ಬಿಜೆಪಿ ತೊರೆದು ಜೆಡಿಎಸ್ ಸೇರಿದ ನಟಿ ಅಮೂಲ್ಯ ಮಾವ
Recommended Video

ನಟಿ ಅಮೂಲ್ಯ ಮಾವ ಬಿಜೆಪಿ ನಾಯಕ ಜಿ ಎಚ್ ರಾಮಚಂದ್ರ ಜೆಡಿಎಸ್ ಪಾಲು | Oneindia Kannada
ಬೆಂಗಳೂರು, ಏಪ್ರಿಲ್ 13: ರಾಜರಾಜೇಶ್ವರಿ ನಗರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಜಿ.ಎಚ್.ರಾಮಚಂದ್ರ ಅವರು ಇಂದು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಎರಡು ದಶಕದಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ರಾಮಚಂದ್ರ ಅವರು ಜೆಡಿಎಸ್ ಸೆರ್ಪಡೆಗೊಂಡಿದ್ದು, ರಾಜರಾಜೇಶ್ವರಿನಗರದಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ.

ಚಿತ್ರ ನಟಿ ಅಮೂಲ್ಯ ಅವರ ಮಾವನವರಾಗಿರುವ ಜಿ.ಎಚ್.ರಾಮಚಂದ್ರ ಅವರು ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಹಾಗೂ ಈ ಬಾರಿ ರಾಜರಾಜೇಶ್ವರಿ ನಗರದಿಂದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಸಹ ಆಗಿದ್ದರು.
ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿರುವ ಕಾರಣ, ರಾಮಚಂದ್ರ ಅವರಿಗೇ ಜೆಡಿಎಸ್ ಸಿಗುವ ಸಾಧ್ಯತೆ ಇದೆ.












Click it and Unblock the Notifications