ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಕೊಲೆ ಆರೋಪಿ ಬಂಧನ
ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ(42) ಹತ್ಯೆಗೆ ಸುಪಾರಿ ನೀಡಿದ್ದ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಗೋವಿಂದೇಗೌಡ ಹಾಗೂ ಅವರ ಪತ್ನಿ ವರಮಹಾಲಕ್ಷ್ಮೀ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ನವೆಂಬರ್ 18: ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ(42) ಹತ್ಯೆಗೆ ಸುಪಾರಿ ನೀಡಿದ್ದ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಗೋವಿಂದೇಗೌಡ ಹಾಗೂ ಅವರ ಪತ್ನಿ ವರಮಹಾಲಕ್ಷ್ಮೀ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕತಿಮ್ಮೇಗೌಡ ಎಂಬುವವರು ನಾಗಣ್ಣ ಎಂಬುವರ ಜೊತೆ ದ್ವಿಚಕ್ರ ವಾಹನದಲ್ಲಿ ನವೆಂಬರ್ 8ರಂದು ಸುಂಕದಕಟ್ಟೆ, ಗಜಾನನಗರ, 2ನೇ ಮುಖ್ಯರಸ್ತೆಯ ಬಳಿ ಹೋಗುತ್ತಿದ್ದಾಗ, ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿದ್ದರು.[ಬೀದರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಬಲಿ]
ಈ ಬಗ್ಗೆ ಚಿಕ್ಕತಿಮ್ಮೇಗೌಡ ಅವರ ಭಾಮೈದ ರಾಜಶೇಖರ್ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿ ಮಾಜಿ ಕಾರ್ಪೊರೇಟರ್ ಗೊವಿಂದೇಗೌಡ ಅವರ ಮೇಲೆ ಆರೋಪ ಹೊರೆಸಿದ್ದರು."
ಈ ಪ್ರಕರಣದ ಆರೋಪಿಗಳನ್ನು ಪತ್ತೆಮಾಡಲು ಬೆಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರು ಮತ್ತು ಮಾನ್ಯ ಅಪರ ಪೊಲೀಸ್ ಆಯುಕ್ತರು, ಪಶ್ಚಿಮ ರವರ ನಿರ್ದೇಶನದಂತೆ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್,ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎಂ.ವೇಣುಗೋಪಾಲರವರ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಆರು ಪೊಲೀಸ್ ಇನ್ಸಪೆಕ್ಟರ್ಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ನೇಮಕ ಮಾಡಿದ್ದರು.[ರುದ್ರೇಶ್ ಹತ್ಯೆ : ಶೋಭಾ ವಿರುದ್ಧ ಮಾನನಷ್ಟ ಮೊಕದ್ದಮೆ]

ಬಂಧಿತರು:
* ವರಮಹಾಲಕ್ಷ್ಮೀ (47) C/o ಗೋವಿಂದೇಗೌಡ
* ಗೋವಿಂದೇಗೌಡ(58) ಬಿನ್ ಲೇಟ್.ಎಂ.ವಿ.ಬಚ್ಚಣ್ಣ
* ಮಣಿಕಂಠ ಕಚ್ಚಿನ್ಸ್ ಬಿನ್ ಸಿದ್ದರಾಜು
* ಹರೀಶ್.ಬಿ ಬಿನ್ ಬಾಬು.ಎಸ್
* ಮಣಿಕಂಠ ಯೋಗೇಶ್ ಬಿನ್ ಜಯರಾಂ
* ಸುರೇಶ ಆರ್ಎಕ್ಸ್ ಸೂರಿ ಬಿನ್ ತಿಮ್ಮಪ್ಪ,
* ಮ್ಯಾಥೂ.ಎ ಅಜೇಯ ಬಿನ್ ಅಲೆಕ್ಷಾಂಡರ್
* ಸನಾವುಲ್ಲಾ ಸನಾ ಬಿನ್ ಬಷೀರ್ಖಾನ್
* ಯುವರಾಜು ಯುವ ಬಿನ್ ಗಂಗಪ್ಪ,
ಘಟನೆ ಹಿನ್ನಲೆ: ಗೋವಿಂದೆಗೌಡ ಮತ್ತು ವರಮಹಾಲಕ್ಷ್ಮೀರವರು ಜೆ.ಡಿ.ಎಸ್. ಕಾರ್ಯಕರ್ತರಾಗಿದ್ದು, ಮೃತ. ಚಿಕ್ಕತಿಮ್ಮೇಗೌಡನು ಇವರಿಬ್ಬರ ಪರ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ.2015ರಲ್ಲಿ ನಡೆದ ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಚಿಕ್ಕತಿಮ್ಮೇಗೌಡನು ಬಿ.ಜೆ.ಪಿ.ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರಿಂದ ಆರೋಪಿ ವರಮಹಾಲಕ್ಷ್ಮೀರವರು ಚುನಾವಣೆಯಲ್ಲಿ ಪರಾಭವಗೊಂಡಿದ್ದರು.
ವರಮಹಾಲಕ್ಷ್ಮೀರವರ ಅಕ್ಕನ ಮಗ (ಸಾಕುಮಗ) ಸುರೇಶಕುಮಾರನು ಇವರಿಗೆ ಹಣಕಾಸಿನ ವ್ಯವಹಾರದಲ್ಲಿ ಸುಮಾರು ಕೋಟಿಯಷ್ಟು ಮೋಸಮಾಡಿ, ತಮ್ಮ ವಿರೋಧಿ ಚಿಕ್ಕತಿಮ್ಮೇಗೌಡನ ಜೊತೆ ಸೇರಿಕೊಂಡಿದ್ದರಿಂದ ಇವರಿಬ್ಬರು ಒಂದಾದರೆ ಮುಂದೆ ನಮ್ಮನ್ನು ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಮುಗಿಸಿಬಿಡುತ್ತಾರೆ ಎಂಬ ಜಿದ್ದಿನಿಂದ ಸುರೇಶ ಅಲಿಯಾಸ್ ಆರ್.ಎಕ್ಸ್ ಸೂರಿ ಹಾಗೂ ಇತರೆ ಆರೋಪಿಗಳಿಗೆ 30 ಲಕ್ಷ ರೂಪಾಯಿ ಸುಪಾರಿ ನೀಡಿ, ಕೊಲೆಗೆ ಮೊದಲು 5 ಲಕ್ಷ ಅಡ್ವಾನ್ಸ್ ನೀಡಿ ಕೊಲೆಯಾದ ನಂತರ 10 ಲಕ್ಷ ರೂಪಾಯಿಗಳನ್ನು ಕೊಟ್ಟಿರುವುದಾಗಿ ತಿಳಿದುಬಂದಿರುತ್ತದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications