಪಾದಚಾರಿಯೊಬ್ಬರು ಹೋಗೆ ರಸ್ತೆ ದಾಟಲು ಹೋಗಿ ಅಪಘಾತಕ್ಕೀಡಾಗಿದ್ದರು. ಈ ಘಟನೆ ಬಳಿಕ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆ ದಾಟುವ ವ್ಯವಸ್ಥೆಯನ್ನು ಮಾಡಲು ಬಿಎಂಆರ್‌ಸಿಎಲ್ ಮುಂದಾಗಿತ್ತು.

ಮೊದಲು ಪಾದಚಾರಿ ಸುರಂಗ ಮಾರ್ಗವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿತ್ತು. ಬಳಿಕ ಇದೀಗ ಸುರಂಗ ಮಾರ್ಗದ ಬದಲು ಸ್ಕೈವಾಕ್ ನಿರ್ಮಾಣಕ್ಕೆ ಮುಂದಾಗಿದೆ.

BMRCL will construct skywalks instead of padestrian tunnel

ದಾಸರಹಳ್ಳಿ, ನಾಗಸಂದ್ರ ನಿಲ್ದಾಣಗಳಲ್ಲಿ ಪ್ರತಿದಿನ ದುಮಾರು 30 ಸಾವಿರ ಪ್ರಯಾಣಿಕರು ಬಳಕೆ ಮಾಡುತ್ತಿದ್ದಾರೆ. ಎರಡು ಪಾದಚಾರಿ ಮಾರ್ಗಗಳನ್ನು 12.44 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು.

ಪಾದಚಾರಿ ಸುರಂಗ ಮಾರ್ಗಕ್ಕಿಂತ ಸ್ಕೈವಾಕ್ ನಿರ್ಮಿಸುವುದು ಕಡಿಮೆ ವೆಚ್ಚದಾಯಕವೂ ಹೌದು ಸುರಕ್ಷತೆ ದೃಷ್ಟಿಯಿಂದಲೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಿಂದಿನಂತೆ ಸಿಮೆಂಟ್ ಸ್ಕೈವಾಕ್ ನಿರ್ಮಿಸುವ ಬದಲು ಕಬ್ಬಿಣದ ಹಲಗೆ ಆಧಾರ ಕಂಬಗಳನ್ನು ಜೋಡಿಸಿ ಬಿಬಿಎಂಪಿಯು ಸ್ಕೈವಾಕ್ ನಿರ್ಮಿಸುತ್ತಿದೆ ಅದೇ ಮಾದರಿಯಲ್ಲಿ ಬಿಎಂಆರ್‌ಸಿಎಲ್ ಕೂಡ ನಿರ್ಮಿಸಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+